
ದೆಹಲಿ(ಮೇ.28): ಭಾರತದಲ್ಲಿ COVID-19 ರ ಮಾರಕ ಎರಡನೇ ಅಲೆಗೆ ಪ್ರಧಾನಿ ಮೋದಿಯವರ ಡ್ರಾಮಾಗಳೇ ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದ ರಾಹುಲ್ಗಾಂಧಿ ಸರ್ಕಾರವು ಈಗ ಕಾರ್ಯನಿರ್ವಹಿಸದಿದ್ದರೆ, ವೈರಸ್ ತನ್ನ ನಡವಳಿಕೆಯನ್ನು ಬದಲಾಯಿಸುತ್ತದೆ. ಕಾಲಕಾಲಕ್ಕೆ ರೂಪಾಂತರಗೊಳ್ಳುವುದರಿಂದ ಮೂರು ಮಾತ್ರವಲ್ಲದೆ ಇನ್ನೂ ಹಲವು ಅಲೆಗಳು ಬರುತ್ತಲೇ ಇರುತ್ತವೆ ಎಂದು ಅವರು ಹೇಳಿದ್ದಾರೆ.
ಈವರೆಗೆ ಭಾರತವು ತನ್ನ ಜನಸಂಖ್ಯೆಯ ಕೇವಲ 3 ಶೇಕಡಾ ಮಾತ್ರ ಲಸಿಕೆ ನೀಡಿದೆ ಮತ್ತು 97 ಶೇಕಡಾದಷ್ಟು ಜನರು ಇನ್ನೂ COVID-19 ಗೆ ಗುರಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರ ಕುಟುಂಬಕ್ಕೆ 5 ಲಕ್ಷ...
ಜನ ಹೋರಾಡುತ್ತಿರುವ ತೀವ್ರತೆ ಸರ್ಕಾರ ಅರ್ಥಮಾಡಿಕೊಳ್ಳುವುದಿಲ್ಲ. ಈ ವೈರಸ್ ರೂಪಾಂತರದ ಅಪಾಯಗಳನ್ನು ಅರ್ಥಮಾಡಿಕೊಳ್ಳಿ ಎಂದಿದ್ದಾರೆ. COVID-19 ಬಗ್ಗೆ ಕಾಂಗ್ರೆಸ್ ಪಕ್ಷವು ಸರ್ಕಾರಕ್ಕೆ ಪದೇ ಪದೇ ಎಚ್ಚರಿಕೆ ನೀಡಿದೆ. ಇದು ವಿಕಾಸಗೊಳ್ಳುತ್ತಿರುವ ರೋಗ. ಲಾಕ್ಡೌನ್ಗಳು, ಮುಖವಾಡಗಳನ್ನು ಧರಿಸುವುದು ಮತ್ತು ಸಾಮಾಜಿಕ ದೂರವಿರುವುದು ತಾತ್ಕಾಲಿಕ ಪರಿಹಾರಗಳು ಆದರೆ ಲಸಿಕೆ ಶಾಶ್ವತ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಎರಡನೇ ಅಲೆಗೆ ಪ್ರಧಾನಿಯನ್ನು ದೂಷಿಸಿದ ರಾಹುಲ್ ಗಾಂಧಿ, ಭಾರತದಲ್ಲಿ COVID-19 ರ ಎರಡನೇ ಅಲೆಯ ಹಿಂದಿನ ಕಾರಣ ಪ್ರಧಾನಮಂತ್ರಿಯವರ ಡ್ರಾಮಾ. ಅವರು COVID-19 ಅನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದಿದ್ದಾರೆ.
ಸಾವಿನ ಸಂಖ್ಯೆಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರವನ್ನು ದೂಷಿಸಿದ ರಾಹುಲ್ ಗಾಂಧಿ ಭಾರತದ ಸಾವಿನ ಪ್ರಮಾಣ ಸುಳ್ಳು. ಸರ್ಕಾರ ಸತ್ಯ ಹೇಳಬೇಕು. ನಿಜವಾದ ಸಂಖ್ಯೆಯನ್ನು ಹಂಚಿಕೊಳ್ಳಲು ನಾನು ಕಾಂಗ್ರೆಸ್ ಆಡಳಿತದ ರಾಜ್ಯಗಳನ್ನು ಕೇಳಿದ್ದೇನೆ. ವಾಸ್ತವತೆಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ