ಗಂಡ ಮೋದಿ ಘೋಷಣೆ ಕೂಗಿದರೆ ಊಟ ಕೊಡಬೇಡಿ, ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ!

Published : Mar 10, 2024, 07:07 PM IST
ಗಂಡ ಮೋದಿ ಘೋಷಣೆ ಕೂಗಿದರೆ ಊಟ ಕೊಡಬೇಡಿ, ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ!

ಸಾರಾಂಶ

ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಇದೀಗ ವೈರಲ್ ಆಗಿದೆ. ಗಂಡ ಮೋದಿ, ಮೋದಿ ಎಂದು ಘೋಷಣೆ ಕೂಗಿದರೆ, ಊಟ ಕೊಡಬೇಡಿ ಎಂದು ಕೇಜ್ರಿವಾಲ್ ಮಹಿಳರಲ್ಲಿ ಮನವಿ ಮಾಡಿದ್ದಾರೆ.   

ನವದೆಹಲಿ(ಮಾ.10) ಲೋಕಸಭಾ ಚುನಾವಣಾ ಪ್ರಚಾರಗಳು ಆರಂಭಗೊಂಡಿದೆ. ನಾಯಕರ ಕೆಲ ಹೇಳಿಕೆ ಆಕ್ರೋಕ್ಕೆ ಗುರಿಯಾಗುತ್ತಿದ್ದರೆ, ಕೆಲ ಮಾತುಗಳು ವಾಕ್ಸಮರಕ್ಕೆ ನಾಂದಿ ಹಾಡಿದೆ. ಮತ್ತೆ ಕೆಲ ಹೇಳಿಕೆಗೆ ನಗೆಪಾಟಲೀಗೀಡಾಗಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳಾ ಮತದಾರರಲ್ಲಿ ಮಾಡಿದ ಮನವಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವು ಪುರುಷರು ಮೋದಿ, ಮೋದಿ ಘೋಷಣೆ ಕೂಗುತ್ತಿದ್ದಾರೆ. ಹೀಗೆ ಯಾರಾದರೂ ಕೂಗಿದರೆ ಅವರಿಗೆ ಊಟ ಕೊಡಬೇಡಿ ಎಂದು ಮಹಿಳಾ ಮತದಾರರಲ್ಲಿ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಆಯೋಜಿಸಿದ ಮಹಿಳಾ ಸಮ್ಮಾನ್ ಸಮಾರಂಭದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪತಿ ಮೋದಿ ಘೋಷಣೆ ಕೂಗಿದರೆ ಅವರಿಗೆ ಊಟ, ತಿಂಡಿ ಏನೂ ಕೊಡಬೇಡಿ. ಈಗಲೂ ಹಲವರು ಪುರುಷರು ಮೋದಿ ಮೋದಿ ಘೋಷಣೆ ಕೂಗುತ್ತಿದ್ದಾರೆ.ಅವರನ್ನು ಸರಿದಾರಿಗೆ ತರಲು ನೀವು ಪ್ರಯತ್ನಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಜೂನ್ 15ರೊಳಗೆ ಪ್ರಧಾನ ಕಚೇರಿ ತೊರೆಯಲು ಆಮ್ ಆದ್ಮಿಗೆ ಸುಪ್ರೀಂ ಕೋರ್ಟ್ ವಾರ್ನಿಂಗ್!

ಮಹಿಳೆಯರೇ  ಯಾರಾದರೂ ನಿಮ್ಮ ಕುಟುಂಬಸ್ಥರು, ಆಪ್ತರು ಬಿಜೆಪಿ ಬೆಂಬಲಿಸುತ್ತಿದ್ದರೆ, ಅವರ ಬಳಿ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಕೇವಲ ನಿಮ್ಮ ಅಣ್ಣ ಅರವಿಂದ್ ಕೇಜ್ರಿವಾಲ್ ಮಾತ್ರ ನಿಮ್ಮ ಜೊತೆ ನಿಲ್ಲುತ್ತಾರೆ. ನಿಮ್ಮ ಕುಟುಂಬದ ನೆರವಿಗೆ ಯೋಜನೆ ಮೂಲಕ ನೆರವಾಗುತ್ತಾರೆ. ಇನ್ಯಾರು ನಿಮ್ಮ ಜೊತೆ ಇರುವುದಿಲ್ಲ ಎಂದು ವಿವರಿಸಬೇಕು. ಇದರಿಂದ ಬಿಜೆಪಿ ಬೆಂಬಲಿಸುವವರೂ ಕೂಡ ಆಪ್ ಬೆಂಬಲಿಸುತ್ತಾರೆ ಎಂದು ಮಹಿಳೆಯರಿಗೆ ಹೊಸ ಟಾಸ್ಕ್ ನೀಡಿದ್ದಾರೆ.

ಮಹಿಳೆಯರು ಮಾತುಗಳು ಹೆಚ್ಚು ಪರಿಣಾಮಕಾರಿಯಾಗಲಿದೆ. ನೀವು ಬಿಜೆಪಿ ಬೆಂಬಲಿಸುವವರನ್ನು ಆಪ್ ಬೆಂಬಲಿಸುವಂತೆ ಮಾಡಬೇಕು ಎಂದು ಪರೋಕ್ಷ ಟಾಸ್ಕ್ ನೀಡಿದ್ದಾರೆ. ಬಿಜೆಪಿ ಮಹಿಳೆಯರಿಗೆ ಏನೂ ಮಾಡಿಲ್ಲ. ದೆಹಲಿ ಜನತೆಗೂ ಏನೂ ಮಾಡಿಲ್ಲ. ನಾವು ವಿದ್ಯುತ್ ಉಚಿತವಾಗಿ ನೀಡಿದ್ದೇವೆ. ಬಸ್ ಫ್ರಿ ಕೊಟ್ಟಿದ್ದೇವೆ. ಇನ್ನು ಮಹಿಳಿಯರಿಗೆ 1,000 ರೂಪಾಯಿ ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದನ್ನು ಬಿಜೆಪಿ ಮಾಡಿಲ್ಲ. ಅವರಿಗೆ ಈ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಧ್ರುವ್ ರಾಥಿ ವಿಡಿಯೋ ಹಂಚಿ ತಪ್ಪುಮಾಡಿದ್ದೇನೆ, ಸುಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್ ತಪ್ಪೊಪ್ಪಿಗೆ!

ಆಪ್ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುತ್ತಿದೆ. ಇದು ದೇಶದ ಅತೀ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಇಂತಹ ಯೋಜನೆ ಕೇವಲ ನಿಮ್ಮ ಅಣ್ಣ ಅರವಿಂದ್ ಕೇಜ್ರಿವಾಲ್ ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ