
ಕೋಲ್ಕತಾ: ‘ಸಿತ್ರಾಂಗ್ ಚಂಡಮಾರುತ’ದ (Sitrang Cyclone) ಪ್ರಭಾವದಿಂದ ಪಶ್ಚಿಮ ಬಂಗಾಳದಲ್ಲಿ (West Bengal) ಸೋಮವಾರದಿಂದಲೇ ಮಳೆ ಆರಂಭವಾಗಿದೆ. ಮಂಗಳವಾರ ಬಾಂಗ್ಲಾದೇಶ (Bangladesh) ಹಾಗೂ ತಿಂಕೋನಾ ದ್ವೀಪದ (Tin Kona Island) ಕಡಲ ತೀರಕ್ಕೆ ಇದು ಅಪ್ಪಳಿಸಿದೆ. ಹೀಗಾಗಿ ಸೋಮವಾರ ಕೋಲ್ಕತಾ (Kolkata) ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಆರಂಭವಾಗಿರುವ ಮಳೆ ಮಂಗಳವಾರ ಇನ್ನಷ್ಟು ಬಿರುಸು ಪಡೆಯಲಿದ್ದು, ದೀಪಾವಳಿ (Diwali) ಸಂಭ್ರಮವನ್ನು ಕಿತ್ತುಕೊಳ್ಳುವ ಆತಂಕ ಹುಟ್ಟುಹಾಕಿದೆ.
ಚಂಡಮಾರುತವು ಈಗ ಸಾಗರ್ ದ್ವೀಪದ ದಕ್ಷಿಣದಿಂದ 430 ಕಿ.ಮೀ. ದೂರದಲ್ಲಿದೆ. ಇದು ಗಂಭೀರ ಚಂಡಮಾರುತವಾಗಿ (Cyclone) ಪರಿವರ್ತನಾ ಆಗಬಹುದು. ಗಂಟೆಗೆ 90ರಿಂದ 110 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ದಕ್ಷಿಣ 24 ಪರಗಣ, ಉತ್ತರ 24 ಪರಗಣ ಹಾಗೂ ಪೂರ್ವ ಮಿಡ್ನಾಪುರದ ಮೇಲೆ ಪ್ರಭಾವ ಬೀರಲಿದೆ ಹಾಗೂ ಮಂಗಳವಾರ ಇಲ್ಲಿ ಭಾರಿ ಮಳೆ ಬೀಳಲಿದೆ. ಸುಂದರಬನದ ಮೇಲೂ ಪರಿಣಾಮ ಬೀರಲಿದೆ. ಸಮುದ್ರ ತೀರದ ಭಾರಿ ಅಲೆಗಳು ತೀರದ ಮನೆಗಳಿಗೆ ಹಾನಿ ಉಂಟು ಮಾಡಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದನ್ನು ಓದಿ: ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!
ಇದೇ ವೇಳೆ, ಹೌರಾ, ಹೂಗ್ಲಿ ಹಾಗೂ ಕೋಲ್ಕತಾದಲ್ಲಿ ಸೋಮವಾರವೇ ಮಳೆ ಆರಂಭವಾಗಿದೆ. ಇದರಿಂದ ದೀಪಾವಳಿ ಹಾಗೂ ಕಾಳಿಪೂಜೆ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಪಾಯ ವಲಯದಲ್ಲಿ ಇರುವ ಜನರನ್ನು ಮನೆಗಳಿಂದ ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ: ಇಯಾನ್ ಚಂಡಮಾರುತಕ್ಕೆ ಫ್ಲೋರಿಡಾ ತತ್ತರ: 25 ಲಕ್ಷ ಮನೆಗಳಿಗೆ ವಿದ್ಯುತ್ ಕಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ