
ಲಖನೌ(ಫೆ.17): ದೇವರಿಗೆ ಸಾವಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ದೇವರಿಗೂ ಸಾವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಕರಣವೊಂದು ಉತ್ತರಪ್ರದೇಶ ಲಖನೌ ಜಿಲ್ಲೆಯ ಮೋಹನ್ಲಾಲ್ ಗಂಜಿ ನಗರದಲ್ಲಿ ನಡೆದಿದೆ.
ನಗರದಲ್ಲಿ 100 ವರ್ಷಗಳ ಇತಿಹಾಸ ಇರುವ ಕೃಷ್ಣ-ರಾಮ ದೇಗುಲದ ಹೆಸರಿನಲ್ಲಿ ಜಮೀನು ಇತ್ತು. ಕೆಲ ದಶಕಗಳ ಹಿಂದೆ ‘ಕೃಷ್ಣರಾಮ್’ ಸತ್ತಿದ್ದಾರೆ ಎಂದು ಉಲ್ಲೇಖಿಸಿ ಗಯಾ ಪ್ರಸಾದ್ ಎಂಬವರಿಗೆ ಆ ಜಮೀನು ವರ್ಗಾವಣೆಯಾಗಿದೆ. ಗಯಾಪ್ರಸಾದ್ ಮರಣದ ನಂತರ ಆ ಭೂಮಿ ಅವರ ಇಬ್ಬರು ಸಹೋದರರಿಗೆ ಹಂಚಿಕೆಯಾಗಿದೆ.
ಗಂಡ ಬೇಕು ಎಂದು ದೇವರಿಗೆ ಬರೆದ ಪತ್ರ ವೈರಲ್
ಇತ್ತೀಚೆಗೆ ದೇವಸ್ಥಾನದ ಟ್ರಸ್ಟಿಗಳ ದೂರಿನ ಅನ್ವಯ ತನಿಖೆ ನಡೆಸಿದಾಗ ಕೃಷ್ಣ-ರಾಮ ಎಂಬ ದೇವರ ಹೆಸರನ್ನು ಮನುಷ್ಯರ ಹೆಸರೆಂದು ಬಿಂಬಿಸಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದ ಅಚ್ಚರಿಯ ವಿಷಯ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ