
ತಿರುಪತಿ (ಜೂ.4): ಮೇ ಒಂದೇ ತಿಂಗಳಲ್ಲಿ 1.2 ಕೋಟಿಗೂ ತಿರುಪತಿ ವೆಂಕಟೇಶ್ವರ ದೇಗುಲ(Tirupati venkateshwar temple)ದ ಪ್ರಸಿದ್ಧ ಲಡ್ಡು ಮಾರಾಟವಾಗಿವೆ. ಇದು ಈವರೆಗಿನ ಅತಿ ಹೆಚ್ಚು ಮಾಸಿಕ ಮಾರಾಟದ ದಾಖಲೆ. ಇದು 2024 ಮತ್ತು 2025ರಲ್ಲಿ ಕ್ರಮವಾಗಿ 1.01 ಕೋಟಿ ಮತ್ತು 1.1 ಕೋಟಿ ಮಾರಾಟದ ದಾಖಲೆ ಹಿಂದಿಕ್ಕಿದೆ.
ಹೈದರಾಬಾದ್: ಟಿಟಿಡಿ(TTD) ತುಪ್ಪ ಕಲಬೆರಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ, (ಇ.ಡಿ.), ಬುಧವಾರ ಡೆಹ್ರಾಡೂನ್, ದೆಹಲಿ, ತಮಿಳುನಾಡಿನ ದಿಂಡಿಗಲ್, ಆಂಧ್ರಪ್ರದೇಶದ ಗುಂಟೂರು ಮತ್ತು ಮುಂಬೈ ಸೇರಿದಂತೆ 15 ಸ್ಥಳಗಳಲ್ಲಿ ಶೋಧ ನಡೆಸಿದೆ ಹಾಗೂ 60 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.
ದಿಂಡಿಗಲ್ನಲ್ಲಿರುವ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ಅಹಲ್ಯಾನಗರದ ಮಾಲ್ಗಂಗಾ ಮಿಲ್ಕ್ ಆ್ಯಂಡ್ ಆಗ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೂರ್ಕಿಯಲ್ಲಿರುವ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರ ವಸತಿ ಮತ್ತು ಕಚೇರಿ ಆವರಣದಲ್ಲಿ ಶೋಧ ನಡೆಸಲಾಗಿದೆ.
ನಕಲಿ ತುಪ್ಪ ಮಾರಿದ್ದರಿಂದ ಬಂದ ಅಕ್ರಮ ಆದಾಯದ ಹರಿದಾಟದ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ