ದೇವರಿಗೆ ದಾರಿ ನೀಡಲು ವಿಮಾನ ಹಾರಾಟ ನಿಲ್ಲಿಸಿದ ಕೇರಳದ ಏರ್‌ಪೋರ್ಟ್‌

Published : Apr 16, 2022, 12:09 AM IST
ದೇವರಿಗೆ ದಾರಿ ನೀಡಲು ವಿಮಾನ ಹಾರಾಟ ನಿಲ್ಲಿಸಿದ ಕೇರಳದ ಏರ್‌ಪೋರ್ಟ್‌

ಸಾರಾಂಶ

ಏರ್‌ಪೋರ್ಟ್‌ ರನ್‌ವೇ ಮೂಲಕ ಸಾಗುವ ಅರಾಟ್ಟು ಮೆರವಣಿಗೆ ಪದ್ಮನಾಭ ಸ್ವಾಮಿ ದೇವಸ್ಥಾನದಿಂದ ಶಂಮುಕಂ ಬೀಚ್‌ಗೆ ತೆರಳುವ ಮೆರವಣಿಗೆ ದೇವರಿಗೆ ದಾರಿ ನೀಡಲು ವಿಮಾನ ಹಾರಾಟ ಸ್ಥಗಿತ

ತಿರುವನಂತಪುರಂ: ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಿದ ಘಟನೆ ನಡೆಯಿತು. ಪ್ರತಿವರ್ಷ ಎರಡು ಬಾರಿ ಕೇರಳದ ಈ ವಿಮಾನ ನಿಲ್ದಾಣದ ರನ್‌ವೇ ಮೂಲಕ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ (Sree Padmanabhaswamy Temple) 'ಅರಾಟ್ಟು' ಮೆರವಣಿಗೆಯು ಶಂಖುಮುಕಂ ಬೀಚ್‌ಗೆ (Shankhumukam beach) ಹೋಗುತ್ತದೆ. ಹೀಗಾಗಿ ಈ ಸಮಯದಲ್ಲಿ ತಿರುವನಂತಪುರಂನಲ್ಲಿ (Thiruvananthapuram) ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಕೆಲವು ಗಂಟೆಗಳ ಕಾಲ ಸಂಪೂರ್ಣ ಸ್ಥಗಿತಗೊಳ್ಳುತ್ತವೆ.

ದಶಕಗಳ ಹಿಂದಿನ ಆಚರಣೆಗಳನ್ನು ಕಟ್ಟುನಿಟ್ಟಾಗಿ ಇಂದಿಗೂ ಅನುಸರಿಸಿಕೊಂಡು ಬರಲಾಗುತ್ತಿದ್ದು, ಹಾಗೆಯೇ ಬುಧವಾರವೂ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದ ಮುಖ್ಯ ರನ್‌ವೇಯನ್ನು ದೇವಾಲಯದ ಮೆರವಣಿಗೆ ಹಾದು ಹೋಗಲು  ಕೆಲವು ಗಂಟೆಗಳ ಕಾಲ ಮುಚ್ಚಲಾಗಿತ್ತು.

ಪ್ರತಿ ವರ್ಷ ಎರಡು ಬಾರಿ, ತಿರುವನಂತಪುರಂನಲ್ಲಿರುವ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಕೆಲವು ಗಂಟೆಗಳ ಕಾಲ ಸಂಪೂರ್ಣ ಸ್ಥಗಿತಗೊಳ್ಳುತ್ತವೆ. ಏಕೆಂದರೆ ರಾಜ್ಯ ರಾಜಧಾನಿಯಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ 'ಅರಾಟ್ಟು' (ಧರ್ಮಾಚರಣೆಯ ಸ್ನಾನ) ಮೆರವಣಿಗೆಯು ರನ್‌ವೇ ಮೂಲಕ ಶಂಖುಮುಕಮ್ ಬೀಚ್‌ಗೆ ಸಾಗುತ್ತದೆ. ತಿರುವಾಂಕೂರಿನ ಕೊನೆಯ ರಾಜ ಚಿತ್ತಿರ ತಿರುನಾಳ್ ಬಾಲ ರಾಮ ವರ್ಮನ ಆಳ್ವಿಕೆಯ ಕಾಲದಿಂದಲೂ ಪೈನ್‌ಕುಣಿ ಮತ್ತು ಅಲ್ಪಸ್ಸಿಯ ದೇವಾಲಯದ ಉತ್ಸವಗಳಲ್ಲಿ ಈ ಆಚರಣೆಯು ನಡೆದುಕೊಂಡು ಬಂದಿದೆ.

ವಿಗ್‌ ಹಾಕಿ ಬಂದವ ಏರ್‌ಪೋರ್ಟ್‌ನಲ್ಲಿ ಅಂದರ್‌

ಇಲ್ಲಿ ವಿಮಾನ ನಿಲ್ದಾಣದ ಆರಂಭಕ್ಕೂ ಮೊದಲು, ಇದು 'ಅರಟ್ಟು' ಮೆರವಣಿಗೆಗಾಗಿ ದೇವಾಲಯದ ಅಧಿಕಾರಿಗಳು ಅನುಸರಿಸಿದ ಸಾಂಪ್ರದಾಯಿಕ ಮಾರ್ಗವಾಗಿತ್ತು. ಶಂಖುಮುಖಂ ಕಡಲತೀರದಲ್ಲಿ ಧಾರ್ಮಿಕ ಸ್ನಾನಕ್ಕಾಗಿ ದೇವಸ್ಥಾನದ ದೇವರನ್ನು ನೂರಾರು ಜನರು, ಆನೆಗಳು, ಡ್ರಮ್‌ಗಳು ಮತ್ತು ತಾಳಗಳೊಂದಿಗೆ 'ಗರುಡ ವಾಹನ'ದಲ್ಲಿ ಕೊಂಡೊಯ್ಯಲಾಗುತ್ತದೆ. ಸ್ನಾನದ ನಂತರ, ಮೆರವಣಿಗೆಯು ಅದೇ ರನ್‌ವೇ ಮೂಲಕ ದೇವಸ್ಥಾನಕ್ಕೆ ಹಿಂತಿರುಗುತ್ತದೆ. ಪ್ರತಿ ವರ್ಷದಂತೆ ಹಿಂದಿನ ತಿರುವಾಂಕೂರು ರಾಜಮನೆತನದ ಸದಸ್ಯರು ಈ ಬಾರಿ ಸಾಂಪ್ರದಾಯಿಕ ಪಂಜುಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.

ಪ್ರತಿ ವರ್ಷ ಮೆರವಣಿಗೆಗೆ ಮುಂಚಿತವಾಗಿ NOTAM (ಏರ್‌ಮೆನ್‌ಗಳಿಗೆ ಸೂಚನೆ) ನೀಡಲಾಗುತ್ತದೆ. ಇದು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ವೇಳಾಪಟ್ಟಿಯನ್ನು ಅದಕ್ಕೆ ಅನುಗುಣವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರತಿ ವರ್ಷ ನಡೆಯುತ್ತಿದೆ. ಈ ಅವಧಿಯಲ್ಲಿ ವಿಮಾನಗಳನ್ನು ಯಾವಾಗಲೂ ಮರು-ನಿಗದಿಪಡಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇಂಗ್ಲೆಂಡ್‌ನ ಹಿರಿಯ ಮಾನವಶಾಸ್ತ್ರಜ್ಞನ ವಾಪಸ್ ಕಳಿಸಿದ ತಿರುವನಂತಪುರಂ ಏರ್‌ಪೋರ್ಟ್‌ ಸಿಬ್ಬಂದಿ
ಹಾಗೆಯೇ ಬುಧವಾರ, ಅಧಿಕಾರಿಗಳು ಮತ್ತೊಮ್ಮೆ ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ಮೆರವಣಿಗೆ ಹಾದು ಹೋಗಲು 4 ರಿಂದ 9 ರವರೆಗೆ ರನ್‌ವೇಯನ್ನು ಮುಚ್ಚಲಾಗುವುದು ಎಂದು ಹೇಳಿದರು. ಏರ್ ಇಂಡಿಯಾ (Air India), ಇಂಡಿಗೋ (IndiGo) ಮತ್ತು ಜೆಟ್ ಏರ್‌ವೇಸ್‌ನಂತಹ (Jet Airways)ವಿಮಾನಯಾನ ಸಂಸ್ಥೆಗಳು ಈಗಾಗಲೇ ತಮ್ಮ ವೇಳಾಪಟ್ಟಿಯನ್ನು ಮರು ಹೊಂದಿಸಿವೆ ಎಂದು ಹೇಳಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಜನರು ಆವರಣವನ್ನು ಪ್ರವೇಶಿಸಲು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ವಿಶೇಷ ಪಾಸ್‌ಗಳನ್ನು ತೆಗೆದುಕೊಳ್ಳಬೇಕು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು