ಪ.ಬಂಗಾಳ - ಒಡಿಶಾ ನಡುವೆ ಜಗನ್ನಾಥ ದೇಗುಲ ವಿವಾದ! ಏನಿದರ ಹಿನ್ನೆಲೆ?

Published : May 03, 2025, 06:11 AM ISTUpdated : May 03, 2025, 06:12 AM IST
ಪ.ಬಂಗಾಳ - ಒಡಿಶಾ ನಡುವೆ ಜಗನ್ನಾಥ ದೇಗುಲ ವಿವಾದ! ಏನಿದರ ಹಿನ್ನೆಲೆ?

ಸಾರಾಂಶ

ಏ.30ರಂದು ದಿಘಾದಲ್ಲಿ ಉದ್ಘಾಟನೆಯಾದ ಜಗನ್ನಾಥ ಮಂದಿರವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವೆ ವಿವಾದಕ್ಕೆ ಕಾರಣವಾಗಿದೆ. 250 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ದೇಗುಲಕ್ಕೆ ‘ಜಗನ್ನಾಥ ಧಾಮ’ ಎಂದು ಹೆಸರಿಡಲು ಬಂಗಾಳ ನಿರ್ಧರಿಸಿದ್ದೇ ಇದಕ್ಕೆ ಕಾರಣ.

ಕೋಲ್ಕತಾ: ಏ.30ರಂದು ದಿಘಾದಲ್ಲಿ ಉದ್ಘಾಟನೆಯಾದ ಜಗನ್ನಾಥ ಮಂದಿರವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಡುವೆ ವಿವಾದಕ್ಕೆ ಕಾರಣವಾಗಿದೆ. 250 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ದೇಗುಲಕ್ಕೆ ‘ಜಗನ್ನಾಥ ಧಾಮ’ ಎಂದು ಹೆಸರಿಡಲು ಬಂಗಾಳ ನಿರ್ಧರಿಸಿದ್ದೇ ಇದಕ್ಕೆ ಕಾರಣ.

ಒಡಿಶಾದ ಪುರಿಯಲ್ಲಿ ಜಗನ್ನಾಥ ದೇವಾಲಯವಿದೆ. ಈಗ ಬಂಗಾಳದ ದೇವಸ್ಥಾನಕ್ಕೂ ಅದೇ ಹೆಸರಿಡುವುದು ಗೊಂದಲಕ್ಕೆ ಎಡೆಮಾಡಿಕೊಡಬಹುದು ಎಂಬುದು ಒಂದು ಕಾರಣವಾದರೆ, ಹಿಂದೂ ಶಾಸ್ತ್ರದ ಪ್ರಕಾರ ಶಂಕರಾಚಾರ್ಯರು ಸ್ಥಾಪಿಸಿದ 4 ಯಾತ್ರಾ ಸ್ಥಳಗಳಿಗೆ ಮಾತ್ರವೇ ‘ಧಾಮ’ ಎಂದು ಕರೆಯಬಹುದು ಎಂಬುದು ಇನ್ನೊಂದು ವಾದ. ಅಂತೆಯೇ, ಪುರಿಯ ದೇವಾಲಯಕ್ಕೆ ಸಂಬಂಧಿಸಿದ ಚಿಹ್ನೆಗಳಾದ ನೀಲಚಕ್ರ ಮತ್ತು ಬನವನ್ನು ಹೋಲುವ ಚಿತ್ರವು ಬಂಗಾಳ ಸರ್ಕಾರ ಪ್ರಚಾರಕ್ಕೆ ಬಳಿಸಿರುವುದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ‘ಜಗನ್ನಾಥ ಧಾಮ ನೋಡಲು ಪುರಿಗೆ ಹೋಗಬೇಕೆಂದಿಲ್ಲ’ ಎಂದ ಘೋಷಣೆಗಳು ವಿವಾದವನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

ಅತ್ತ ಪುರಿ ದೇವಸ್ಥಾನದಲ್ಲಿ ಪ್ರಸಾದ ತಯಾರಿಸುವ ಹಾಗೂ ದೇವತೆಗಳನ್ನು ನಿತ್ಯ ಸಿಂಗರಿಸುವ ಸೇವಕರಿಗೆ ದಿಘಾ ಮಂದಿರಕ್ಕೆ ಹೋಗದಂತೆ ಸೂಚಿಸಲಾಗಿದೆ.

ಇದು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದ್ದು, ‘ಉದ್ಘಾಟನೆಯಾಗಿದ್ದು ದೇವಸ್ಥಾನವೇ ಅಥವಾ ಸಾಂಸ್ಕೃತಿಕ ಕೇಂದ್ರವೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್‌, ‘ಪ್ರಭು ಜಗನ್ನಾಥರ ಹೆಗಲೇರಿ ಸಿಎಂ ಮಮತಾ ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಪದ್ಮಶ್ರೀ ವಿಜೇತ ಮರಳು ಕಲಾಕಾರ ಸುದರ್ಶನ್‌ ಪಟ್ನಾಯಕ್‌, ‘ಇದರಿಂದ ಜಗನ್ನಾಥ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ’ ಎಂದಿದ್ದಾರೆ.

ಕೆಲ ವರ್ಷಗಳ ಹಿಂದೆ ಉಭಯ ರಾಜ್ಯಗಳ ನಡುವೆ ರಸಗುಲ್ಲಾ ಮೂಲದ ಕುರಿತು ವಿವಾದವಾಗಿದ್ದು, ಅದರಲ್ಲಿ ಬಂಗಾಳ ಮೇಲುಗೈ ಸಾಧಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ