
ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಉರುಳಿಸಲು ಡಿಎಂಕೆ ಮಹಾಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಲಾಗಿದೆ. 15 ಶಾಸಕರಿಗೆ 35 ಕೋಟಿ ರೂ. ಆಮಿಷವೊಡ್ಡಿ ರಾಜೀನಾಮೆ ಕೊಡಿಸಲು ಯತ್ನಿಸಲಾಗಿದ್ದು, ಈ ಸಂಬಂಧ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ.
ವಿಜಯ ಸರ್ಕಾರ ಪತನ ಆಗಬಹುದು. ಟಿವಿಕೆ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಹೀಗಾಗಿ ಡಿಎಂಕೆ ಕಾರ್ಯಕರ್ತರು ಚುನಾವಣೆ ಸಿದ್ಧವಾಗಬೇಕು. 2029ರ ಲೋಕಸಭೆ ವೇಳೆ ವಿಧಾನಸಭೆ ಚುನಾವಣೆ ಆಗಬಹುದು. ಈಗ ಮತ್ತೆ ಚುನಾವಣೆ ನಡೆದಿದ್ರೆ ಡಿಎಂಕೆ ಸರ್ಕಾರ ರಚಿಸುತ್ತದೆ. ತಮಿಳುನಾಡಿನಲ್ಲಿ ಸೂರ್ಯ ಎಂದಿಗೂ ಮುಳುಗಲು ಸಾಧ್ಯವಿಲ್ಲ