ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ

Published : May 01, 2026, 08:39 PM IST
icu

ಸಾರಾಂಶ

ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ, ಆಪರೇಷನ್ ಥಿಯೇಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಫೋಟೋ ಕ್ಲಿಕ್ ಮಾಡಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯ ಯುವತಿ ಫೋಟೋ ಹರಿದಾಡಿದೆ.

ಲಖನೌ (ಮೇ.01) : ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳ ವಿಕೃತಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಪರಿಸ್ಥಿತಿ ಚಿಂತಾಜನಕವಾಗಿದೆ. 22 ವರ್ಷದ ಯುವತಿ ಅನಾರೋಗ್ಯದಿಂದ ಮೆಡಿಕಲ್ ಕಾಲೇಜಿಗೆ ಹಾಜರಾಗಿದ್ದರು. ಆಪರೇಶನ್ ಥಿಯೇಟರ್‌ನಲ್ಲಿ ಸರ್ಜರಿ ವೇಳೆ ಸಿಬ್ಬಂದಿಯೊಬ್ಬರು ಯುವತಿ ಖಾಸಗಿ ಫೋಟೋಗಳನ್ನು ಕ್ಲಿಕ್ ಮಾಡಿ ವ್ಯಾಟ್ಸಾಪ್ ಮೂಲಕ ಹರಿಬಿಟ್ಟಿದ್ದಾರೆ. ಹಲವು ಗ್ರೂಪ್‌ಗಳಲ್ಲಿ ಈ ಪೋಟೋ ವೈರಲ್ ಆದ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದೆ.

ಪ್ರಜ್ಞಾಹೀನ ಸ್ಥಿತಿಯ ಯುವತಿಯ ಫೋಟೋ

ಏಪ್ರಿಲ್ 26 ರಂದು ಈ ಘಟನೆ ನಡೆದಿದ್ದು, ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಸ್ತ್ರೀರೋಗ ವಿಭಾಗದಲ್ಲಿ ಯುವತಿಯನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ನಡೆಯುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯ ಫೋಟೋಗಳನ್ನು ಆಪರೇಷನ್ ಥಿಯೇಟರ್‌ನಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದಾರೆ. ನಂತರ ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಯುವತಿಯ ಕುಟುಂಬದವರ ಗಮನಕ್ಕೆ ಬಂದಿದೆ. ಬಾರ್ಥೋಲಿನ್ ಸಿಸ್ಟ್ (Bartholin's cyst) ತೆಗೆದುಹಾಕಲು ಯುವತಿ ಚಿಕಿತ್ಸೆ ಪಡೆಯುತ್ತಿದ್ದರು. ವೈರಲ್ ಆದ ಫೋಟೋಗಳಲ್ಲಿ ಯುವತಿಯ ಮುಖ ಮತ್ತು ಖಾಸಗಿ ಭಾಗಗಳು ಸ್ಪಷ್ಟವಾಗಿ ಕಾಣುತ್ತಿದ್ದವು.

ಯುವತಿ ಕುಟುಂಬಸ್ಥರಿಂದ ತೀವ್ರ ಆಕ್ರೋಶ

ತಮ್ಮ ಮಗಳ ಘನತೆ ಮತ್ತು ಖಾಸಗಿತನಕ್ಕೆ ಧಕ್ಕೆ ತಂದ ಈ ಕ್ರೂರ ಕೃತ್ಯದ ವಿರುದ್ಧ ಯುವತಿಯ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅವರು ಆಸ್ಪತ್ರೆ ಆಡಳಿತ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ಯಂತ ಸುರಕ್ಷಿತವಾಗಿರಬೇಕಾದ ಆಪರೇಷನ್ ಥಿಯೇಟರ್‌ನಲ್ಲೇ ಇಂತಹ ಘಟನೆ ನಡೆದಿರುವುದು ಆಸ್ಪತ್ರೆ ಸಿಬ್ಬಂದಿಯ ಗಂಭೀರ ನಿರ್ಲಕ್ಷ್ಯ ಎಂದು ಕುಟುಂಬ ಆರೋಪಿಸಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಮೆಡಿಕಲ್ ಕಾಲೇಜು ಆಡಳಿತ ತನಿಖೆಗೆ ಆದೇಶಿಸಿದೆ. ಆಪರೇಷನ್ ವೇಳೆ ಅಲ್ಲಿದ್ದ ವೈದ್ಯರು, ನರ್ಸ್‌ಗಳು ಮತ್ತು ಇತರ ಸಹಾಯಕ ಸಿಬ್ಬಂದಿಯನ್ನು ಕೇಂದ್ರಿಕರಿಸಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಐಟಿ ಕಾಯ್ದೆ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಈ ಘಟನೆ ಸಂಬಂಧ ಆಕ್ರೋಶಗಳು ತೀವ್ರಗೊಳ್ಳುತ್ತಿದೆ. ಸರ್ಜರಿ ಥಿಯೇಟರ್‌ನಲ್ಲಿದ್ದ ಎಲ್ಲಾ ಸಿಬ್ಬಂದಿಗಳ ಮೊಬೈಲ್ ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಪ್ರಕರಣದ ಮೂಲಕ ಎಲ್ಲಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲೆ ತೀವ್ರ ನಿಗಾ ಇಡುವಂತೆ ಸಲಹೆ ನೀಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವವಿದ್ಯಾಲಯದಲ್ಲಿ ಅಳಿಲು 'ಅಟ್ಯಾಕ್'! ಡೀನ್ ಸೇರಿ 20 ಮಂದಿಗೆ ಕಚ್ಚಿ, ಯಾರ ಕೈಗೂ ಸಿಗದೇ ಪರಾರಿ!
ವಿಶ್ವಪಟಲ ಸೇರಿದ ಕರ್ನಾಟಕದ ನೀರ್​ ದೋಸೆ: 100ರ ಟಾಪ್​ ಲಿಸ್ಟ್​ನಲ್ಲಿ ಭಾರತದ 11 ತಿಂಡಿಗಳು- List ಇಲ್ಲಿದೆ