ಶಬರಿಮಲೆ ಚಿನ್ನಕ್ಕೆ ಕನ್ನ: ಪ್ರಧಾನ ಅರ್ಚಕ ಸೆರೆ

Kannadaprabha News   | Kannada Prabha
Published : Jan 10, 2026, 05:27 AM IST
sabarimala

ಸಾರಾಂಶ

ಶಬರಿಮಲೆ ದ್ವಾರಪಾಲಕ ಮೂರ್ತಿಗಳು ಮತ್ತು ಗರ್ಭಗುಡಿಯ ಬಾಗಿಲಿನ ಚಿನ್ನ ಲೇಪಿತ ಕವಚಗಳಲ್ಲಿ ಚಿನ್ನ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ದೇಗುಲದ ಪ್ರಧಾನ ಅರ್ಚಕ ಕಂಡರಾರು ರಾಜೀವರು ಅವರನ್ನು ಶುಕ್ರವಾರ ಬಂಧಿಸಿದೆ.

ತಿರುವನಂತಪುರ : ಶಬರಿಮಲೆ ದ್ವಾರಪಾಲಕ ಮೂರ್ತಿಗಳು ಮತ್ತು ಗರ್ಭಗುಡಿಯ ಬಾಗಿಲಿನ ಚಿನ್ನ ಲೇಪಿತ ಕವಚಗಳಲ್ಲಿ ಚಿನ್ನ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ದೇಗುಲದ ಪ್ರಧಾನ ಅರ್ಚಕ ಕಂಡರಾರು ರಾಜೀವರು ಅವರನ್ನು ಶುಕ್ರವಾರ ಬಂಧಿಸಿದೆ. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆಯು 11ಕ್ಕೆ ಏರಿಕೆಯಾಗಿದೆ.

ಎಸ್‌ಐಟಿಯು ರಾಜೀವರು ಅವರನ್ನು ಬಂಧಿಸಿದೆ.

ಈಗಾಗಲೇ ಬಂಧಿತರಾಗಿರುವ ದೇಗುಲದ ಮಾಜಿ ಅರ್ಚಕ ಹಾಗೂ ಹಾಲಿ ಬೆಂಗಳೂರು ನಿವಾಸ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಟಿಡಿಬಿ ಮಾಜಿ ಅಧ್ಯಕ್ಷ ಪದ್ಮಕುಮಾರ್‌ ಅವರ ಹೇಳಿಕೆ ಆಧರಿಸಿ ಎಸ್‌ಐಟಿಯು ರಾಜೀವರು ಅವರನ್ನು ಬಂಧಿಸಿದೆ.

ರಾಜೀವರು ಮತ್ತು ಪೊಟ್ಟಿ ಉತ್ತಮ ಗೆಳೆತನ

‘ರಾಜೀವರು ಮತ್ತು ಪೊಟ್ಟಿ ಉತ್ತಮ ಗೆಳೆತನ ಹೊಂದಿದ್ದರು. ಕವಚ ಹಾಗೂ ಮೂರ್ತಿಯ ಚಿನ್ನ ಬದಲಾವಣೆಗೆ (ಮರುಲೇಪನಕ್ಕೆ) ರಾಜೀವರು ಶಿಫಾರಸು ಮಾಡಿದ್ದರು. ಬಳಿಕ ಬದಲಾವಣೆಗೆ ಟಿಡಿಬಿ ಅನುಮತಿ ಕೇಳಿದಾಗ, ರಾಜೀವರು ಅದನ್ನು ಅಂಗೀಕರಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುಲೇಪನದ ವೇಳೆ ಚಿನ್ನ ಕಳವಾದ ಆರೋಪ ಕೇಳಿಬಂದಿತ್ತು.

ಶುಕ್ರವಾರ ಬೆಳಗ್ಗೆ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿ, ನಂತರ ಎಸ್‌ಐಟಿ ಕಚೇರಿಗೆ ಕರೆತಂದು ರಾಜೀವರು ಅವರನ್ನು ಎಸ್‌ಐಟಿ ಬಂಧಿಸಿದೆ.

ಇದಕ್ಕೂ ಮುನ್ನ ಉನ್ನಿಕೃಷ್ಣನ್‌ ಪೊಟ್ಟಿ, ಬಳ್ಳಾರಿಯ ಚಿನ್ನ ವ್ಯಾಪಾರಿ ಗೋವರ್ಧನ ಸೇರಿ ಹಲವರನ್ನು ಎಸ್ಐಟಿ ಬಂಧಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇ.ಡಿ.ರೇಡ್‌ ಖಂಡಿಸಿ ದೀದಿ, ಟಿಎಂಸಿ ಸಂಸದರು ಬೀದಿಗೆ
ಬೀದಿನಾಯಿ ಪರ ವಾದ : ಶರ್ಮಿಳಾಗೆ ಸುಪ್ರೀಂ ಕ್ಲಾಸ್‌