ಜಿ20 ಶೃಂಗಸಭೆಯ 5 ಪ್ರಮುಖ ಗೆಲುವನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

Published : Sep 11, 2023, 07:22 PM IST
ಜಿ20 ಶೃಂಗಸಭೆಯ 5 ಪ್ರಮುಖ ಗೆಲುವನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

ಸಾರಾಂಶ

ಪ್ರಮುಖ ದೆಹಲಿ ಘೋಷಣೆಯೊಂದಿಗೆ  ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ ಜಿ20 ಶೃಂಗಸಭೆಯ ಪ್ರಮುಖ ಐದು ಗೆಲುವನ್ನು ಕೇಂದ್ರ ಸರ್ಕಾರ ಬಹಿರಂಗ ಮಾಡಿದೆ.

ನವದೆಹಲಿ (ಸೆ.11): ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಆವೃತ್ತಿಯ ಜಿ20 ಶೃಂಗಸಭೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಅದರ ಬೆನ್ನಲ್ಲಿಯೇ ಜಿ20 ಶೃಂಗಸಭೆಯ ಮೂಲಕ ಭಾರತದ ಐದು ಪ್ರಮುಖ ಗೆಲುವುಗಳನ್ನು ಸರ್ಕಾರ ಬಹಿರಂಗಪಡಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವ ಎಸ್‌.ಜೈಂಕರ್‌ ಈ ವಿವರವನ್ನು ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಭಾನುವಾರ ಅವರು ಈ ಟ್ವೀಟ್‌ ಮಾಡಿದ್ದರು. ಜಿ20 ಶೃಂಗಸಭೆ ಮತ್ತು ಅದರ ದ್ವಿಪಕ್ಷೀಯ ಸಭೆಗಳು ಇಂದು ನವದೆಹಲಿಯಲ್ಲಿ ಮುಕ್ತಾಯಗೊಂಡವು. ಹೊಸದಿಲ್ಲಿ ಘೋಷಣೆಯು ನಮ್ಮ ಅಧ್ಯಕ್ಷೀಯ ಆಡಳಿತವು ವಿಚಾರಗಳನ್ನು ಮಂಡಿಸಲು, ಜಾಗತಿಕ ಸಮಸ್ಯೆಗಳನ್ನು ರೂಪಿಸಲು, ವಿಭಜಿಸಲು ಮತ್ತು ಒಮ್ಮತವನ್ನು ರೂಪಿಸಲು ಸಮರ್ಥವಾಗಿದೆ ಎಂದು ತೋರಿಸುತ್ತದೆ. ನಾವು ಗ್ಲೋಬಲ್ ಸೌತ್ ಮೇಲೆ ಗಮನ ಇರಿಸಿದ್ದೇವೆ. ನಾವು ಸಮಕಾಲೀನ ಸಾಧನೆಗಳನ್ನು ಎತ್ತಿ ತೋರಿಸಿದಾಗಲೂ ನಾವು ನಮ್ಮ ನಾಗರಿಕ ಪರಂಪರೆಯನ್ನು ಪ್ರದರ್ಶಿಸಿದ್ದೇವೆ. ಗ್ಲೋಬಲ್ ಜೈವಿಕ ಇಂಧನ ಒಕ್ಕೂಟ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಅನ್ನು ಪ್ರಾರಂಭಿಸಲಾದ ಲ್ಯಾಂಡ್‌ಮಾರ್ಕ್ ಉಪಕ್ರಮಗಳು ಈ ಶೃಂಗಸಭೆ ಒಳಗೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಜಿ20 ಶೃಂಗಸಭೆಯ ಮೂಲಕ ಮೊದಲನೆಯದಾಗಿ ಹಸಿರು ಅಭಿವೃದ್ಧಿ ಒಪ್ಪಂದಕ್ಕೆ ನಿರ್ಧಾರ ಮಾಡಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಕ್ರಿಯಾ ಯೋಜನೆ, ಭ್ರಷ್ಟಾಚಾರ ವಿರೋಧಿ ಉನ್ನತ ಮಟ್ಟದ ತತ್ವಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಬೆಂಬಲ ಹಾಗೂ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸುಧಾರಣೆಯ ನಿರ್ಧಾರಗಳನ್ನು ಪ್ರಮುಖವಾಗಿ ಮಾಡಲಾಗಿದೆ.
ಅದರೊಂದಿಗೆ ಆಫ್ರಿಕನ್ ಒಕ್ಕೂಟದ ಜಿ20 ಸದಸ್ಯತ್ವವು ಒಂದು ಪ್ರಮುಖ ಸಾಧನೆ ಎನಿಸಿಕೊಂಡಿದೆ.

ಭಾರತದ ಮತ್ತೊಂದು ಸಾಧನೆ, ಇದೇ ಮೊದಲ ಬಾರಿಗೆ 20 ಸಾವಿರ ಗಡಿ ಮುಟ್ಟಿದ ನಿಫ್ಟಿ!

ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಯು ಶೃಂಗಸಭೆಯು ಮುಂದಿನ ವರ್ಷಗಳಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ ಎಂದು ಜೈಶಂಕರ್‌ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕೈ-ಕೈ ಹಿಡಿದು ಮಾತನಾಡಿದ ಮೋದಿ-ನಿತೀಶ್‌, ನಿರ್ಮಲಾ ಜೊತೆ ಸ್ಟ್ಯಾಲಿನ್‌ ಮಾತು..ಜಿ20 ಔತಣಕೂಟದಲ್ಲಿ ಕಂಡ ಚಿತ್ರಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!