
ನವದೆಹಲಿ (ಏ.26): ಜನರಲ್ಲಿ ಪ್ರತಿಕಾಯ ಶಕ್ತಿಯ ಕೊರತೆಯೇ ಕೊರೋನಾ ವೈರಸ್ ಅಲೆ ಮರು ಉದ್ಭವ ಆಗಲು ಕಾರಣ ಎಂದು ಸೀರೋ ಸಮೀಕ್ಷೆ ಹೇಳಿದೆ. ದೇಶದ 17 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 10,427 ಜನರ ಸಮೀಕ್ಷೆ ನಡೆಸಲಾಗಿತ್ತು.
14 ದಿನ ಕರ್ನಾಟಕ ಲಾಕ್ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...
ಆಗ ಕೇವಲ ಶೇ.10.14 ಸೀರೋ ಪಾಸಿಟಿವಿಟಿ ಕಂಡುಬಂದಿದೆ. ಕೊರೋನಾ ಮೊದಲ ಅಲೆ 2020ರ ಸೆಪ್ಟೆಂಬರ್ ಸಮಯದಲ್ಲಿ ತಾರಕಕ್ಕೇರಿತ್ತು. ಬಳಿಕ ಕುಂದಿತ್ತು. ಆದರೆ ಆ ಸಮಯದಿಂದ ಈವರೆಗಿನ ಸಮಯದಲ್ಲಿ ಜನರಲ್ಲಿನ ಪ್ರತಿಕಾಯ ಶಕ್ತಿಗಳು ಕುಂದಿವೆ.
ಅತಿಹೆಚ್ಚು ಮಂದಿಗೆ ಲಸಿಕೆ: ವಿಶ್ವದಲ್ಲೇ ಭಾರತ ನಂ.3! ...
ಹೀಗಾಗಿ 2021ರ ಮಾರ್ಚ್ ವೇಳೆಗೆ ಕೊರೋನಾ ವೈರಾಣು ಸೋಂಕಿನ ಮರು ಉದ್ಭವವಾಯಿತು ಎಂದು ಸಮೀಕ್ಷೆ ವಿವರಿಸಿದೆ. 2ನೇ ಅಲೆ ಮೊದಲು ಹೆಚ್ಚು ಸೃಷ್ಟಿಯಾಗಿದ್ದು ಮಹಾರಾಷ್ಟ್ರವಾಗಿದೆ. ನಂತರ ಇತರ ರಾಜ್ಯಗಳಿಗೂ ಹರಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ