ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ!

Published : Jun 27, 2022, 08:53 AM ISTUpdated : Jun 27, 2022, 09:00 AM IST
ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ!

ಸಾರಾಂಶ

* ಬಂಡಾಯ ಶಾಸಕರ ಪತ್ನಿಯರಿಗೆ ಸಿಎಂ ಪತ್ನಿ ರಶ್ಮಿ ದೂರವಾಣಿ ಕರೆ * ಪತಿ ಉದ್ಧವ್‌ ಸರ್ಕಾರ ಉಳಿಸಲು ಕಣಕ್ಕಿಳಿದ ಪತ್ನಿ

ಮುಂಬೈ(ಜೂ.27): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದ ಹಿನ್ನೆಲೆಯಲ್ಲಿ ಇದೀಗ ಸ್ವತಃ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಪತ್ನಿ ರಶ್ನಿ, ಸರ್ಕಾರ ಉಳಿಸಲು ಕಣಕ್ಕಿಳಿದಿದ್ದಾರೆ. ರಶ್ಮಿ ಠಾಕ್ರೆ ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ಪತ್ನಿಯರಿಗೆ ಕರೆ ಮಾಡಿದ್ದು, ಸರ್ಕಾರ ಉಳಿಸಲು ಬೆಂಬಲ ನೀಡುವ ಕುರಿತು ತಮ್ಮ ಪತಿಯೊಂದಿಗೆ ಅವರ ಮಾತನಾಡುವಂತೆ ಮನವೊಲಿಕೆ ಯತ್ನ ಮಾಡಿದ್ದಾರೆ.

ಶಿಂಧೆ ಬಣಕ್ಕೆ ಮತ್ತಷ್ಟು ಬಲ: ಸಂಜಯ್‌ ರಾವುತ್‌ ಸೋದರನಿಂದಲೂ ಬಂಡಾಯ?

ಬಂಡಾಯ ನಾಯಕರು ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯ ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ್ದು, ಎಂಎಲ್‌ಸಿ ಚುನಾವಣಾ ಫಲಿತಾಂಶದ ನಂತರ ಶಾಸಕರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಇನ್ನಷ್ಟುಶಾಸಕರು, ಸ್ವತಂತ್ರ್ಯ ಅಭ್ಯರ್ಥಿಗಳು ಬಂಡಾಯ ಶಾಸಕರ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಉದ್ಧವ್‌ ಪತ್ನಿ ರಶ್ಮಿ ಠಾಕ್ರೆ ತಾವೇ ಶಾಸಕರ ಪತ್ನಿಯರಿಗೆ ಕರೆ ಮಾಡಿದ್ದಾರೆ. ತಮ್ಮ ತಮ್ಮ ಪತಿಯಂದಿರ ಜೊತೆಗೆ ಸರ್ಕಾರ ಉಳಿಸಲು ಬೆಂಬಲ ನೀಡುವ ಕುರಿತು ಮಾತನಾಡುವಂತೆ ಅವರ ಮನವೊಲಿಸಿದ್ದಾರೆ.

ಉದ್ಧವ್‌ ಜೊತೆ 20 ಬಂಡಾಯ ಶಾಸಕರ ಸಂಪರ್ಕ?

 ಏಕನಾಥ್‌ ಶಿಂಧೆ ಜೊತೆಯಲ್ಲಿ ಗುವಾಹಟಿಯಲ್ಲಿರುವ 39 ಬಂಡಾಯ ಶಾಸಕರ ಪೈಕಿ 20 ಜನರು, ಉದ್ಧವ್‌ ಬಣಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದು ಈಗಾಗಲೇ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಸೇನೆಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಪ್ರಸ್ತಾಪಕ್ಕೆ ವಿರೋಧ ಹೊಂದಿರುವ ಶಾಸಕರು ಉದ್ಧವ್‌ ಜೊತೆ ಸಂಪರ್ಕದಲ್ಲಿದ್ದಾರೆ.

ಗುವಾಹಟಿಯಿಂದ 40 ಶಾಸಕರ ಶವ ತಲುಪುತ್ತೆ: ಬಂಡಾಯವೆದ್ದವರಿಗೆ ಶಿವಸೇನೆ ನಾಯಕನ ಬಹಿರಂಗ ಬೆದರಿಕೆ!

ಶಿಂಧೆ ಬಣಕ್ಕೆ ಮತ್ತಷ್ಟು ಬಲ

 

ಬಂಡಾಯ ಹತ್ತಿಕ್ಕಲು ಯತ್ನಿಸುತ್ತಿರುವ ಶಿವಸೇನೆಗೆ ಮತ್ತಷ್ಟುಆಘಾತವಾಗಿದೆ. ಪಕ್ಷದ ಮತ್ತೋರ್ವ ಶಾಸಕ, ಸಚಿವ ಉದಯ್‌ ಸಾವಂತ್‌ ಉದ್ಧವ್‌ ಬಣ ಬಿಟ್ಟು ಭಾನುವಾರ ಬಂಡಾಯ ಬಣ ಸೇರಿಕೊಂಡಿದ್ದಾರೆ. ಇದರೊಂದಿಗೆ ಮಹಾ ಆಘಾಡಿ ಸರ್ಕಾರದ 8ನೇ ಸಚಿವ ಬಂಡಾಯ ಬಣಕ್ಕೆ ಜಿಗಿದಂತಾಗಿದೆ.

ಸಾವಂತ್‌ ವಿಶೇಷ ವಿಮಾನದಲ್ಲಿ ಭಾನುವಾರ ಮುಂಬೈನಿಂದ ಅಸ್ಸಾಂ ರಾಜಧಾನಿ ಗುವಾಹಟಿಗೆ ಆಗಮಿಸಿದರು. ಇದರೊಂದಿಗೆ ಶಿವಸೇನೆಯ 56 ಶಾಸಕರ ಪೈಕಿ 39 ಜನರು ಶಿಂಧೆ ಬಣಕ್ಕೆ ಬಂದಂತೆ ಆಗಿದೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಬಂಡಾಯದ ವಿರುದ್ಧ ಭಾರೀ ಆಕ್ರೋಶದ ಮಾತುಗಳನ್ನು ಆಡುತ್ತಿರುವ ಶಿವಸೇನೆ ಹಿರಿಯ ನಾಯಕ ಸಂಜಯ್‌ ರಾವುತ್‌ ಅವರ ಸೋದರ, ಶಾಸಕ ಸುನಿಲ್‌ ರಾವುತ್‌ ಕೂಡಾ ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಖಚಿತಪಟ್ಟರೆ ಉದ್ಧವ್‌ ಮತ್ತು ರಾವುತ್‌ಗೆ ಭಾರೀ ಮುಖಭಂಗವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!