TTP Attack; ಪ್ರಾರ್ಥನೆ ವೇಳೆ ಭೀಕರ ಉಗ್ರರ ದಾಳಿ; ಕನಿಷ್ಠ 27 ಸಾವು, ಗಡಿಯಲ್ಲಿ ಹೈ ಅಲರ್ಟ್ ಘೋಷಣೆ!

Published : Sep 18, 2026, 09:11 PM IST
Pakistan Attack

ಸಾರಾಂಶ

ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್ ಪ್ರಧಾನ ಕಚೇರಿಯ ಮಸೀದಿಯಲ್ಲಿ ಉಗ್ರರು ಭೀಕರ ಆತ್ಮಘಾತಿ ದಾಳಿ ನಡೆಸಿದ್ದಾರೆ. ಈ ರಕ್ತಸಿಕ್ತ ಘಟನೆಯಲ್ಲಿ 15 ಪೊಲೀಸರು ಸೇರಿದಂತೆ 27 ಜನರು ಸಾವನ್ನಪ್ಪಿದ್ದು, 78ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಟಿಟಿಪಿ (TTP) ಉಗ್ರ ಸಂಘಟನೆ ವಹಿಸಿಕೊಂಡಿದೆ.

ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದಲ್ಲಿ ಮತ್ತೊಮ್ಮೆ ಭಯೋತ್ಪಾದಕರ ಕ್ರೂರ ಮುಖ ಅನಾವರಣಗೊಂಡಿದೆ. ಭದ್ರತಾ ಪಡೆಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಭೀಕರ ಆತ್ಮಘಾತಿ ದಾಳಿ ಹಾಗೂ ಗುಂಡಿನ ಚಕಮಕಿಯಲ್ಲಿ ಕನಿಷ್ಠ 27 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ 15 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ 6 ಜನ ನಾಗರಿಕರು ಸೇರಿದ್ದಾರೆ. ಈ ಘಟನೆಯಲ್ಲಿ 78ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಪೋಲಿಸ್ ಹೆಡ್‌ಕ್ವಾರ್ಟರ್ಸ್‌ನಲ್ಲೇ ರಕ್ತಪಾತ!

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೊಹಾಟ್‌ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ (Police Headquarters) ಆವರಣದಲ್ಲಿದ್ದ ಮಸೀದಿಯಲ್ಲಿ ಈ ರಕ್ತಸಿಕ್ತ ನರಮೇಧ ನಡೆದಿದೆ. ಅಫ್ಘಾನಿಸ್ತಾನದ ಗಡಿಗೆ ತೀರಾ ಹತ್ತಿರದಲ್ಲಿರುವ ಈ ಸೂಕ್ಷ್ಮ ಪ್ರದೇಶದಲ್ಲಿ, ಶುಕ್ರವಾರದ ಪವಿತ್ರ ಪ್ರಾರ್ಥನೆಗಾಗಿ (ಶುಕ್ರವಾರದ ನಮಾಜ್) ನೂರಾರು ಸಂಖ್ಯೆಯಲ್ಲಿ ಪೊಲೀಸರು ಮತ್ತು ಸ್ಥಳೀಯ ನಾಗರಿಕರು ಮಸೀದಿಯಲ್ಲಿ ನೆರೆದಿದ್ದರು. ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಸ್ಫೋಟಕಗಳಿಂದ ತುಂಬಿದ್ದ ಕಾರೊಂದು ಭಾರಿ ವೇಗವಾಗಿ ಮಸೀದಿಯ ಆವರಣಕ್ಕೆ ನುಗ್ಗಿತು.

ಬಾಂಬ್‌ ದಾಳಿ!

ಮುಂದಿನ ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿದ್ದ ಆತ್ಮಘಾತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ಭೀಕರತೆಗೆ ಮಸೀದಿಯ ಕಟ್ಟಡ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಪೊಲೀಸ್ ಪ್ರಧಾನ ಕಚೇರಿಯ ಒಂದು ಭಾಗವೂ ತೀವ್ರವಾಗಿ ಹಾನಿಗೊಳಗಾಗಿದೆ. ಧೂಳು ಮತ್ತು ಹೊಗೆಯ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜನರ ಕಿರುಚಾಟ, ಅಳಲೆಯಿಂದ ಇಡೀ ಪ್ರದೇಶವೇ ಹಹಾಕಾರದಿಂದ ಮುಳುಗಿಹೋಯಿತು.

ಗುಂಡಿನ ಚಕಮಕಿ ಮತ್ತು ಪ್ರತಿದಾಳಿ!

ಬಾಂಬ್ ಸ್ಫೋಟದ ಬೆನ್ನಲ್ಲೇ, ಸನ್ನದ್ಧರಾಗಿ ಬಂದಿದ್ದ ಇಬ್ಬರು ಶಸ್ತ್ರಸಜ್ಜಿತ ಆತ್ಮಘಾತಿ ಉಗ್ರರು ಪ್ರಧಾನ ಕಚೇರಿಯ ಆವರಣಕ್ಕೆ ನುಗ್ಗಿ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಅಂಧಾ ದರ್ಬಾರ್ ಶೈಲಿಯಲ್ಲಿ ಮನಬಂದಂತೆ ಗುಂಡಿನ ಮಳೆ ಕರೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಉಗ್ರರ ವಿರುದ್ಧ ತೀವ್ರ ಪ್ರತಿದಾಳಿ ನಡೆಸಿದರು. ಎರಡೂ ಕಡೆಯಿಂದ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಒಬ್ಬ ದಾಳಿಕೋರನನ್ನು ಭದ್ರತಾ ಪಡೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಬಿಬಿಸಿ ವರದಿ ಮಾಡಿದೆ.

ಟಿಟಿಪಿ (TTP) ಉಗ್ರರಿಂದ ದಾಳಿಯ ಹೊಣೆ!

ಈ ಭೀಕರ ದಾಳಿಯ ಸಂಪೂರ್ಣ ಹೊಣೆಯನ್ನು ನಿಷೇಧಿತ ಉಗ್ರ ಸಂಘಟನೆ 'ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ' (TTP) ವಹಿಸಿಕೊಂಡಿದೆ. ಅಫ್ಘಾನ್ ಗಡಿ ಭಾಗದಲ್ಲಿ ಸಕ್ರಿಯವಾಗಿರುವ ಈ ಸಂಘಟನೆಯು ಕಳೆದ ಕೆಲವು ಸಮಯದಿಂದ ಪಾಕಿಸ್ತಾನಿ ಭದ್ರತಾ ಪಡೆಗಳು, ಪೊಲೀಸರು ಮತ್ತು ಸರ್ಕಾರಿ ಆಸ್ತಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದೆ.

ಹೆಚ್ಚಿದ ಸಾವಿನ ಸಂಖ್ಯೆಯ ಆತಂಕ!

ದಾಳಿಯಲ್ಲಿ ಗಾಯಗೊಂಡ ೭೮ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಕೊಹಾಟ್ ಮತ್ತು ಪೇಶಾವರದ ಪ್ರಮುಖ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅನೇಕ ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ. ಘಟನೆಯ ನಂತರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಗಡಿ ಭಾಗಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನನ್ನ ಮಗ ಯಾವಾಗ ಬರುತ್ತಾನೆ?..’ ಕತಾರ್‌ನಲ್ಲಿ ಬಂಧನದಲ್ಲಿರುವ ಮಾಜಿ ನೌಕಾಪಡೆ ಅಧಿಕಾರಿ, ಭಾರತ ಸರ್ಕಾರಕ್ಕೆ ತಾಯಿಯ ಕಣ್ಣೀರಿನ ಪ್ರಾರ್ಥನೆ!
ಹಿಂದಿ ವಿಚಾರವಾಗಿ ಯೋಚನೆ ಬದಲಿಸಿಕೊಳ್ಳಿ, ರಾಜ್ಯಗಳು ಪ್ರತ್ಯೇಕ ದೇಶಗಳ ರೀತಿ ವರ್ತಿಸಬಾರದು: ತಮಿಳುನಾಡಿಗೆ ಸುಪ್ರೀಂ ಚಾಟಿ