ಮೇಕೆ​ದಾ​ಟು, ಕಾವೇರಿ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ದೂರು

Sujatha NR   | Asianet News
Published : Jun 18, 2021, 10:36 AM ISTUpdated : Jun 18, 2021, 10:59 AM IST
ಮೇಕೆ​ದಾ​ಟು, ಕಾವೇರಿ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್‌ ದೂರು

ಸಾರಾಂಶ

ಕರ್ನಾ​ಟ​ಕದ ಮಹ​ತ್ವಾ​ಕಾಂಕ್ಷೆಯ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆ ವಿರುದ್ಧ ದೂರು ತಮಿ​ಳು​ನಾಡು ರಾಜ್ಯದಿಂದ ಕೇಂದ್ರ ಸರ್ಕಾ​ರಕ್ಕೆ ದೂರು   ಮೋದಿ ಅವ​ರನ್ನು ಭೇಟಿ ಮಾಡಿ​ರುವ ತಮಿ​ಳು​ನಾಡು ಮುಖ್ಯ​ಮಂತ್ರಿ ಎಂ.ಕೆ ಸ್ಟಾಲಿನ್‌

ನವ​ದೆ​ಹ​ಲಿ (ಜೂ.18): ಬೆಂಗ​ಳೂರು, ರಾಮ​ನ​ಗರ ಸೇರಿ ಇನ್ನಿ​ತರ ಪ್ರದೇ​ಶ​ಗ​ಳಿಗೆ ಕುಡಿ​ಯುವ ನೀರು ಪೂರೈ​ಸಬ​ಹು​ದಾದ ಕರ್ನಾ​ಟ​ಕದ ಮಹ​ತ್ವಾ​ಕಾಂಕ್ಷೆಯ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆ ವಿರುದ್ಧ ನೆರೆಯ ತಮಿ​ಳು​ನಾಡು ರಾಜ್ಯ ಕೇಂದ್ರ ಸರ್ಕಾ​ರಕ್ಕೆ ದೂರು ಸಲ್ಲಿ​ಸಿದೆ. 

ಗುರು​ವಾರ ದಿಲ್ಲಿಯ ಪ್ರಧಾನಿ ನರೇಂದ್ರ ಮೋದಿ ನಿವಾ​ಸ​ದಲ್ಲಿ ಮೋದಿ ಅವ​ರನ್ನು ಭೇಟಿ ಮಾಡಿ​ರುವ ತಮಿ​ಳು​ನಾಡು ಮುಖ್ಯ​ಮಂತ್ರಿ ಎಂ.ಕೆ ಸ್ಟಾಲಿನ್‌ ಅವರು, ಕರ್ನಾ​ಟ​ಕದ ಮೇಕೆ​ದಾಟು ಅಣೆ​ಕಟ್ಟು ಯೋಜ​ನೆಗೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ.

ಮೇಕೆದಾಟು; ಕಾನೂನು ಹೋರಾಟ ಮತ್ತು ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಅಲ್ಲದೆ ಪ್ರಸಕ್ತ ವರ್ಷ ಕರ್ನಾಟಕದಿಂದ ತಮಿಳ್ನಾಡಿಗೆ ಬಿಡುಗಡೆಯಾಗಬೇಕಿರುವ ಕಾವೇರಿ ನದಿ ನೀರಿನ ಪೂರ್ಣ ಹಂಚಿಕೆಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಸ್ವತಃ ಟ್ವೀಟ್‌ ಮಾಡಿ​ರುವ ಎಂ.ಕೆ ಸ್ಟಾಲಿನ್‌ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಭೇಟಿಯಾಗಿ ತಮಿ​ಳು​ನಾ​ಡಿ​ನ ಉದ್ಯೋಗ, ಜಲ ಸಂಪ​ನ್ಮೂ​ಲ, ಶಿಕ್ಷಣ, ಆರೋಗ್ಯ, ಕೈಗಾ​ರಿ​ಕೋ​ದ್ಯ​ಮ ಸೇರಿ​ದಂತೆ ರಾಜ್ಯದ ಹಲವು ಬೇಡಿ​ಕೆ​ಗ​ಳನ್ನು ಸಲ್ಲಿ​ಸಿ​ದ್ದೇನೆ. ಜೊತೆಗೆ ನೀಟ್‌, ಸಿಎಎ ಸೇರಿ​ದಂತೆ ಇನ್ನಿತರ ವಿಚಾ​ರ​ಗಳ ಕುರಿ​ತಾ​ಗಿಯೂ ಮೋದಿ ಅವರ ಬಳಿ ಮಾತು​ಕತೆ ನಡೆ​ಸಿ​ದ್ದಾ​ಗಿ’ ತಿಳಿ​ಸಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಮೇಕೆ​ದಾಟು ಯೋಜ​ನೆ ಮತ್ತಷ್ಟುವಿಳಂಬ​ವಾ​ಗುವ ಸಾಧ್ಯತೆ ಎದು​ರಾ​ಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?