
ಅಹಮದಾಬಾದ್ (ನ. 13): ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ಗೂ, ಜೇಡರ ಹುಳಕ್ಕೂ ಏನು ಸಂಬಂಧ? ಅರೇ ಇದೇನು ಪ್ರಶ್ನೆ ಅಂತೀರಾ? ಸಂಬಂಧ ಇದೆ! ಹೌದು. ಇತ್ತೀಚೆಗೆ ತಾವು ಶೋಧಿಸಿದ ಹೊಸ ತಳಿಯ ಜೇಡಕ್ಕೆ ಅಹಮಹಾಬಾದ್ನ ಪರಿಸರ ವಿಜ್ಞಾನಿ ಧ್ರುವ ಪ್ರಜಾಪತಿ ಅವರು ‘ಸಚಿನ್ ತೆಂಡೂಲ್ಕರ್’ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತೆಂಡೂಲ್ಕರ್ ಅವರಿಗೆ ದೊಡ್ಡ ಗೌರವ ಸಲ್ಲಿಸಿದ್ದಾರೆ.
ಧ್ರುವ ಅವರು ‘ಜೇಡ ಜೀವವರ್ಗೀಕರಣ’ ಎಂಬ ವಿಷಯದಲ್ಲಿ ಪಿಎಚ್ಡಿ ಕೂಡ ಮಾಡುತ್ತಿದ್ದು, ಅವರಿಗೆ ಸಚಿನ್ ಅವರು ನೆಚ್ಚಿನ ಕ್ರಿಕೆಟಿಗ. ಹೀಗಾಗಿ ಇತ್ತೀಚೆಗೆ ತಾವು ಕಂಡುಹಿಡಿದ ಹೊಸ ಜೇಡದ ತಳಿಗೆ ತೆಂಡೂಲ್ಕರ್ ಅವರ ಹೆಸರು ಇಡಲು ನಿರ್ಧರಿಸಿದ್ದಾರೆ. ಒಟ್ಟು 2 ಜೇಡದ ತಳಿಗಳನ್ನು ಧ್ರುವ ಸಂಶೋಧಿಸಿದ್ದು, ಒಂದಕ್ಕೆ ‘ಮರೆಂಗೋ ಸಚಿನ್ ತೆಂಡೂಲ್ಕರ್’ ಎಂದೂ, ಇನ್ನೊಂದಕ್ಕೆ ‘ಇನೊಮರೆಂಗೋ ಚವರಪಟೇರಾ’ ಎಂದೂ ನಾಮಕರಣ ಮಾಡಿದ್ದಾರೆ.
ಸಂತ ಎಲಿಯಾಸ್ ಚವರ ಅವರು ಕೇರಳದ ಸಂತ ಪಾದ್ರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ಕೊಟ್ಟವರು. ಚವರ ಅವರೂ ಧ್ರುವ ಅವರ ನೆಚ್ಚಿನ ವ್ಯಕ್ತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ