ನವದೆಹಲಿ: ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಯಾವ ಸುದ್ದಿಗಳ ಸಾಚಾತನ ಪರಿಶೀಲಿಸಿ ‘ಇದು ಸುಳ್ಳು ಸುದ್ದಿ’ ಎಂದು ಹೇಳಿರುತ್ತದೆಯೋ ಅಂತಹ ಸುದ್ದಿಗಳನ್ನು ಯಾರಾದರೂ ಪೋಸ್ಟ್ ಮಾಡಿದ್ದರೆ ಫೇಸ್ಬುಕ್, ಟ್ವೀಟರ್ನಂತಹ ಸಾಮಾಜಿಕ ಜಾಲತಾಣಗಳು ತಕ್ಷಣ ತೆಗೆಯಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.
2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (Union Ministry of Electronics and IT) ಪ್ರಕಟಿಸಿದ್ದ ‘ಮಾಹಿತಿ ತಂತ್ರಜ್ಞಾನ (Information Technology)(ಮಧ್ಯವರ್ತಿ ಮಾರ್ಗದರ್ಶಿ ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) ನಿಯಮಗಳ’ ಕರಡು ಪ್ರತಿಗೆ ಈ ನಿಯಮವನ್ನು ಸೇರ್ಪಡೆ ಮಾಡಿ ಹೊಸ ಪರಿಷ್ಕೃತ ಕರಡು ಪ್ರಕಟಿಸಲಾಗಿದೆ. ಅದರಲ್ಲಿ, ಪಿಐಬಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಫ್ಯಾಕ್ಟ್ ಚೆಕರ್ಗಳು ‘ಸುಳ್ಳುಸುದ್ದಿ’ ಎಂದು ಹೇಳಿದ ಸುದ್ದಿ ಅಥವಾ ಲೇಖನಗಳನ್ನು ಜನರು ಸೋಷಿಯಲ್ ಮೀಡಿಯಾಗಳಲ್ಲಿ (social media) ಹಂಚಿಕೊಂಡಿದ್ದರೆ ಸೋಷಿಯಲ್ ಮೀಡಿಯಾಗಳು ತೆಗೆದುಹಾಕುವುದು ಕಡ್ಡಾಯವಾಗಿದೆ.
ಪರಿಷ್ಕೃತ ಕರಡು ನಿಯಮಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ವಾಕ್ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ರಹಸ್ಯ ದಾಳಿ ಎಂದು ಹೇಳಿದೆ. ಕೂಡಲೇ ಈ ಪರಿಷ್ಕೃತ ನಿಯಮ ವಾಪಸ್ ಪಡೆಯುವಂತೆಯೂ ಆಗ್ರಹಿಸಿದೆ.
ಅಭಿವ್ಯಕ್ತಿ- ವಾಕ್ ಸ್ವಾತಂತ್ರ್ಯ ಯಾರಿಗೂ ಸಂಪೂರ್ಣ ಅಧಿಕಾರ ನೀಡುವುದಿಲ್ಲ; ಹೈಕೋರ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ