ಒಡಿಶಾದ ಬಾಲಸೋರ್ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವಗಳನ್ನು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿ ಇಡಲಾಗಿದೆ.
ಭುವನೇಶ್ವರ: ಒಡಿಶಾದ ಬಾಲಸೋರ್ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವಗಳನ್ನು ವಿವಿಧ ಆಸ್ಪತ್ರೆಗಳ ಶವಾಗಾರದಲ್ಲಿ ಇಡಲಾಗಿದೆ. ಆದರೆ ಈ ಬಗ್ಗೆ ಮಂಗಳವಾರ ಮಾತನಾಡಿರುವ ವೈದ್ಯರು, ಅಪಘಾತದಲ್ಲಿ ಮೃತಪಟ್ಟವರ ಶವಗಳು ಸಾಕಷ್ಟು ಛಿದ್ರ ಛಿದ್ರವಾಗಿವೆ. ಇಂಥ ದೇಹಗಳನ್ನು ರಾಸಾಯನಿಕ ಸಿಂಪಡಿಸಿ ಇಡುವುದು ತುಂಬಾ ಕಷ್ಟಕರ. ಈಗಾಗಲೇ ಶವಗಳನ್ನು ಹೀಗೆ ಇರಿಸಿ 80 ಗಂಟೆಗಳಾಗಿವೆ. ಇನ್ನು ದೇಹಗಳು ದೀರ್ಘಾವಧಿಗೆ ಕೊಳೆಯದಂತೆ ಎಂಬಾಮಿಂಗ್ ಕೂಡ ಮಾಡಬಹುದು. ಆದರೆ ಮೃತಪಟ್ಟ 12 ತಾಸಿನೊಳಗೆ ಮಾತ್ರ ಎಂಬಾಮಿಂಗ್ ಮಾಡಬೇಕು. ಆಗ ಮಾತ್ರ ಮೃತದೇಹ ಸುಸ್ಥಿತಿಯಲ್ಲಿರುತ್ತದೆ. ಹೀಗಾಗಿ ಎಂಬಾಮಿಂಗ್ ಕೂಡ ಫಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಮೃತದೇಹಗಳ ಡಿಎನ್ಎ ಕೂಡ ಸಂಗ್ರಹಿಸಿ ಇಡಲಾಗುತ್ತಿದೆ. ಇದರಿಂದ ಅವರ ಬಂಧುಗಳನ್ನು ಪತ್ತೆ ಮಾಡಬಹುದಾಗಿದೆ. ರೈಲ್ವೆ ಇಲಾಖೆಯು, ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧುಗಳು ಮಾತನಾಡಬಹುದು ಎಂದು ಮನವಿ ಮಾಡಿದೆ.
ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..
30 ಕಿ.ಮೀ. ವೇಗದಲ್ಲಿ ಚಲಿಸಿದ ಕೋರಮಂಡಲ್ ಎಕ್ಸ್ಪ್ರೆಸ್!
ಭುವನೇಶ್ವರ: ತ್ರಿವಳಿ ರೈಲು ದುರಂತಕ್ಕೆ ಕಾರಣವಾಗಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು (Coromandel Express Train), ಅಪಘಾತ ಸಂಭವಿಸಿದ ನಂತರ ಇದೇ ಮೊದಲ ಬಾರಿ ಮಂಗಳವಾರ ಬಾಹಾನಗಾ ನಿಲ್ದಾಣದ ಮೂಲಕ ಸಂಚರಿಸಿತು. ಈ ವೇಳೆ ಕೇವಲ 30 ಕಿ.ಮೀ. ವೇಗದಲ್ಲಿ ರೈಲು ಸಾಗಿತು. ಅಪಘಾತದ ದಿನ ಗಂಟೆಗೆ 128 ಕಿ.ಮೀ. ವೇಗದಲ್ಲಿ ರೈಲು ಸಂಚರಿಸುತ್ತಿತ್ತು. ರೈಲು ಸಂಚಾರ ಪುನಾರಂಭದ ನಂತರ ಬಾಹಾನಗಾ ಮೂಲಕ 70 ರೈಲುಗಳು ಸಾಗಿವೆ.
ಕಟಕ್ನಲ್ಲಿ ರೈಲು ದುರಂತದ ಗಾಯಾಳುಗಳ ಭೇಟಿ ಮಾಡಿದ ಮಮತಾ
ಕಟಕ್: ಶುಕ್ರವಾರದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಾಯಗೊಂಡು ಕಟಕ್ ಆಸ್ಪತ್ರೆಯಲ್ಲಿ (Cuttack hospital) ದಾಖಲಾಗಿರುವ ಗಾಯಾಳುಗಳ ಆರೋಗ್ಯವನ್ನು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ವಿಚಾರಿಸಿದರು. ಕೋಲ್ಕತಾದಿಂದ ಬಂದವರೇ ಇಲ್ಲಿನ ಎಸ್ಸಿಬಿ ಆಸ್ಪತ್ರೆಗೆ ದಾಖಲಾದವರನ್ನು ಮಮತಾ ಭೇಟಿ ಮಡಿದರು. ಮತ್ತೊಂದೆಡೆ ಬಂಗಾಳದ ಸಚಿವರಾದ ಶಶಿ ಪಂಜಾ ಹಾಗೂ ಚಂದ್ರಿಮಾ ಭಟ್ಟಾಚಾರ್ಯ (Chandrima Bhattacharya) ಅವರು ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಮಾತನಾಡಿಸಿದರು. ಇನ್ನು ಬಂಗಾಳದ 24 ಪರಗಣದಲ್ಲಿ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಮೃತರ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಬಂಗಾಳದ 103 ಮಂದಿ ದುರಂತದಲ್ಲಿ ಮೃತಪಟ್ಟಿದ್ದು 30 ಮಂದಿ ಕಾಣೆಯಾಗಿದ್ದಾರೆ.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..