ಪತ್ನಿ, ಅತ್ತೆಯನ್ನು ಮನೆ ಹಿಂದೆಯೇ ಹೂತು ಹಾಕಿ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಅಳಿಯ

Published : Jul 31, 2025, 02:13 PM ISTUpdated : Jul 31, 2025, 03:04 PM IST
Man Buries Wife and Mother-in-Law in Garden

ಸಾರಾಂಶ

ಮಯೂರ್‌ಭಂಜ್‌ನಲ್ಲಿ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ ವ್ಯಕ್ತಿಯೊಬ್ಬ ತೋಟದಲ್ಲಿ ಶವ ಹೂತುಹಾಕಿ ಬಾಳೆಗಿಡ ನೆಟ್ಟ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹತ್ಯೆಗೆ ಕಾರಣ ಎನ್ನಲಾಗಿದೆ.

ಮಯೂರ್‌ಭಂಜ್‌: ವ್ಯಕ್ತಿಯೊಬ್ಬ ತನ್ನ 23 ವರ್ಷದ ಪತ್ನಿ ಹಾಗೂ ಆಕೆಯ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಒಡಿಶಾದ ಮಯೂರ್‌ಬಂಜ್‌ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯ ಬಳಿಕ ತನ್ನ ಮನೆಯ ಗಾರ್ಡನ್‌ನಲ್ಲೇ ಹೊಂಡ ತೋಡಿ ಶವ ಹೂತು ಹಾಕಿದ ಆರೋಪಿ ಮೇಲೆ ಬಾಳೆಗಿಡಗಳನ್ನು ನೆಟ್ಟಿದ್ದ. ಆದರೆ ಈತನ ಕೃತ್ಯಕ್ಕೆ ಕಾರಣ ಏನು ಎಂಬುದು ಬಯಲಾಗಿಲ್ಲ. ಆದರೆ ಗಂಡ ಹೆಂಡತಿ ಮಧ್ಯೆ ಆರಂಭದಿಂದಲೂ ಕಿತ್ತಾಟವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಕೊಲೆ ಮಾಡಿ ಗಾರ್ಡನ್‌ನಲ್ಲಿ ಹೂತು ಹಾಕಿದ:

ಕೊಲೆಯ ನಂತರ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಆರೋಪಿ ಮನೆಯ ಗಾರ್ಡ್‌ನನಲ್ಲೇ ಅತ್ತೆ ಹಾಗೂ ಹೆಂಡ್ತಿಗೆ ಹೊಂಡ ತೊಡಿ ಅವರನ್ನು ಅದಕ್ಕೆ ಹಾಕಿ ಮುಚ್ಚಿ ಮೇಲೆ ಬಾಳೆಗಿಡ ನೆಟ್ಟಿದ್ದ. 23 ವರ್ಷದ ಸೋನಾಲಿ ದಲಾಲ್ ಹಾಗೂ ಸುಮತಿ ದಲಾಲ್‌ ಹತ್ಯೆಯಾದವರು. ಗಂಡ ಹೆಂಡತಿಯ ಮಧ್ಯೆ ಹೊಂದಾಣಿಕೆ ಇಲ್ಲದ ಕಾರಣ ತವರು ಮನೆಗೆ ಬಂದಿದ್ದ ಸೋನಾಲಿ ದಲಾಲ್ ಅವರನ್ನು ಅವರ ತಾಯಿ ಸುಮತಿ ದಲಾಲ್, ಆಕೆಯ ಪತಿ ದೇಬಾಶಿಶ್‌ ಪಾತ್ರನ ಮನೆಗೆ ಸಂಧಾನ ಮಾಡುವುದಕ್ಕಾಗಿ ಕರೆದುಕೊಂಡು ಬಂದಿದ್ದರು.

ಹೂತು ಹಾಕಿದ ಜಾಗದಲ್ಲಿ ಬಾಳೆಗಿಡ

ಆದರೆ ನಂತರ ಏನಾಗಿದೆ ಎಂಬುದು ಗೊತ್ತಿಲ್ಲ, ಜುಲೈ 19ರಂದು ಸೋನಾಲಿ ಪತಿ ದೇಬಾಶಿಶ್‌, ತಾಯಿ ಮಗಳು ಇಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಇಬ್ಬರೂ ನಿದ್ದೆಯಲ್ಲಿದ್ದಾಗ ಈ ಕೊಲೆ ನಡೆದಿದೆ. ಆ ಸಮಯದಲ್ಲಿ ಕತ್ತಲ ರಾತ್ರಿಯ ಜೊತೆ ಮಳೆಯೂ ಜೋರಾಗಿ ಸುರಿಯುತ್ತಿತ್ತು ಎನ್ನಲಾಗಿದೆ. ಕೊಲೆ ಮಾಡಿದ ನಂತರ ವಿರಮಿಸದ ದೇಬಾಶಿಶ್‌, ಮನೆ ಹಿಂದಿನ ನಿಂಬೆ ತೋಟದಲ್ಲಿ ಹೊಂಡ ತೋಡಿ ಅವರಿಬ್ಬರು ಹೂತು ಹಾಕಿದ್ದಾನೆ. ನಂತರ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಅಲ್ಲಿ ಬಾಳೆಗಿಡವನ್ನು ನೆಟ್ಟಿದ್ದಾನೆ.

ಇದಾದ ನಂತರ ಪೊಲೀಸ್ ಠಾಣೆಗೆ ಹೋದ ದೇಬಾಶಿಶ್‌, ಅಲ್ಲಿ ಪತ್ನಿ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ಅಲ್ಲದೇ ತನ್ನ ಅತ್ತೆ ಮನೆಯವರಿಗೆ ಆತ, ಸೋನಾಲಿ ಹಾಗೂ ಸುಮತಿ ತಮ್ಮ ಮಗನನ್ನು ಇಲ್ಲಿ ಬಿಟ್ಟು ಮಯೂರ್‌ಬಂಜ್‌ನಿಂದ ಹೊರಟು ಹೋಗಿದ್ದಾರೆ ಎಂದು ಹೇಳಿದ್ದಾನೆ.

ಇತ್ತ ದೆಬಾಶಿಶ್ ಪಾತ್ರ ಹಾಗೂ ಅವರ ಪುತ್ರ ಇದಾದ ನಂತರ ಆರಾಮವಾಗಿಯೇ ದಿನ ಕಳೆದಿದ್ದಾರೆ. ಆದರೆ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ನಿಂಬೆ ತೋಟದಲ್ಲಿ ಮಣ್ಣು ಅಗೆದಂತೆ ಇದ್ದು, ಅಲ್ಲಿ ಹೊಸದಾಗಿ ಬಾಳೆಗಿಡ ನೆಟ್ಟಿದ್ದಾರೆ ಇದರಲ್ಲೇನೋ ನಿಗೂಢತೆ ಇದೆ ಎಂದು ಅನುಮಾನಗೊಂಡ ನೆರೆಹೊರೆಯ ಮನೆಯವರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್