
ಚೆನ್ನೈ(ಏ.05) ರಾಮನವಮಿ ದಿನ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಹೊಸ ಪಂಬನ್ ರೈಲು ಸೇತುವೆ ಉದ್ಘಾಟಿಸಲಿದ್ದಾರೆ. ಶ್ರೀಲಂಕಾ ಪ್ರವಾಸ ಮುಗಿಸಿ ತಮಿಳುನಾಡಿಗೆ ಆಗಮಿಸಲಿರು ಮೋದಿ, ಹಲವು ವಿಶೇಷತೆಗಳ ಸಮುದ್ರ ಸೇತುವೆ ಉದ್ಘಾಟಿಸಲಿದ್ದಾರೆ. ಇದು ರೈಲು ಸೇತುವೆ. ಜೊತೆಗೆ ಹಡುಗಳು ಸರಾಗವಾಗಿ ಸಾಗಲು ಮೇಲಕ್ಕೆ ಈ ಸೇತುವೆ ಲಿಫ್ಟ್ ಆಗಲಿದೆ. ರಸ್ತೆ ಸೇತುವೆ ಮೇಲಿನಿಂದ ಪ್ರಧಾನಿ ನರೇಂದ್ರ ಮೋದಿ ಈ ಹೊಸ ಪಂಬನ್ ಸೇತುವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಸಮುದ್ರ ಸೇತುವೆ ಸವಾಲು
ಪಂಬನ್ ಹಳೇ ರೈಲು ಸೇತುವೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಸಮುದ್ರ ನೀರಿನ ಕಾರಣ ಸೇತುವೆ ನಿರ್ಮಾಣ ಅತ್ಯಂತ ಸವಾಲು. ಜೊತೆಗೆ ಉಪ್ಪು ನೀರಿನ ಕಾರಣ ಸಮುದ್ರಗಳು ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚು. ಆದರೆ ಹೊಸ ಪಂಬನ್ ಸೇತುವೆ ತುಕ್ಕು ಹಿಡಿಯದ ಸ್ಟೀಲ್, ಒಳ್ಳೆ ಕ್ವಾಲಿಟಿ ಪೇಂಟ್ ಮತ್ತೆ ವೆಲ್ಡಿಂಗ್ ಮಾಡಿ ನಿರ್ಮಾಣ ಮಾಡಲಾಗಿದೆ. ಇದು ಹೆಚ್ಚು ದಿನ ಬಾಳಿಕೆ ಬರುತ್ತೆ. ಜೊತೆಗೆ ಕಡಿಮೆ ರಿಪೇರಿ ಬೇಕಾಗುತ್ತೆ. ಮುಂದೆ ಡಬಲ್ ರೈಲ್ವೆ ಟ್ರ್ಯಾಕ್ ಮಾಡಲು ಅನುಕೂಲವಾಗುವ ರೀತಿಯಲ್ಲಿ ಈ ರೈಲು ಸೇತುವೆ ವಿನ್ಯಾಸಗೊಳಿಸಲಾಗಿದೆ.
ರಾಮೇಶ್ವರಂನ ಮುಖ್ಯ ಊರಿನ ಜೊತೆ ಸೇರಿಕೊಂಡಿರುವ ಈ ಸೇತುವೆ, ಇಂಡಿಯನ್ ಇಂಜಿನಿಯರಿಂಗ್ ಸಾಧನೆ ಎಂದೇ ಗುರುತಿಸಿಕೊಂಡಿದೆ. ಇದು 700 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಇದು 2.08 ಕಿ.ಮೀ ಉದ್ದ ಇದೆ. 99 ಕಂಬಗಳು ಮತ್ತೆ 72.5 ಮೀಟರ್ ಎತ್ತರಕ್ಕೆ ಎತ್ತುವ ಸೌಲಭ್ಯ ಇದೆ. ಇದು 17 ಮೀಟರ್ ಎತ್ತರದವರೆಗೆ ಮೇಲಕ್ಕೆ ಏರಲಿದೆ.ಹಡಗುಗಳ ಸಂಚಾರಕ್ಕೆ ಸುಲಭವಾಗುವಂತೆ ಮಾಡಲಾಗಿದೆ.
ಹಲವು ಯೋಜನೆಗಳಿಗೆ ಚಾಲನೆ
ಪಂಬನ್ ಸೇತುವೆ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. NH-40 ರಸ್ತೆಯ 28 ಕಿ.ಮೀ ಉದ್ದದ ವಾಲಾಜಾಪೇಟೆ - ರಾಣಿಪೇಟೆ ರಸ್ತೆಯನ್ನು ನಾಲ್ಕು ಲೇನ್ ರಸ್ತೆಯಾಗಿ ಬದಲಾಯಿಸೋಕೆ ಗುದ್ದಲಿ ಪೂಜೆ ಮಾಡಲಿದ್ದಾರೆ. NH-332 ರಸ್ತೆಯ 29 ಕಿ.ಮೀ ಉದ್ದದ ವಿಲ್ಲುಪುರಂ - ಪುದುಚೇರಿ ರಸ್ತೆಯನ್ನು ನಾಲ್ಕು ಲೇನ್ ರಸ್ತೆಯಾಗಿ ಬದಲಾಯಿಸೋಕೆ, NH-32 ರಸ್ತೆಯ 57 ಕಿ.ಮೀ ಉದ್ದದ ಪೂಂಡಿಯಾಂಕುಪ್ಪಂ - ಸತ್ತನಾಥಪುರಂ ರಸ್ತೆಯನ್ನು ನಾಲ್ಕು ಲೇನ್ ರಸ್ತೆಯಾಗಿ ಬದಲಾಯಿಸೋಕೆ, NH-36 ರಸ್ತೆಯ 48 ಕಿ.ಮೀ ಉದ್ದದ ಚೋಳಪುರಂ - ತಂಜಾವೂರು ರಸ್ತೆಯನ್ನು ನಾಲ್ಕು ಲೇನ್ ರಸ್ತೆಯಾಗಿ ಬದಲಾಯಿಸೋಕೆ ದೇಶಕ್ಕೆ ಅರ್ಪಿಸುತ್ತಾರೆ. ಈ ರಸ್ತೆಗಳು ತುಂಬಾ ಯಾತ್ರೆ ಸ್ಥಳ ಮತ್ತೆ ಟೂರಿಸ್ಟ್ ಪ್ಲೇಸ್ ಗೆ ಕನೆಕ್ಟ್ ಆಗುತ್ತೆ. ಸಿಟಿಗಳ ಮಧ್ಯೆ ದೂರ ಕಡಿಮೆ ಆಗುತ್ತೆ. ಮೆಡಿಕಲ್ ಕಾಲೇಜು, ಹಾಸ್ಪಿಟಲ್ ಮತ್ತೆ ಪೋರ್ಟ್ ಗೆ ಬೇಗ ಹೋಗೋಕೆ ಆಗುತ್ತೆ. ಹಳ್ಳಿ ರೈತರು ಅವರ ಬೆಳೆಯನ್ನು ಹತ್ತಿರದ ಮಾರ್ಕೆಟ್ ಗೆ ತಗೊಂಡು ಹೋಗೋಕೆ ಮತ್ತೆ ಸಣ್ಣ ಕೈಗಾರಿಕೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯ ಆಗುತ್ತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ