
ನವದೆಹಲಿ(ಏ.15): ಈಗಾಗಲೇ ದೇಶದಾದ್ಯಂತ ಎರಡನೇ ಹಂತದ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಮೇ 3ವರೆಗೆ ವಿಸ್ತರಿಸಲಾಗಿದೆ. ಪಿಎಂ ಮೋದಿ ಈ ಸಂಬಂಧ ಅಧಿಕೃತ ಘೋಷಣೆ ಮಾಡಿದ್ದು, ಇಂದು ಬುಧವಾರ ಲಾಕ್ಡೌನ್ ಸಂಬಂಧಿತ ಮಾರ್ಸೂಚಿಯನ್ನು ಆಯಾ ರಾಜ್ಯಗಳು ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ದಾರೆ. ಈ ಮಾರ್ಗಸೂಚಿ ಹೀಗಿರಬಹುದು ಎನ್ನಲಾಗಿದೆ.
- ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ. ಲಾಕ್ಡೌನ್ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಸಾಧ್ಯತೆ
- ಕೊರೋನಾ ಸೋಂಕು ಇಲ್ಲದ ಜಿಲ್ಲೆಗಳ ಒಳಗೆ ಬಸ್ ಸಂಚಾರ, ವಾಣಿಜ್ಯ- ವ್ಯಾಪಾರ ವಹಿವಾಟು ಆರಂಭ ನಿರೀಕ್ಷೆ
- ಅಂತರಜಿಲ್ಲಾ ಬಸ್, ವಾಹನಗಳ ಸಂಚಾರ ನಿರ್ಬಂಧ ಮುಂದುವರಿಕೆ. ಶಾಲಾ- ಕಾಲೇಜುಗಳ ರಜೆ ವಿಸ್ತರಣೆ ಖಚಿತ
ಮೇ. 3ವರೆಗೆ ದೇಶದಾದ್ಯಂತ ಲಾಕ್ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!
- ಸರಕು ಸಾಗಣೆಗೆ ದೇಶಾದ್ಯಂತ ಮುಕ್ತ ಅವಕಾಶ. ಲಾರಿ ದುರಸ್ತಿ ಗ್ಯಾರೇಜ್, ಹೆದ್ದಾರಿ ಡಾಬಾಗಳ ಆರಂಭ ಸಂಭವ
- ಔಷಧ ಪೂರೈಕೆ ವ್ಯತ್ಯಯ ತಪ್ಪಿಸಲು ಸಾಮಾಜಿಕ ಅಂತರದೊಂದಿಗೆ ಔಷಧ ಕಂಪನಿಗಳನ್ನು ತೆರೆಯಲು ಅವಕಾಶ ಸಾಧ್ಯತೆ
- ಸೋಂಕು ನಿಯಂತ್ರಣಕ್ಕೆ ಬಂದಿರುವ ಕಡೆ ಮದ್ಯದಂಗಡಿ ತೆರೆಯುವ ನಿರ್ಧಾರ ರಾಜ್ಯಗಳ ವಿವೇಚನೆಗೆ ಬಿಡುವ ಸಂಭವ
- ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬಿತ್ತನೆ, ಕಟಾವು, ಜಮೀನು ಕೆಲಸ ಮಾಡಲು ರೈತರಿಗೆ ಸಮ್ಮತಿ ಸೂಚಿಸುವ ನಿರೀಕ್ಷೆ
- ಮೀನುಗಾರಿಕೆ, ಮೀನು ಮಾರಾಟ, ಸಾಗಣೆ, ಮೀನುಗಾರಿಕೆಗೆ ಸಂಬಂಧಿಸಿದ ಕ್ಷೇತ್ರಗಳಿಗೆ ವಿನಾಯಿತಿ ದೊರೆವ ಸಂಭವ
- ಸಣ್ಣ ಉದ್ದಿಮೆಗಳು, ಕಾರ್ಖಾನೆಗಳಲ್ಲಿ ಸೀಮಿತ ನೌಕರರೊಂದಿಗೆ ಉತ್ಪಾದನೆ ಪುನಾರಂಭಿಸಲು ಅವಕಾಶ ಲಭಿಸುವ ಸಂಭವ
- ಎಪಿಎಂಸಿ ಮಾರುಕಟ್ಟೆ, ಸಗಟು ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡಲು ಅವಕಾಶ ನಿರೀಕ್ಷೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ