ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ

Published : Jul 24, 2025, 11:54 PM IST
Kerala baby dies after rambutan stuck in his throat

ಸಾರಾಂಶ

ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ನವದೆಹಲಿ (ಜು.24) ರಂಬುಟಾನ್ ಹಣ್ಣು ತಿಂದ ಒಂದು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ. ರಂಬುಟಾನ್ ಹಣ್ಣನ್ನು ತಿನ್ನುತ್ತಾ ಅಜ್ಜಿ ಜೊತೆ ಆಟವಾಡುತ್ತಿದ್ದ ಮಗು ಏಕಾಏಕಿ ಅಸ್ವಸ್ಥಗೊಂಡಿದೆ. ಕಾರಣ ರಂಬುಟಾನ್ ಹಣ್ಣು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸಮಸ್ಯೆ ಎದುರಾಗಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ. ಈ ಘಟನೆ ಕೇರಳದ ಪೆರುಂಬಾವೂರಿನಲ್ಲಿ ನಡೆದಿದೆ.

ಗಂಟಲಿನಲ್ಲಿ ಸಿಲುಕಿದ ರಂಬುಟಾನ್

ಇಡುಕ್ಕಿ ಮೂಲದ ತಾಯಿ ಆತಿರಾಳ ಮಗ ಅವ್ಯುಕ್ತ ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅತಿರಾಳ ಹಾಗೂ ಕುಟುಂಬ ಮಗು ಆಗಮನದಿಂದ ಅತೀವ ಸಂತಸದಲ್ಲಿತ್ತು. ಆದರೆ ಒಂದೇ ವರ್ಷಕ್ಕೆ ಸಂತಸ ಮಾಯವಾಗಿದೆ. ಸಣ್ಣ ಕಣ್ತಪ್ಪಿನಿಂದ ಅತೀ ದೊಡ್ಡ ದುರಂತ ಸಂಭವಿಸಿದೆ. ರಂಬುಟಾನ್ ಹಣ್ಣು ರಸಭರಿತವಾಗಿದೆ. ಆದರೆ ಇದರ ಒಳಗೆ ಬೀಜವೂ ಇದೆ. ಮಗು ರಂಬುಟಾನ್ ಹಣ್ಣು ಬಾಯಿಗೆ ಹಾಕಿದ ತಕ್ಷಣ ನುಂಗಿದೆ. ಆದರೆ ಗಂಟಲಿನಲ್ಲಿ ಸಿಲುಕಿದು ದುರಂತಕ್ಕೆ ಕಾರಣವಾಗಿದೆ.

ರಂಬುಟಾನ್ ಹಣ್ಣಿನ ಸೀಸನ್

ಜುಲೈ-ಆಗಸ್ಟ್ ರಂಬುಟಾನ್ ಹಣ್ಣಿನ ಸೀಸನ್. ಈ ಕಾಲದಲ್ಲಿ ಹೆಚ್ಚಾಗಿ ರಂಬುಟಾನ್ ಹಣ್ಣುಗಳು ಲಭ್ಯವಾಗುತ್ತದೆ. ಹಲವು ಬಗೆಯ ರಂಬುಟಾನ್ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಕೇರಳದಲ್ಲಿ ಹಲವು ಭಾಗದಲ್ಲಿ ಯಥೇಚ್ಚವಾಗಿ ರಂಬುಟಾನ್ ಹಣ್ಣು ಬೆಳೆಯಲಾಗುತ್ತದೆ.

ಮಕ್ಕಳಿಗೆ ಹಣ್ಣು ಸೇರಿದಂತೆ ಇತರ ಆಹಾರ ನೀಡುವಾಗ ಎಚ್ಚರ

ಮಕ್ಕಳಿಗೆ ಹಣ್ಣು ಸೇರಿದಂತೆ ಇತರ ಆಹಾರ ನೀಡುವಾಗ ಅತೀವ ಎಚ್ಚರ ವಹಿಸಬೇಕು. ಮಕ್ಕಳ ಗಂಟಲಿನಲ್ಲಿ ಆಹಾರ, ಹಣ್ಣುಗಳು ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆ ವಹಿಸಬೇಕು.

ಕೇರಳದಲ್ಲಿ ಇತ್ತೀಚೆಗೆ ಇದೇ ರೀತಿ ರಂಬುಟಾನ್ ತಿಂದು 5 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿತ್ತು. ಬಾಲಕನಿಗೆ ರಂಬುಟಾನ್ ಹಣ್ಣಿನ ಹೊರಭಾಗ ಸಿಪ್ಪೆ ತೆಗೆದು ನೀಡಲಾಗಿತ್ತು. ಆದರೆ ಜ್ಯೂಸಿಯಾಗಿರುವ ಈ ರಂಬುಟಾನ್ ಹಣ್ಣು ಬಾಯಿಗೆ ಹಾಕಿಕೊಂಡ ಬೆನ್ನಲ್ಲೇ ಬಾಲಕ ತಿನ್ನಲು ಪ್ರಯತ್ನ ಮಾಡುತ್ತಿದ್ದಂತೆ ಗಂಟಲಿನ ಮೂಲಕ ಜಾರಿದೆ. ಆದರೆ ಒಳಗಿನ ಬೀಜದ ಕಾರಣದಿಂದ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಮೇಲಪ್ಪಾಲಯಂ ಬಳಿ ನಡೆದಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!