ಅಕ್ರಮ ಒತ್ತುವರಿಗೆ ಬುಲ್ಡೋಜರ್ ಕ್ರಮ ಸರಿ ಎಂದ ಸುಪ್ರೀಂ ಕೋರ್ಟ್, ಸರ್ಕಾರ ನಡೆ ಕುರಿತು ಮಹತ್ವದ ಆದೇಶ

Published : Jul 16, 2026, 06:49 PM IST
supreme court

ಸಾರಾಂಶ

ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಭ್ರಷ್ಟಾಚಾರ ಮೂಲಕ ನಿಯಮ ಉಲ್ಲಂಘಿಸುವ ವಿರುದ್ಧ ಬುಲ್ಡೋಜರ್ ಕ್ರಮ ಎಂದು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರ ಅನಿವಾರ್ಯ ಎಂದಿದೆ. ಇದೇ ವೇಳೆ ಜಾಮೀಯಾ ಉಲೇಮಾ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.

ನವದೆಹಲಿ (ಜು.16) ಸರ್ಕಾರ ಕೈಗೊಳ್ಳುತ್ತಿರುವ ಬುಲ್ಡೋಜರ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಜಾಮೀಯಾ ಉಲೇಮಾ, ಸಿಪಿಎಂ ನಾಯಕಿ ಬೃಂದಾ ಕಾರಟ್‌ಗೆ ತೀವ್ರ ಹಿನ್ನಡೆಯಾಗಿದೆ. ಅಧಿಕಾರಶಾಹಿ, ಅಕ್ರಮ ಒತ್ತುವರಿದಾರರ ಭ್ರಷ್ಟಾಚಾರ ಕಡಿವಾಣ ಹಾಕಲು ಬುಲ್ಡೋಜರ್ ಕ್ರಮ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಬುಲ್ಡೋಜರ್ ಮೂಲಕ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದೇ ಸರ್ಕಾರದ ನ್ಯಾಯಂಗ ನಿಂದನೆ ಮಾಡಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ನೇರವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ನಿರಾಕರಿಸಿದ್ದು, ಎಲ್ಲಾ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಿದೆ.

ಮಸೀದಿ ಕೆಡವಿದ ನಿರ್ಧಾರದ ವಿರುದ್ದ ಅರ್ಜಿ

ಇತ್ತೀಚೆಗೆ ಗುಜರಾತ್‌ನ ಸೋಮನಾಥದ್ಲಿನ ಕೆಲ ಮಸೀದಿಗಳನ್ನು ಸರ್ಕಾರ ಬುಲ್ಡೋಜರ್ ಬಳಸಿ ಕೆಡವಲಾಗಿತ್ತು. ಅಕ್ರಮವಾಗಿ ನಿರ್ಮಾಣಗೊಂಡಿದ್ದ ಮಸೀದಿಗಳನ್ನು ಸರ್ಕಾರ ತೆರವುಗೊಳಿಸಿತ್ತು. ಸರ್ಕಾರದ ನಡೆ ವಿರುದ್ದ ಜಾಮೀಯಾ ಉಲೇಮಾ, ಸಿಪಿಎಂ ನಾಯಕಿ ಬೃಂದಾ ಕಾರಾಟ್ ಸೇರಿದಂತೆ ಕೆಲ ಪ್ರಮುಖರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಸರ್ಕಾರದ ಕ್ರಮ 2024ರಲ್ಲಿ ನೀಡಿದ ನ್ಯಾಯಾಂಗ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರದ ವಿರುದ್ದ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು.

ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನ್ಯಾಯಂಗ ನಿಂದನೆ ಕುರಿತು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ದೇಶದ ಹಲೆವೆಡೆ ನಡೆಯುವ ತೆರವು ಕಾರ್ಯಾಚರಣೆ, ಧ್ವಂಸ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲು ಸಾಧ್ಯವಿಲ್ಲ. ಸ್ಥಳೀಯ ಪ್ರದೇಶದಲ್ಲಿ ಯಾವ ಸ್ಥಳ ಅಕ್ರಮ, ಯಾವುದು ಸಕ್ರಮ ಅನ್ನೋ ನೋಟಿಸ್ ಕುರಿತ ಮಾಹಿತಿ ಸ್ಥಳೀಯ ಹೈಕೋರ್ಟ್ ಮೂಲಕ ಪರಿಶೀಲನೆ ನಡೆಸಬೇಕು.

ಮುಂದಿನ 4 ತಿಂಗಳ ಒಳಗಾಗಿ ಈ ಎಲ್ಲಾ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸೂಕ್ತವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ದೇಶದ ವಿವಿಧ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ. 2024ರ ನವೆಂಬರ್ ತಿಂಗಳಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಕುರಿತು ಮಹತ್ವದ ಮಾರ್ಗಸೂಚಿ ಪ್ರಕಟಿಸಿತ್ತು. ಅಪರಾಧಿಗಳ ಮನೆಗಳನ್ನು ಕೇವಲ ಶಿಕ್ಷೆಯ ಕಾರಣಕ್ಕಾಗಿ ಧ್ವಂಸಗೊಳಿಸುವುದು ಸರಿಯಲ್ಲ, ಕನಿಷ್ಠ 15 ದಿನಗಳ ಮುಂಚಿತವಾಗಿ ನೋಟಿಸ್ ಕಡ್ಡಾಯ ಎಂದಿತ್ತು. ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸೋಮನಾಥ್ ಬಳಿ ಮಸೀದಿ ಕೆಡವಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಂಢರಪುರ ವಿಠ್ಠಲನಿಗೆ ಭಾರೀ ಮೌಲ್ಯದ ಚಿನ್ನದ ಪಾದುಕೆ ಕಾಣಿಕೆ ನೀಡಿದ ಅನಾಮಧೇಯ ಭಕ್ತ!
ಮದ್ವೆಗಾಗಿ ಮ್ಯಾಟ್ರಿಮೊನಿ ಸೈಟ್ಸ್​ ಓಪನ್​ ಮಾಡುವಿರಾ? ಮುಂದಿನ ಬಲಿಪಶು ನೀವೇ ಆಗ್ಬೋದು ಹುಷಾರ್​- ಸರ್ಕಾರದ ಎಚ್ಚರಿಕೆ