ಇ.ಡಿ.ರೇಡ್‌ ಖಂಡಿಸಿ ದೀದಿ, ಟಿಎಂಸಿ ಸಂಸದರು ಬೀದಿಗೆ

Kannadaprabha News   | Kannada Prabha
Published : Jan 10, 2026, 05:17 AM IST
Mamata Banerjee

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಚುನಾವಣಾ ತಂತ್ರಗಾರಿಕೆ ನೋಡಿಕೊಳ್ಳುವ ಐ ಪ್ಯಾಕ್‌ ಸಂಸ್ಥೆ ಮೇಲೆ ನಡೆದ ಇ.ಡಿ ದಾಳಿ ಖಂಡಿಸಿ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ

ಕೋಲ್ಕತಾ/ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಚುನಾವಣಾ ತಂತ್ರಗಾರಿಕೆ ನೋಡಿಕೊಳ್ಳುವ ಐ ಪ್ಯಾಕ್‌ ಸಂಸ್ಥೆ ಮೇಲೆ ನಡೆದ ಇ.ಡಿ ದಾಳಿ ಖಂಡಿಸಿ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಚೇರಿ ಮುಂದೆ ತೃಣಮೂಲ ಕಾಂಗ್ರೆಸ್‌ ಸಂಸದರು ಪ್ರತಿಭಟಿಸಿದ್ದು, ಈ ವೇಳೆ ಹೈಡ್ರಾಮಾ ನಡೆದಿದೆ.

ಹಲವು ಸಂಸದರು ಪ್ರತಿಭಟಿಸಿ, ಘೋಷಣೆ

ಶಾ ಕಚೇರಿ ಮುಂದೆ ಡೆರೆಕ್‌ ಒಬ್ರಿಯಾನ್‌, ಮಹುವಾ ಮೊಯಿತ್ರಾ, ಕೀರ್ತಿ ಅಜಾದ್‌ ಸೇರಿದಂತೆ ಹಲವು ಸಂಸದರು ಪ್ರತಿಭಟಿಸಿ, ಘೋಷಣೆಗಳನ್ನುಕೂಗಿದರು. ಆಗ ಪೊಲೀಸರು ಮೊಯಿತ್ರಾ ಸೇರಿದಂತೆ ಪ್ರತಿಭಟನಾ ನಿರತರನ್ನು ಎತ್ತಿಕೊಂಡು ಬಸ್ಸಿಗೆ ಹಾಕಿ ಠಾಣೆಗೆ ಕರೆದೊಯ್ದರು. ಈ ದೃಶ್ಯ ಸಿನಿಮೀಯವಾಗಿತ್ತು.

ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸಂಸ್ಥೆಗಳ ದುರುಪಯೋಗ

ಇನ್ನು ಕೋಲ್ಕತಾದಲ್ಲಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ‘ರಾಜಕೀಯ ದ್ವೇಷಕ್ಕಾಗಿ ಬಿಜೆಪಿ, ಕೇಂದ್ರ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಯಾವುದೇ ಹಣಕಾಸಿನ ತನಿಖೆಗೆ ಸಂಬಂಧವಿಲ್ಲದಿದ್ದರೂ ಇ.ಡಿ.ಯು ಟಿಎಂಸಿಯ ಚುನಾವಣಾ ದಾಖಲೆಗಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಡ್ಯೂಟಿಗೆ, ಹೆಂಡ್ತಿ ಪ್ರಿಯಕರನ ಭೇಟಿಗೆ..ಶಾಪಿಂಗ್‌ ಮಾಲ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದವಳಿಗೆ ಗೂಸಾ ಇಟ್ಟ ಪತಿರಾಯ!
Aadhaar Card Misuse Check: ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ?: ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ