ಪಾನಿಪುರಿ ಗಾಡಿಯ ಮೇಲೆ ಎರಡು ದಿನದ ಹಸುಗೂಸನ್ನು ಬಿಟ್ಟು ಹೋದ ಇಬ್ಬರು ಯುವತಿಯರು!

Published : Mar 21, 2026, 05:38 PM IST
newborn baby

ಸಾರಾಂಶ

ಅಹಮದಾಬಾದ್‌ನಲ್ಲಿ ಇಬ್ಬರು ಯುವತಿಯರು ಎರಡು ದಿನದ ನವಜಾತ ಶಿಶುವನ್ನು ಪಾನಿಪುರಿ ಗಾಡಿಯ ಮೇಲೆ ತ್ಯಜಿಸಿ ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಹಮದಾಬಾದ್ ನಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವಂತಹ ನಾಚಿಕೆಗೇಡಿನ ಘಟನೆ ಬೆಳಕಿಗೆ ಬಂದಿದೆ. ನಗರದ ಭಟ್ ಹಳ್ಳಿ ಪ್ರದೇಶದಲ್ಲಿರುವ ಕೊಠಾರಿ ಆಸ್ಪತ್ರೆ ಸಮೀಪ ಇಬ್ಬರು ಯುವತಿಯರು ಕೇವಲ ಎರಡು ದಿನಗಳ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಘಟನೆ ವಿವರ

ಮಾರ್ಚ್ 17ರಂದು ರಾತ್ರಿ ಸುಮಾರು 9:10 ಗಂಟೆ ಸುಮಾರಿಗೆ ಆಸ್ಪತ್ರೆ ಹೊರಭಾಗದಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿ ಸ್ಥಳೀಯರು ಅಚ್ಚರಿಗೊಂಡರು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅಹಮದಾಬಾದ್ ವಿಮಾನ ನಿಲ್ದಾಣ ವಿಭಾಗದ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು.

ಸ್ಥಳಕ್ಕೆ ತಲುಪಿದ ಪೊಲೀಸರು, ಮಗುವನ್ನು ಒಂದೇ ಬಟ್ಟೆಯಲ್ಲಿ ಸುತ್ತಿ ಪಾನಿಪೂರಿ ಬಿಟ್ಟುಹೋಗಿರುವುದನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಮಗುವನ್ನು ರಕ್ಷಿಸಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ಮಗು ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಪಾನಿ ಪುರಿ ಗಾಡಿಯ ಮೇಲೆ ಮಗುವನ್ನು ಇಟ್ಟ ಮಹಿಳೆಯರು

ಈ ಹೃದಯವಿದ್ರಾವಕ ಘಟನೆ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ದೃಶ್ಯಾವಳಿಗಳ ಪ್ರಕಾರ, ಇಬ್ಬರು ಯುವತಿಯರು ಕಿರಿದಾದ ಓಣಿಯ ಮೂಲಕ ಸ್ಥಳಕ್ಕೆ ಬರುತ್ತಿರುವುದು ಕಾಣಿಸುತ್ತದೆ. ಅವರಲ್ಲಿ ಒಬ್ಬಳು ತನ್ನ ಕೈಯಲ್ಲಿ ನವಜಾತ ಶಿಶುವನ್ನು ಹಿಡಿದಿದ್ದರೆ, ಇನ್ನೊಬ್ಬಳ ಕೈಯಲ್ಲಿ ಚೀಲವಿತ್ತು.

ಅವರು ಸ್ಥಳಕ್ಕೆ ಬಂದ ಬಳಿಕ, ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡುತ್ತಾರೆ. ಕೆಲವರು ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದರಿಂದ, ಅವರು ಕೆಲ ಹೊತ್ತು ಕಾಯುತ್ತಾರೆ. ನಂತರ, ಸುತ್ತಮುತ್ತ ಯಾರೂ ಇಲ್ಲವೆಂದು ಖಚಿತವಾದ ತಕ್ಷಣ, ಹತ್ತಿರದಲ್ಲಿದ್ದ ಪಾನಿ-ಪುರಿ ಗಾಡಿಯ ಮೇಲೆ ಮಗುವನ್ನು ಇಟ್ಟು ಬಿಡುತ್ತಾರೆ. ಇದಾದ ಬಳಿಕ, ಯಾವುದೇ ಹಿಂಜರಿಕೆ ಇಲ್ಲದೆ ಕೇವಲ ಎರಡು ನಿಮಿಷಗಳಲ್ಲಿ ಅಲ್ಲಿಂದ ಹೊರಟುಹೋಗುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ.

ಪೊಲೀಸರ ತನಿಖೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಇಬ್ಬರು ಮಹಿಳೆಯರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

ಪ್ರಾಥಮಿಕ ವಿಚಾರಣೆಯಲ್ಲಿ, ಮಗುವಿನ ತಾಯಿ ಹಿಂದೆ ವಿಚ್ಛೇದನ ಪಡೆದಿದ್ದಾಳೆ ಎಂಬ ಮಾಹಿತಿ ದೊರೆತಿದೆ. ನಂತರ ಆಕೆ ಮತ್ತೊಬ್ಬ ಯುವಕನೊಂದಿಗೆ ಸಂಬಂಧ ಬೆಳೆಸಿದ್ದಳು. ಆದರೆ ಆ ಯುವಕ ನವಜಾತ ಶಿಶುವನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ, ಮಗು ತ್ಯಜಿಸುವ ನಿರ್ಧಾರ ಕೈಗೊಂಡಳು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಘಟನೆ ಮಾನವೀಯತೆ, ತಾಯಿ-ಮಗು ಸಂಬಂಧ ಮತ್ತು ಸಮಾಜದ ಜವಾಬ್ದಾರಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ನವಜಾತ ಶಿಶುವನ್ನು ಇಂತಹ ರೀತಿಯಲ್ಲಿ ಬಿಟ್ಟುಹೋಗುವುದು ಕಾನೂನುಬದ್ಧವಾಗಿಯೂ ಅಪರಾಧವಾಗಿದ್ದು, ನೈತಿಕವಾಗಿಯೂ ಖಂಡನೀಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜ್ಯೋತಿಷಿ ಅಶೋಕ್ ಖರಾತ್ ಹಗರಣ: 250ಕ್ಕೂ ಅಧಿಕ ಅಶ್ಲೀಲ ವಿಡಿಯೋ, 'ಯೋನಿ ಪೂಜೆ' ಹೆಸರಲ್ಲಿ ಹೆಣ್ಣುಮಕ್ಕಳ ಶೋಷಣೆ!
ಉದ್ಯಮಿ ಗೌತಮ್ ಸಿಂಘಾನಿಯ ಜತೆಗಿದ್ದು, ಮಾಲ್ಡೀವ್ಸ್ ಬೋಟ್‌ ದುರಂತದಲ್ಲಿ ನಾಪತ್ತೆಯಾಗಿರುವ ದಂತಕಥೆ ಹರಿ ಸಿಂಗ್‌ ಯಾರು?