
ಮುಂಬೈ(ಮೇ.30): ಲಾಕ್ಡೌನ್ನಿಂದ ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿ, ಬಿಹಾರ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶದ ಕಾರ್ಮಿಕರನ್ನು ಅವರ ತವರಿಗೆ ಕಳಿಸಲು ಸಾರಿಗೆ ವ್ಯವಸ್ಥೆ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಈಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ಕೇರಳದಲ್ಲಿ ಸಿಲುಕಿದ್ದ ಒಡಿಶಾದ 177 ಯುವತಿಯರು ಬಾಡಿಗೆ ವಿಮಾನದ ಮೂಲಕ ತವರಿಗೆ ಮರಳಲು ವ್ಯವಸ್ಥೆ ಮಾಡಿದ್ದಾರೆ. ‘ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರು ಸೂದ್ ಅವರಿಗೆ ಕೇರಳದಲ್ಲಿ ಸಿಲುಕಿದ ಒಡಿಶಾದ ಯುವತಿಯರ ಮಾಹಿತಿ ನೀಡಿದರು. ಕೂಡಲೇ ಸೂದ್ ಅವರು ಸರ್ಕಾರವನ್ನು ಸಂಪರ್ಕಿಸಿ ಅಗತ್ಯ ಅನುಮತಿ ಪಡೆದರು.
ಬ್ಯಾಕ್ಗ್ರೌಂಡ್ ಡ್ಯಾನ್ಸರ್ಸ್ಗೆ ರೇಷನ್ ಕಿಟ್ ಕೊಟ್ಟ ಸೋನು ಸೂದ್
ಬೆಂಗಳೂರಿನಿಂದ ವಿಮಾನವೊಂದನ್ನು ಬಾಡಿಗೆ ಪಡೆದು ಕೊಚ್ಚಿಗೆ ಕಳಿಸಲಾಯಿತು. ಈ ಮೂಲಕ ಭುವನೇಶ್ವರಕ್ಕೆ ಯುವತಿಯರು ಮರಳಲು ವ್ಯವಸ್ಥೆ ಮಾಡಲಾಯಿತು’ ಎಂದು ಸೂದ್ ಅವರ ಆಪ್ತರು ಹೇಳಿದ್ದಾರೆ. ಸೂದ್ ಅವರ ಈ ಯತ್ನಗಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತವರಿಗೆ ಮರಳುವವರಿಗೆ ಉಚಿತ ಸಹಾಯವಾಣಿಯನ್ನೂ ಇತ್ತೀಚೆಗೆ ಸೂದ್ ಆರಂಭಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ