
ಪಣಜಿ(ಮೇ.14): ಆಮ್ಲಜನಕದ ಸಮಸ್ಯೆಗಳಿಂದ ಹೆಚ್ಚಿನ ಸಾವುಗಳು ಸಂಭವಿಸಬಾರದು ಎಂದು ಗೋವಾದಲ್ಲಿರುವ ಬಾಂಬೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನಂತರ, ರಾಜ್ಯದ ಅತಿದೊಡ್ಡ ಕೋವಿಡ್ ಕೇಂದ್ರವಾದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ 2 ರಿಂದ 6 ರವರೆಗೆ 15 ಸಾವು ಸಂಭವಿಸಿದೆ.
ಆಕ್ಸಿಜನ್ ಪೋರೈಕೆ ಕಮ್ಮಿಯಾಗಿ 15 ಸೋಂಕಿತರು ಸಾವನ್ನಪ್ಪಿದ್ದಾರೆ. ಮುಂಜಾನೆ 1 ಗಂಟೆ ಸುಮಾರಿಗೆ ಆಸ್ಪತ್ರೆಯ ಕೋವಿಡ್ ವಾರ್ಡ್ಗಳಲ್ಲಿ ಆಮ್ಲಜನಕದ ಕೊರತೆ ಕಂಡು ಬಂತು. ಕೊರತೆ ಆರಂಭವಾದಂತೆ ಜಿಎಂಸಿಎಚ್ನ ಸಂಬಂಧಿಕರು ಮತ್ತು ನಿವಾಸಿ ವೈದ್ಯರು ರಾತ್ರಿಯಿಡೀ ಆಕ್ಸಿಜನ್ಗಾಗಿ ಬಹಳಷ್ಟು ಪ್ರಯತ್ನ ಮಾಡಿದ್ದರು. ಆದರೆ ಸುಮಾರು 20 ನಿಮಿಷಗಳ ನಂತ್ರ ಆಕ್ಸಿಜನ್ ಲಭ್ಯವಾಗಿದ್ದು ಅಷ್ಟೊತ್ತಿಗಾಗಲೇ 15 ಜನರು ಸಾವನ್ನಪ್ಪಿದ್ದಾರೆ.
ಗೋವಾ ಆಸ್ಪತ್ರೆಯಲ್ಲಿ 26 ಸೋಂಕಿತರ ಸಾವು: ಹೈಕೋರ್ಟ್ನಿಂದ ತನಿಖೆ!
ಅವರು ಮಂಗಳವಾರ ಮುಂಜಾನೆ ಜಿಎಂಸಿಎಚ್ನಲ್ಲಿ ಆಮ್ಲಜನಕದ ಸಮಸ್ಯೆಗಳಿಂದ 26 ಕೋವಿಡ್ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳಿದ ನಂತರ ಹೈಕೋರ್ಟ್ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ಸೂಚಿಸಿತ್ತು.
ಪೈಪ್ಲೈನ್ನಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಆಕ್ಸಿಜನ್ ಒತ್ತಡ ಆರಂಭವಾಯ್ತು. ಫ್ಲಕ್ಚುಯೇಷನ್ನಿಂದ ಅವರ ವಾರ್ಡ್ನ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಜಿಎಂಸಿಎಚ್ ವಾರ್ಡ್ ವೈದ್ಯರು ತಿಳಿಸಿದ್ದಾರೆ. ರೋಗಿಗಳು ಉಸಿರಾಡಲು ಕಷ್ಟಪಡುವಾ ಅವರ ಸ್ಯಾಚುರೇಶನ್ ಮಟ್ಟಗಳು (ಎಸ್ಪಿಒ 2) 40-50ಕ್ಕೆ ಇಳಿದಿದೆ ಎಂದು ಸಂಬಂಧಿಕರು ನಮ್ಮನ್ನು ಕರೆದಿದ್ದಾರೆ. ನಿರ್ಣಾಯಕ ಹಂತದಲ್ಲಿರುವರೋಗಿಗಳೊಂದಿಗೆ ಸಂಬಂಧಿಕರಿಗೆ ವಾರ್ಡ್ಗಳಲ್ಲಿರಲು ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ