
ಒಡಿಶಾ(ಮೇ.20): ಕೊರೋನಾ ವೈರಸ್ ಕೆಲವು ಕುಟುಂಬದ ಮೇಲೆ ನಡೆಸಿದ ಭೀಕರ ಪ್ರಹಾರ ಊಹಿಸಲೂ ಸಾಧ್ಯವಿಲ್ಲ. ಇದರಲ್ಲಿ ರಾಜ್ಯಸಭಾ MP, ಶಿಲ್ವಿ ರಘುನಾಥ್ ಮೋಹಪತ್ರ ಕುಟುಂಬ ಸೇರಿದೆ. ಮೇ.09 ರಂದು ರಘುನಾಥ್ ಮೋಹಪಾತ್ರ(72) ಕೊರೋನಾ ವೈರಸ್ಗೆ ಬಲಿಯಾಗಿದ್ದರು. ಇದಾದ 10 ದಿನದಲ್ಲಿ ರಘುನಾಥ್ ಇಬ್ಬರು ಪುತ್ರರೂ ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾಗೆ ರಾಜ್ಯಸಭಾ MP ರಘುನಾಥ್ ಮೊಹಪತ್ರ ನಿಧನ; ಪ್ರಧಾನಿ ಮೋದಿ ಸಂತಾಪ!
ಕೊರೋನಾ ವೈರಸ್ ಕಾರಣ ರಾಜ್ಯಸಭಾ ಎಂಪಿ, ಪದ್ಮಭೂಷಣ ಪ್ರಶಸ್ತಿ ವಿಜೇಯ ಶಿಲ್ಪಿ ರಘುನಾಥ್ ಮೋಹಪಾತ್ರ 17 ದಿನಗಳ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗೆ ನಿಧನರಾಗಿದ್ದರು. ಈ ನೋವಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮೋಹಪಾತ್ರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ರುಘನಾಥ್ ಮೋಹಪಾತ್ರ ಪುತ್ರ, ಒಡಿಶಾ ರಣಜಿ ತಂಡ ಮಾಜಿ ನಾಯಕ ಪ್ರಶಾಂತ್ ಮೋಹಪಾತ್ರ ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಲಿ: ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಬದುಕು ಕೊನೆ.
ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿ ಪ್ರಶಾಂತ್ ಮೇ.19ರಂದು ನಿಧನರಾಗಿದ್ದಾರೆ. ಇಂದು(ಮೇ.20) ರಘುನಾಥ್ ಮೋಹಪಾತ್ರ ಅವರ ಕಿರಿಯ ಪುತ್ರ ಜಶೋಬಾಂತ್ ಮೋಹಪಾತ್ರ ಕೊರೋನಾಗೆ ಬಲಿಯಾಗಿದ್ದಾರೆ. ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಶಿಲ್ಪಿ ಜಶೋಬಾಂತ್ ಮೋಹಪಾತ್ರ ಅವರನ್ನು ಬುವನೇಶ್ವರ ಏಮ್ಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ SUM ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಕೇವಲ 10 ದಿನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಶಿಲ್ಪಕಾರ ಕುಟುಂಬ ಕೊರೋನಾಗೆ ಬಲಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ