Rajnath Singh: ರಾಹುಲ್‌ ಗಾಂಧಿಗೆ ಚೀನಾ ಮೇಲೆ ಹೆಚ್ಚು ನಂಬಿ​ಕೆ

Kannadaprabha News   | Asianet News
Published : Feb 06, 2022, 11:33 AM ISTUpdated : Feb 06, 2022, 12:39 PM IST
Rajnath Singh: ರಾಹುಲ್‌ ಗಾಂಧಿಗೆ ಚೀನಾ ಮೇಲೆ ಹೆಚ್ಚು ನಂಬಿ​ಕೆ

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ​ರಿಗೆ ಭಾರ​ತದ ಸೈನ್ಯ ಮತ್ತು ಸೈನಿ​ಕರ ಪರಾ​ಕ್ರ​ಮ​ಕ್ಕಿಂತ ಚೀನಾ ಮೇಲಿನ ನಂಬಿ​ಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರು ಅಸ​ಮಾ​ಧಾನ ವ್ಯಕ್ತಪ​ಡಿ​ಸಿ​ದ್ದಾರೆ.

ಮಥು​ರಾ (ಫೆ.06): ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವ​ರಿಗೆ ಭಾರ​ತದ ಸೈನ್ಯ ಮತ್ತು ಸೈನಿ​ಕರ ಪರಾ​ಕ್ರ​ಮ​ಕ್ಕಿಂತ ಚೀನಾ ಮೇಲಿನ ನಂಬಿ​ಕೆಯೇ ಹೆಚ್ಚು ಎಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ (Rajnath Singh) ಅವರು ಅಸ​ಮಾ​ಧಾನ ವ್ಯಕ್ತಪ​ಡಿ​ಸಿ​ದ್ದಾರೆ. 

ಉತ್ತರ ಪ್ರದೇ​ಶದ ಪಶ್ಚಿಮ ವ್ಯಾಪ್ತಿಗೆ ಬರುವ ಮಥು​ರಾ​ದಲ್ಲಿ ಶನಿ​ವಾರ ಬಿಜೆಪಿ (BJP) ಅಭ್ಯ​ರ್ಥಿ​ಗಳ ಪರ ಪ್ರಚಾರ ಮಾಡಿದ ರಾಜ​ನಾಥ್‌ ಅವರು, ಭಾರ​ತ ಈಗ ದುರ್ಬಲ ರಾಷ್ಟ್ರ​ವಲ್ಲ. ನಮಗೂ ಗಡಿ ದಾಟಿ ಬಂದು ದಾಳಿ ಎಸ​ಗುವ ಸಾಮರ್ಥ್ಯವಿದೆ ಎಂಬ ಸಂದೇ​ಶ​ವನ್ನು ನಾವು ಈಗಾ​ಗಲೇ ವಿಶ್ವಕ್ಕೆ ರವಾ​ನಿ​ಸಿ​ದ್ದೇವೆ. ಗಲ್ವಾನ್‌ ಗಡಿ​ಯಲ್ಲಿ ಚೀನಾ ಮತ್ತು ಭಾರ​ತೀಯ ಯೋಧರ ನಡೆದ ಗುದ್ದಾ​ಟ​ದಲ್ಲಿ ಹಲವು ಭಾರ​ತೀಯ ಯೋಧರು ಮತ್ತು ಕೆಲ ಚೀನೀ ಯೋಧರು ಮಡಿ​ದಿ​ದ್ದಾರೆ ಎಂದು ಹೇಳು​ತ್ತಾರೆ. 

ಈ ಗುದ್ದಾ​ಟ​ದಲ್ಲಿ ಚೀನಾದ 38-50 ಯೋಧರು ಬಲಿ​ಯಾ​ಗಿ​ದ್ದಾರೆ ಎಂದು ಆಸ್ಪ್ರೇ​ಲಿ​ಯಾದ ಮಾಧ್ಯ​ಮವೇ ಹೇಳು​ತ್ತದೆ. ಆದರೆ ರಾಹುಲ್‌ ಅವರು ಚೀನಾದ ಮಾಧ್ಯಮ ವರ​ದಿ​ಯನ್ನು ಮಾತ್ರವೇ ನಂಬು​ತ್ತಾರೆ ಎಂದು ರಾಹುಲ್‌ ಬಗ್ಗೆ ವ್ಯಂಗ್ಯ​ವಾ​ಡಿ​ದರು. ಅಲ್ಲದೆ ಭಾರ​ತದ ಘನತೆ ಮೇಲೆ ಯಾರೂ ದಾಳಿ ಮಾಡಲು ಅವ​ಕಾಶ ನೀಡು​ವು​ದಿಲ್ಲ ಎಂದು ಗುಡು​ಗಿ​ದರು.

ಚೀನಾ ಸೇತುವೆ ಮೋದಿಯಿಂದ ಉದ್ಘಾಟನೆ: Rahul Gandhi ವ್ಯಂಗ್ಯ

ರಾಹುಲ್‌ ಗಾಂಧಿಗೆ ರಾಜಕೀಯ ಬುದ್ಧಿ ಶಕ್ತಿ ಇಲ್ಲ: ಕಾಂಗ್ರೆಸ್‌ (Congress) ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಗಟ್ಟಿಗೊಳಿಸಿರುವ ವಿಧಾನಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ (CM Ibrahiim) ಸದ್ಯದಲ್ಲೇ ದಾವಣಗೆರೆಯಲ್ಲಿ ಜೆಡಿಎಸ್‌(JDS) ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿಯಿಂದ ಬಿ.ಎಸ್‌. ಯಡಿಯೂರಪ್ಪ ಹಾಗೂ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಹೊರಬರಬೇಕು ಎಂದು ಸಲಹೆ ನೀಡಿದರು. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿಗೆ ರಾಜಕೀಯ ಬುದ್ಧಿ ಶಕ್ತಿ ಇಲ್ಲ. ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು ಯಾರು ಅವರು ಯಾರು ಎಂಬುದೇ ರಾಹುಲ್‌ ಗಾಂಧಿಗೆ ಗೊತ್ತಿರಲಿಲ್ಲ. ದಿನೇಶ್‌ ಗುಂಡೂರಾವ್‌ ಯಾರು ಎಂದು ರಾಹುಲ್‌ ಗಾಂಧಿ ನನ್ನನ್ನೇ ಕೇಳಿದ್ದರು. ಅವರಿಗೆ ಅವರ ತಂದೆ ರಾಜೀವ್‌ ಗಾಂಧಿಯಷ್ಟು ಚಾಣಾಕ್ಷತೆಯಿಲ್ಲ. ಇನ್ನು ಕಾಂಗ್ರೆಸ್‌ ನಾಯಕರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಹೀಗಾಗಿ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.

ನಾನು ಜೆಡಿಎಸ್‌ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಸಮಯವನ್ನು ಆದಷ್ಟು ಶೀಘ್ರವಾಗಿ ಘೋಷಿಸುತ್ತೇನೆ. ಆದರೆ ಪರ್ಯಾಯ ರಂಗದ ನಾಯಕತ್ವವನ್ನು ನಾನು ವಹಿಸುವುದಿಲ್ಲ. ನಾನು ಈ ನಿಟ್ಟಿನಲ್ಲಿ ಒಬ್ಬ ಕೆಲಸಗಾರ ಮಾತ್ರ. ಜೆಡಿಎಸ್‌ ಮುಂದಿನ ಬಾರಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಹಣೆಬರಹದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಬರೆದಿದ್ದರೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. 

ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್‌ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!

ಇನ್ನು ಒಂದು ವರ್ಷಕ್ಕೆ ಕಾಂಗ್ರೆಸ್‌ನವರೇ ನಮ್ಮ (ಜೆಡಿಎಸ್‌) ಬಳಿಗೆ ನಿಮ್ಮ ಸಹಾಯ ಬೇಕು ಎಂದು ಬರುತ್ತಾರೆ ಎಂದು ಭವಿಷ್ಯ ನುಡಿದರು. ಎಚ್‌.ಡಿ. ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗಲ್ಲ. ಸೋರುವ ನೀರಿಗೆ ಬಕೆಟ್‌ ಹಿಡಿಯುತ್ತಾರೆ. ಆ ನೀರಿನಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ ಎಂದು ಜೆಡಿಎಸ್‌ ಪಕ್ಷ ಕಟ್ಟುವ ರೀತಿಯ ಬಗ್ಗೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!