ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

Published : Nov 13, 2019, 08:28 AM ISTUpdated : Nov 13, 2019, 10:30 AM IST
ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

ಸಾರಾಂಶ

ಕಂಡು ಹಿಡಿದ ಹೊಸ ಜೇಡಕ್ಕೆ ಕ್ರಿಕೆಟಿಗನ ಹೆಸರಿಟ್ಟ ಗುಜರಾತ್ ವಿಜ್ಞಾನಿ | ಅಹಮಹಾಬಾದ್‌ನ ಪರಿಸರ ವಿಜ್ಞಾನಿ ಧ್ರುವ ಪ್ರಜಾಪತಿ ಅವರು ‘ಸಚಿನ್ ತೆಂಡೂಲ್ಕರ್’ ದೊಡ್ಡ ಅಭಿಮಾನಿ | ಹಾಗಾಗಿ ಅವರ ಹೆಸರನ್ನೇ ಇಟ್ಟಿದ್ದಾರೆ  

ಅಹಮದಾಬಾದ್ (ನ. 13): ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೂ, ಜೇಡರ ಹುಳಕ್ಕೂ ಏನು ಸಂಬಂಧ? ಅರೇ ಇದೇನು ಪ್ರಶ್ನೆ ಅಂತೀರಾ? ಸಂಬಂಧ ಇದೆ! ಹೌದು. ಇತ್ತೀಚೆಗೆ ತಾವು ಶೋಧಿಸಿದ ಹೊಸ ತಳಿಯ ಜೇಡಕ್ಕೆ ಅಹಮಹಾಬಾದ್‌ನ ಪರಿಸರ ವಿಜ್ಞಾನಿ ಧ್ರುವ ಪ್ರಜಾಪತಿ ಅವರು ‘ಸಚಿನ್ ತೆಂಡೂಲ್ಕರ್’ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತೆಂಡೂಲ್ಕರ್ ಅವರಿಗೆ ದೊಡ್ಡ ಗೌರವ ಸಲ್ಲಿಸಿದ್ದಾರೆ.

 

ಧ್ರುವ ಅವರು ‘ಜೇಡ ಜೀವವರ್ಗೀಕರಣ’ ಎಂಬ ವಿಷಯದಲ್ಲಿ ಪಿಎಚ್‌ಡಿ ಕೂಡ ಮಾಡುತ್ತಿದ್ದು, ಅವರಿಗೆ ಸಚಿನ್ ಅವರು ನೆಚ್ಚಿನ ಕ್ರಿಕೆಟಿಗ. ಹೀಗಾಗಿ ಇತ್ತೀಚೆಗೆ ತಾವು ಕಂಡುಹಿಡಿದ ಹೊಸ ಜೇಡದ ತಳಿಗೆ ತೆಂಡೂಲ್ಕರ್ ಅವರ ಹೆಸರು ಇಡಲು ನಿರ್ಧರಿಸಿದ್ದಾರೆ. ಒಟ್ಟು 2 ಜೇಡದ ತಳಿಗಳನ್ನು ಧ್ರುವ ಸಂಶೋಧಿಸಿದ್ದು, ಒಂದಕ್ಕೆ ‘ಮರೆಂಗೋ ಸಚಿನ್ ತೆಂಡೂಲ್ಕರ್’ ಎಂದೂ, ಇನ್ನೊಂದಕ್ಕೆ ‘ಇನೊಮರೆಂಗೋ ಚವರಪಟೇರಾ’ ಎಂದೂ ನಾಮಕರಣ ಮಾಡಿದ್ದಾರೆ.

ಸಂತ ಎಲಿಯಾಸ್ ಚವರ ಅವರು ಕೇರಳದ ಸಂತ ಪಾದ್ರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ಕೊಟ್ಟವರು. ಚವರ ಅವರೂ ಧ್ರುವ ಅವರ ನೆಚ್ಚಿನ ವ್ಯಕ್ತಿ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್