ಯೋಜನೆ ಅನುಷ್ಠಾನದಲ್ಲಿ ಡಿವಿಎಸ್‌ ಇಲಾಖೆ ನಂ.3!

Published : Oct 03, 2020, 08:22 AM IST
ಯೋಜನೆ ಅನುಷ್ಠಾನದಲ್ಲಿ ಡಿವಿಎಸ್‌ ಇಲಾಖೆ ನಂ.3!

ಸಾರಾಂಶ

ಯೋಜನೆ ಅನುಷ್ಠಾನದಲ್ಲಿ ಡಿವಿಎಸ್‌ ಇಲಾಖೆ ನಂ.3| Rankingಗೆ ಸದಾನಂದಗೌಡ ಸಂತ​ಸ

ನವ​ದೆ​ಹ​ಲಿ(ಅ.03): ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು ಕೇಂದ್ರ ಸರ್ಕಾ​ರದ ಒಟ್ಟಾ​ರೆ 65 ಇಲಾ​ಖೆ​ಗ​ಳ ರಾರ‍ಯಂಕಿಂಗ್‌​ನಲ್ಲಿ 3ನೇ ಸ್ಥಾನ ಪಡೆ​ದಿ​ದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿ​ವಾ​ಲ​ಯ​ಗ​ಳಲ್ಲಿ 2ನೇ ಸ್ಥಾನ ಗಳಿ​ಸಿ​ದೆ.

ನೀತಿ ಆಯೋಗದ ಅಭಿ​ವೃದ್ಧಿ ಮೇಲ್ವಿ​ಚಾ​ರಣೆ ಹಾಗೂ ಮೌಲ್ಯ​ಮಾ​ಪನ ಕಚೇರಿ (ಡಿ​ಇ​ಎಂಒ​), ಕೇಂದ್ರ ಸರ್ಕಾ​ರದ ಯೋಜ​ನೆ​ಗಳನ್ನು ಇಲಾ​ಖೆ​ಗಳು ಹೇಗೆ ಅನು​ಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾ​ವಳಿ ಆಧ​ರಿತ ಆನ್‌​ಲೈ​ನ್‌ ಸಮೀಕ್ಷೆ ನಡೆ​ಸಿತ್ತು. ಇದರ ಫಲಿ​ತಾಂಶ ಆಧ​ರಿಸಿ ಶ್ರೇಯಾಂಕ ಪ್ರಕ​ಟಿ​ಸಿದೆ. ಶ್ರೇಯಾಂಕವು ಸದಾ​ನಂದಗೌಡರ ಇಲಾಖೆ ಉತ್ತಮ ಕಾರ್ಯ​ನಿ​ರ್ವ​ಹಣೆ ತೋರು​ತ್ತಿದೆ ಎಂಬು​ದನ್ನು ಸಾಬೀ​ತು​ಪ​ಡಿ​ಸಿ​ದೆ.

ಈ ಬಗ್ಗೆ ಖುಷಿ ವ್ಯಕ್ತ​ಪ​ಡಿ​ಸಿ​ರುವ ರಸ​ಗೊ​ಬ್ಬರ ಹಾಗೂ ರಾಸಾ​ಯ​ನಿಕ ಸಚಿ​ವ ಸದಾ​ನಂದ​ಗೌ​ಡ, ‘ನೀತಿ ಆಯೋ​ಗವು ವಿವಿಧ ಸಚಿ​ವಾ​ಲ​ಯ​ಗಳ ಕಾರ್ಯ​ವೈ​ಖರಿ ಪರಾ​ಮ​ರ್ಶಿಸಿ ರಿಪೋರ್ಟ್‌ ಕಾರ್ಡ್‌ ಬಿಡು​ಗಡೆ ಮಾಡು​ತ್ತಿ​ರು​ವುದು ಸಂತ​ಸದ ವಿಚಾ​ರ. ಇದ​ರಿಂದ ಯೋಜ​ನೆ​ಗಳ ಪರಿ​ಣಾ​ಮ​ಕಾರಿ ಜಾರಿ ಹಾಗೂ ಗುರಿ ಮುಟ್ಟಲು ಸಹಾ​ಯ​ವಾ​ಗು​ತ್ತದೆ’ ಎಂದಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?