ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ಮಸೂದೆ ಮಂಡನೆ ಅನುಮಾನ?

Published : Nov 28, 2024, 09:18 AM IST
ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ಮಸೂದೆ ಮಂಡನೆ ಅನುಮಾನ?

ಸಾರಾಂಶ

ಜಂಟಿ ಸಂಸದೀಯ ಸಮಿತಿ ಹೆಚ್ಚಿನ ಕಾಲಾವಾಕಾಶ ಕೇಳಿರುವ ಕಾರಣ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ಮಸೂದೆ ಮಂಡನೆಯಾಗುವುದು ಅನುಮಾನ ಎಂದು ಹೇಳಲಾಗಿದೆ.

ನವದೆಹಲಿ (ನ.28): ವಕ್ಪ್‌ ಕಾಯ್ದೆ ತಿದ್ದುಪಡಿ ಕುರಿತು ವರದಿ ನೀಡಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ, ತನ್ನ ಅವಧಿಯನ್ನು ಮುಂದಿನ ಬಜೆಟ್‌ ಅಧಿವೇಶನದ ಅಂತ್ಯದವರೆಗೂ ವಿಸ್ತರಣೆ ಮಾಡುವಂತೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಕೋರಲು ಸರ್ವಾನುಮತದಿಂದ ನಿರ್ಧರಿಸಿದೆ. ಹೀಗಾಗಿ ಬಹುನಿರೀಕ್ಷಿತ ವಕ್ಫ್‌ ತಿದ್ದುಪಡಿ ಮಸೂದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವುದು ಬಹುತೇಕ ಅನುಮಾನವೆಂಬಂತೆ ಕಂಡುಬಂದಿದೆ.

ಬುಧವಾರ ಜೆಪಿಸಿ ಸಭೆ ಆರಂಭವಾದ ಕೆಲ ಹೊತ್ತಿನಲ್ಲೇ, ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಸಭೆಯನ್ನು ಅಣಕ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳ ಸದಸ್ಯರು ಸಭೆಯಿಂದ ಹೊರ ನಡೆದರು. ಇದಾದ ಕೆಲ ಹೊತ್ತಿನಲ್ಲೇ ಬಿಜೆಪಿ ನಾಯಕ ದುಬೆ, ಸಮಿತಿ ಅವಧಿ ವಿಸ್ತರಣೆ ಕೋರಿ ಮನವಿ ಮಾಡಿದರು. ಇದು ಸಮಿತಿಯ ಅವಧಿಯ ವಿಸ್ತರಣೆ ಸುಳಿವು ಎಂದ ಅರಿತ ವಿಪಕ್ಷ ಸದಸ್ಯರು ಒಂದು ಗಂಟೆ ಬಳಿಕ ಮತ್ತೆ ಜೆಪಿಸಿ ಸಭೆಗೆ ಹಾಜರಾದರು. ಬಳಿಕ ಪಾಲ್‌ ಕೂಡಾ ಸದಸ್ಯರ ಮನವಿಗೆ ಓಗೊಟ್ಟು ಸಮಿತಿ ಅವಧಿ ವಿಸ್ತರಣೆಗೆ ಕೋರಿಕೆ ಸಲ್ಲಿಸಲು ಸಮ್ಮತಿಸಿದರು.

ಜೆಪಿಸಿ ಅಧ್ಯಕ್ಷ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಜಗದಾಂಬಿಕಾ ಪಾಲ್ ಅವರು ನವೆಂಬರ್ 27 ರಂದು ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಶೀಲಿಸುತ್ತಿರುವ ಸಮಿತಿಯ ಅವಧಿಯನ್ನು ವಿಸ್ತರಿಸುವ ನಿರ್ಣಯವನ್ನು ಮಂಡಿಸುವುದಾಗಿ ಹೇಳಿದರು. ಪ್ಯಾನೆಲ್‌ನಲ್ಲಿ ವಿರೋಧ ಪಕ್ಷದ ಸದಸ್ಯರು ಹೆಚ್ಚಿನ ಮಧ್ಯಸ್ಥಗಾರರ ಮಾತುಗಳನ್ನು ಆಲಿಸಲು ಜಂಟಿ ಸಮಿತಿಯ ಅವಧಿಯನ್ನು ವಿಸ್ತರಿಸಲು ಕೋರಿದೆ.

“ಈ ಮೂರು ತಿಂಗಳಲ್ಲಿ ನಾವು 29 ಸಭೆಗಳನ್ನು ನಡೆಸಿದ್ದೇವೆ, 147 ಕ್ಕೂ ಹೆಚ್ಚು ನಿಯೋಗಗಳು ನಮ್ಮ ಎದುರು ಬಂದಿವೆ. ನಾವು ಎಲ್ಲಾ ಸಂಘಟನೆಗಳಿಗೆ ಅವಕಾಶ ನೀಡಿದ್ದೇವೆ. ಅದು ಜೆಪಿಸಿಗೆ ಬಂದ ಜನಾದೇಶವಾಗಿದೆ. ಅವರು (ವಿರೋಧ ಪಕ್ಷದ ಸಂಸದರು) ಭಾವಿಸಿದರೆ ನಾವು ಕೆಲವು ಮಾತುಗಳನ್ನು ಕೇಳಬೇಕು. ಹೆಚ್ಚು ಜನರು - ಸಭೆಯನ್ನು ಬಹಿಷ್ಕರಿಸುವ ಮಾರ್ಗವಾಗಬಾರದು. ಸಂಜಯ್ ಸಿಂಗ್, ಕಲ್ಯಾಣ್ ಬ್ಯಾನರ್ಜಿ, ಅಸಾದುದ್ದೀನ್ ಓವೈಸಿ ಸೇರಿದಂತೆ ಎಲ್ಲಾ ಸದಸ್ಯರು ಹೇಳುವುದನ್ನು ನಾನು ಕೇಳಿದ್ದೇನೆ.  ನಾನು ಜೆಪಿಸಿಯ ಅಧಿಕಾರಾವಧಿ ವಿಸ್ತರಣೆಗಾಗಿ ನಾನು ಸದನದಲ್ಲಿ ನಿರ್ಣಯವನ್ನು ಮಂಡಿಸುತ್ತೇನೆ ಎಂಬ ಅಭಿಪ್ರಾಯವನ್ನು ಹೊಂದಿದ್ದೇನೆ" ಎಂದು ಪಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಬಳಕೆಗೆ 16 ವರ್ಷ ಮಿತಿ; ಮಸೂದೆಗೆ ಸಮ್ಮತಿ ನೀಡಿದ ಆಸೀಸ್‌!

ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 25 ರಂದು ಆರಂಭವಾಗಿದ್ದು, ಡಿಸೆಂಬರ್‌ 20ರಂದು ಕೊನೆಗೊಳ್ಳಲಿದೆ. ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಮತ್ತು ಅದಾನಿ ಗ್ರೂಪ್ ವಿರುದ್ಧದ ಲಂಚದ ಆರೋಪಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲಕ್ಕೆ ಕಾರಣವಾಯಿತು. ಉಭಯ ಸದನಗಳ ಕಲಾಪವನ್ನು ಸೋಮವಾರ ಮತ್ತು ಬುಧವಾರ ದಿನದ ಮಟ್ಟಿಗೆ ಮುಂದೂಡಲಾಗಿದೆ.. ಸಂವಿಧಾನ ದಿನಾಚರಣೆಯ ಕಾರಣ ಮಂಗಳವಾರ ಯಾವುದೇ ವ್ಯವಹಾರವನ್ನು ನಡೆದಿರಲಿಲ್ಲ.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್