ಒಡಿಶಾ ತ್ರಿವಳಿ ರೈಲು ದುರಂತ: 101 ಶವ​ಗಳ ಗುರುತು ಪತ್ತೆ ಬಾಕಿ: ಶವ ಸಂರ​ಕ್ಷಣೆ ಕಷ್ಟ​ವೆಂದ ವೈದ್ಯ​ರು

Published : Jun 07, 2023, 08:30 AM IST
ಒಡಿಶಾ ತ್ರಿವಳಿ ರೈಲು ದುರಂತ: 101 ಶವ​ಗಳ ಗುರುತು ಪತ್ತೆ ಬಾಕಿ:  ಶವ ಸಂರ​ಕ್ಷಣೆ ಕಷ್ಟ​ವೆಂದ ವೈದ್ಯ​ರು

ಸಾರಾಂಶ

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತ​ಪ​ಟ್ಟ​ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವ​ಗ​ಳನ್ನು ವಿವಿಧ ಆಸ್ಪ​ತ್ರೆ​ಗಳ ಶವಾ​ಗಾ​ರದಲ್ಲಿ ಇಡ​ಲಾ​ಗಿದೆ.

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಮೃತ​ಪ​ಟ್ಟ​ 101 ಮಂದಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಈ 101 ಶವ​ಗ​ಳನ್ನು ವಿವಿಧ ಆಸ್ಪ​ತ್ರೆ​ಗಳ ಶವಾ​ಗಾ​ರದಲ್ಲಿ ಇಡ​ಲಾ​ಗಿದೆ. ಆದರೆ ಈ ಬಗ್ಗೆ ಮಂಗ​ಳ​ವಾರ ಮಾತ​ನಾ​ಡಿ​ರುವ ವೈದ್ಯರು, ಅ​ಪ​ಘಾ​ತ​ದಲ್ಲಿ ಮೃತ​ಪ​ಟ್ಟ​ವರ ಶವ​ಗಳು ಸಾಕಷ್ಟು ಛಿದ್ರ ಛಿದ್ರ​ವಾ​ಗಿವೆ. ಇಂಥ ದೇಹ​ಗ​ಳನ್ನು ರಾಸಾ​ಯ​ನಿಕ ಸಿಂಪ​ಡಿಸಿ ಇಡು​ವುದು ತುಂಬಾ ಕಷ್ಟ​ಕರ. ಈಗಾ​ಗಲೇ ಶವ​ಗ​ಳನ್ನು ಹೀಗೆ ಇರಿಸಿ 80 ಗಂಟೆ​ಗ​ಳಾ​ಗಿವೆ. ಇನ್ನು ದೇಹ​ಗಳು ದೀರ್ಘಾ​ವ​ಧಿಗೆ ಕೊಳೆ​ಯ​ದಂತೆ ಎಂಬಾ​ಮಿಂಗ್‌ ಕೂಡ ಮಾಡ​ಬ​ಹುದು. ಆದರೆ ಮೃತ​ಪಟ್ಟ 12 ತಾಸಿ​ನೊ​ಳಗೆ ಮಾತ್ರ ಎಂಬಾ​ಮಿಂಗ್‌ ಮಾಡ​ಬೇಕು. ಆಗ ಮಾತ್ರ ಮೃತ​ದೇಹ ಸುಸ್ಥಿ​ತಿ​ಯ​ಲ್ಲಿ​ರು​ತ್ತದೆ. ಹೀಗಾಗಿ ಎಂಬಾ​ಮಿಂಗ್‌ ಕೂಡ ಫಲ ನೀಡು​ವು​ದಿ​ಲ್ಲ ಎಂದು ಹೇಳಿ​ದ್ದಾ​ರೆ.

ಇನ್ನು ಮೃತ​ದೇ​ಹ​ಗಳ ಡಿಎ​ನ್‌ಎ ಕೂಡ ಸಂಗ್ರ​ಹಿಸಿ ಇಡಲಾ​ಗು​ತ್ತಿದೆ. ಇದ​ರಿಂದ ಅವರ ಬಂಧು​ಗ​ಳನ್ನು ಪತ್ತೆ ಮಾಡ​ಬ​ಹು​ದಾ​ಗಿ​ದೆ. ರೈಲ್ವೆ ಇಲಾ​ಖೆಯು, ಸಹಾಯ​ವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧು​ಗಳು ಮಾತ​ನಾ​ಡ​ಬ​ಹುದು ಎಂದು ಮನವಿ ಮಾಡಿದೆ.

ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..

30 ಕಿ.ಮೀ. ವೇಗ​ದಲ್ಲಿ ಚಲಿ​ಸಿದ ಕೋರ​ಮಂಡಲ್‌ ಎಕ್ಸ್‌​ಪ್ರೆ​ಸ್‌!

ಭುವ​ನೇ​ಶ್ವ​ರ: ತ್ರಿವಳಿ ರೈಲು ದುರಂತಕ್ಕೆ ಕಾರ​ಣ​ವಾ​ಗಿದ್ದ ಕೋರ​ಮಂಡಲ್‌ ಎಕ್ಸ್‌​ಪ್ರೆಸ್‌ ರೈಲು (Coromandel Express Train), ಅಪ​ಘಾತ ಸಂಭ​ವಿ​ಸಿದ ನಂತರ ಇದೇ ಮೊದಲ ಬಾರಿ ಮಂಗ​ಳ​ವಾರ ಬಾಹಾ​ನಗಾ ನಿಲ್ದಾ​ಣದ ಮೂಲಕ ಸಂಚ​ರಿ​ಸಿತು. ಈ ವೇಳೆ ಕೇವಲ 30 ಕಿ.ಮೀ. ವೇಗ​ದಲ್ಲಿ ರೈಲು ಸಾಗಿತು. ಅಪ​ಘಾ​ತದ ದಿನ ಗಂಟೆಗೆ 128 ಕಿ.ಮೀ. ವೇಗ​ದಲ್ಲಿ ರೈಲು ಸಂಚ​ರಿ​ಸು​ತ್ತಿ​ತ್ತು. ರೈಲು ಸಂಚಾರ ಪುನಾ​ರಂಭದ ನಂತರ ಬಾಹಾ​ನಗಾ ಮೂಲಕ 70 ರೈಲು​ಗಳು ಸಾಗಿ​ವೆ.

ಕಟ​ಕ್‌ನಲ್ಲಿ ರೈಲು ದುರಂತದ ಗಾಯಾ​ಳು​ಗ​ಳ ಭೇಟಿ ಮಾಡಿದ ಮಮ​ತಾ

ಕಟಕ್‌: ಶುಕ್ರವಾರದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಾಯ​ಗೊಂಡು ಕಟ​ಕ್‌ ಆಸ್ಪ​ತ್ರೆ​ಯಲ್ಲಿ (Cuttack hospital) ದಾಖ​ಲಾ​ಗಿ​ರುವ ಗಾಯಾ​ಳು​ಗಳ ಆರೋ​ಗ್ಯ​ವನ್ನು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ವಿಚಾ​ರಿ​ಸಿ​ದರು. ಕೋಲ್ಕ​ತಾ​ದಿಂದ ಬಂದ​ವರೇ ಇಲ್ಲಿನ ಎಸ್‌ಸಿಬಿ ಆಸ್ಪತ್ರೆಗೆ ದಾಖ​ಲಾ​ದ​ವ​ರನ್ನು ಮಮತಾ ಭೇಟಿ ಮಡಿ​ದ​ರು. ಮತ್ತೊಂದೆಡೆ ಬಂಗಾಳದ ಸಚಿ​ವ​ರಾದ ಶಶಿ ಪಂಜಾ ಹಾಗೂ ಚಂದ್ರಿಮಾ ಭಟ್ಟಾಚಾರ್ಯ (Chandrima Bhattacharya) ಅವರು ಭುವನೇಶ್ವರದ ಏಮ್ಸ್‌ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಮಾತನಾಡಿಸಿದರು. ಇನ್ನು ಬಂಗಾಳದ 24 ಪರಗಣದಲ್ಲಿ ರಾಜ್ಯಪಾಲ ಸಿ ವಿ ಆನಂದ ಬೋಸ್‌ ಅವರು ಮೃತರ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಬಂಗಾ​ಳದ 103 ಮಂದಿ ದುರಂತ​ದಲ್ಲಿ ಮೃತ​ಪ​ಟ್ಟಿದ್ದು 30 ಮಂದಿ ಕಾಣೆ​ಯಾ​ಗಿ​ದ್ದಾ​ರೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಬ್ಬರಿ ರೈತರಿಗೆ ಕೇಂದ್ರ ಬಂಪರ್ : ಬೆಂಬಲ ಬೆಲೆ ಹೆಚ್ಚಳ
ಜನಗಣತಿಗೆ ಕೇಂದ್ರ ಸಂಪುಟ ಅಸ್ತು