83 ವರ್ಷದ ವೃದ್ಧನ ಹತ್ತಿರ 2 ಲಕ್ಷ ಲಂಚ ತೆಗೆದುಕೊಂಡ ಕಾರ್ಪೋರೇಷನ್ ಆಫೀಸರ್ ಅಮಾನತು

Published : Oct 06, 2024, 12:22 PM IST
83 ವರ್ಷದ ವೃದ್ಧನ ಹತ್ತಿರ 2 ಲಕ್ಷ ಲಂಚ ತೆಗೆದುಕೊಂಡ ಕಾರ್ಪೋರೇಷನ್ ಆಫೀಸರ್ ಅಮಾನತು

ಸಾರಾಂಶ

ಮಾಜಿ ಡೆಪ್ಯೂಟಿ ಸ್ಪೀಕರ್ ಅಳಿಯನಿಂದ ನಗರಸಭೆ ಅಧಿಕಾರಿ 2 ಲಕ್ಷ ರೂಪಾಯಿ ಲಂಚ ಪಡೆದಿರೋದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ತಿರುವನಂತಪುರಂ: ಆಕ್ಯುಪೆನ್ಸಿ ಸರ್ಟಿಫಿಕೇಟ್‌ಗಾಗಿ 83 ವರ್ಷದ ವೃದ್ಧರಿಂದ ಎರಡು ಲಕ್ಷ ರೂಪಾಯಿ ಲಂಚ ಪಡೆದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತಿರುವನಂತಪುರಂ ನಗರಸಭೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ ಶಿಬು ಕೆ.ಎಂ. ಅಮಾನತುಗೊಂಡ ಅಧಿಕಾರಿ. ಮಾಜಿ ಡೆಪ್ಯೂಟಿ ಸ್ಪೀಕರ್ ನಫೀಸತ್ ಬೀವಿ ಎಂಬವರ ಸಂಬಂಧಿ ಬಳಿಯಿಂದ ಶಿಬು 2 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದರು. ಶಿಬು ಕೆಎಂ,  ಆಟ್ಟಿಪ್ರಾ ವಲಯ ಕಚೇರಿಯಲ್ಲಿ ಚಾರ್ಜ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದನು. ನಗರಸಭೆ ಡೆಪ್ಯೂಟಿ ಕಾರ್ಪೊರೇಷನ್ ಕಾರ್ಯದರ್ಶಿಯ ತನಿಖಾ ವರದಿಯ ಆಧಾರದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ. 

ಶಿಬು ಕೆಎಂ ವಿರುದ್ಧ ಎಂ.ಸೈನುದ್ದೀನ್  ಎಂಬವರು ದೂರು ಸಲ್ಲಿಸಿದ್ದರು. ಎಂ.ಸೈನುದ್ದೀನ್ ಅವರ ಮಡದಿ ಡಾ.ಆರಿಫಾ ಸೈನುದ್ದೀನ್ ಅವರು  ಮಾಜಿ ಡೆಪ್ಯೂಟಿ ಸ್ಪೀಕರ್ ನಫೀಸತ್ ಬೀವಿಯವರ ಪುತ್ರಿಯಾಗಿದ್ದಾರೆ. ಆರಿಫಾ ಹೆಸರಿನಲ್ಲಿರುವ ಕಟ್ಟಡದ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲು ಶಿಬು 2 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದರು. ಲಂಚ ಪಡೆದುಕೊಂಡಿರುವ ಬಗ್ಗೆ ಎಂ.ಸೈನುದ್ದೀನ್ ದೂರು ದಾಖಲಿಸಿದ್ದರು. 

ಲಂಚದ ಹಣ ಕಮೋಡ್‌ಗೆ ಹಾಕಿ ಫ್ಲಶ್‌ ಮಾಡಿದ ಅಧಿಕಾರಿ : ಟಾಯ್ಲೆಟ್ ಹೊಂಡದಿಂದ 57 ಸಾವಿರ ತೆಗೆದ ಎಸಿಬಿ

ಲಂಚ ನೀಡಿ ತಿಂಗಳುಗಳು ಕಳೆದರೂ ಎಂ.ಸೈನುದ್ದೀನ್ ಅವರಿಗೆ ಕಟ್ಟಡದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ತಿಂಗಳುಗಳ ನಂತರ ಕಾರ್ಪೊರೇಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ಪ್ರಮಾಣಪತ್ರ ನೀಡಲಾಗಿದ್ದು, ಲಂಚ ಪಡೆದಿರುವ ವಿಷಯ ಬೆಳಕಿಗೆ ಬಂದಿದೆ. ನಂತರ  ಸೆಪ್ಟೆಂಬರ್ 30 ರಂದು ಮೇಯರ್ ಮತ್ತು ಉಪ ಮೇಯರ್‌ಗೆ ದೂರು ನೀಡಲಾಗಿತ್ತು.  ಡೆಪ್ಯೂಟಿ ಕಾರ್ಪೊರೇಷನ್ ಕಾರ್ಯದರ್ಶಿ ನಡೆಸಿದ ತನಿಖೆಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಶಿಬು ಅರ್ಜಿದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಂಬಂಧವಿಲ್ಲದ ಫೈಲ್‌ಗಳನ್ನು ಸಹ ಕೇಳಿ ಪಡೆದುಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 

ಲಂಚ ಪಡೆದ ಆರೋಪವನ್ನು ಶಿಬು ಕೆ.ಎಂ. ನಿರಾಕರಿಸಿದ್ದಾರೆ. ಅಧಿಕಾರಿಯಿಂದ ಗಂಭೀರ ಚ್ಯುತಿ ಮತ್ತು ಶಿಸ್ತು ಉಲ್ಲಂಘನೆ ಮತ್ತು ಕರ್ತವ್ಯ ಲೋಪವಾಗಿದೆ ಎಂಬ ತನಿಖಾ ವರದಿಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ಪ್ರಸ್ತುತ ಆಟ್ಟಿಪ್ರಾ ವಲಯ ಕಚೇರಿಯಲ್ಲಿ ಚಾರ್ಜ್ ಆಫೀಸರ್ ಆಗಿ ಶಿಬು ಕೆ.ಎಂ. ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಗೆ 1.5 ಕೋಟಿ ರೂ. ವಂಚಿಸಿದ 5 ಜಿಎಸ್‌ಟಿ ಅಧಿಕಾರಿಗಳು ಬಂಧನ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?