
ನವದೆಹಲಿ (ಏ.26): ಧೂಮಪಾನಿಗಳಿಗೆ ಕೊರೋನಾ ವೈರಸ್ ಅಂಟುವ ಸಾಧ್ಯತೆ ಅಧಿಕ ಎಂದು ಈ ಮುನ್ನ ಹೇಳಲಾಗುತ್ತಿತ್ತು. ಆದರೆ ಈಗ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳ ಮೇಲೆ ಕೊರೋನಾ ವೈರಸ್ ಕಡಿಮೆ ಪ್ರಭಾವ ಬೀರಿದೆ ಎಂಬ ಅಂಶ ಕಂಡುಬಂದಿದೆ. ದೇಶದ ವಿವಿಧ ಭಾಗಗಳಲ್ಲಿ 10,427 ಜನರ ರಕ್ತ ಪರೀಕ್ಷೆ ನಡೆಸಿ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಪರಿಷತ್ತು ಈ ಸಮೀಕ್ಷೆ ಕೈಗೊಂಡಿತ್ತು. ಈ ವೇಳೆ ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಸೋಂಕು ಕಡಿಮೆ ಎಂದು ಕಂಡುಬಂದಿದೆ.
ದೇಶದಲ್ಲಿ 2ನೇ ಅಲೆ ಭೀಕರವಾಗಲು ಕಾರಣವೇ ಇದು ...
ಧೂಮಪಾನಿಗಳಲ್ಲಿ ಧೂಮದಿಂದ ದೇಹದಲ್ಲಿ ಸೃಷ್ಟಿಆಗುವ ಲೋಳೆಯು ವೈರಾಣುವಿಗೆ ತಡೆಗೋಡೆ ಆಗಿರಬಹುದು. ಹಾಗೆಯೇ ಸಸ್ಯಾಹಾರದಲ್ಲಿ ಇರುವ ನಾರಿನ ಸಾಮರ್ಥ್ಯವು, ಕೋವಿಡ್ ಪ್ರತಿಕಾಯ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಸಮೀಕ್ಷೆ ಹೇಳಿದೆ.
14 ದಿನ ಕರ್ನಾಟಕ ಲಾಕ್ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...
ಇನ್ನು ಒ ರಕ್ತದ ಗುಂಪಿನವರಲ್ಲಿ ಸೋಂಕು ಕಡಿಮೆ ಇದೆ. ಆದರೆ ಬಿ ಹಾಗೂ ಎಬಿ ರಕ್ತ ಕಣದವರಲ್ಲಿ ಸೋಂಕು ಅಧಿಕವಾಗಿದೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ