ಧೂಳು ಹಿಡಿಯುತ್ತಿದೆ ವೆಂಟಿಲೇಟರ್; ಮಾಧ್ಯಮ ವರದಿ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ!

Published : May 13, 2021, 09:57 PM IST
ಧೂಳು ಹಿಡಿಯುತ್ತಿದೆ ವೆಂಟಿಲೇಟರ್; ಮಾಧ್ಯಮ ವರದಿ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ!

ಸಾರಾಂಶ

ವೆಂಟಿಲೇಟರ್ ತಾಂತ್ರಿಕ ಧೋಷ ಕುರಿತ ಮಾಧ್ಯಮ ವರದಿ ಪಿಎಂ ಕೇರ್ಸ್ ಅಡಿಯಲ್ಲಿ ರವಾನಿಸಿದ ವೆಂಟಿಲೇಟರ್ ಕುರಿತು ಸ್ಪಷ್ಟನೆ

ನವದೆಹಲಿ(ಮೇ13): ಕೊರೋನಾ ವಕ್ಕರಿಸಿದ ಬಳಿಕ ಕೇಂದ್ರ ಸರ್ಕಾರ ದೇಶದ ಆಸ್ಪತ್ರೆ ಮೂಲ ಸೌಕರ್ಯ, ಅತ್ಯಾಧುನಿಕ ಸಲಕರಣೆಗಳ ಹೆಚ್ಚಿಸುವಿಕೆಯತ್ತ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಪಂಜಾಬ್‌ನ ಫರೀದ್‌ಕೋಟ್‌ನ ಜಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೇಂದ್ರ ಸರ್ಕಾರ ಕಳಹಿಸಿರುವ ವೆಂಟಿಲೇಟರ್ ತಾಂತ್ರಿಕ ದೋಷ ಕಾರಣ ಧೂಳು ಹಿಡಿಯುತ್ತಿವೆ ಅನ್ನೋ ಮಾಧ್ಯಮ ವರದಿ ಭಾರಿ ಸದ್ದು ಮಾಡಿದೆ. ಇದೀಗ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಧೂಳು ಹಿಡಿಯುತ್ತಿವೆ ಪಿಎಂ ಕೇರ್ಸ್‌ ಫಂಡ್‌ನಿಂದ ಖರೀದಿಸಿದ 251 ವೆಂಟಿಲೇಟರ್ಸ್‌!.

ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಲ್ಲಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆ ಕಾಡಿತ್ತು. ಇನ್ನು ವಿದೇಶದಿಂದ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿ ಆಗಲಿಲ್ಲ. ಈ ವೇಳೆ  ಮೇಕ್ ಇನ್ ಇಂಡಿಯಾ  ವೆಂಟಿಲೇಟರ್‌ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿತ್ತು.  ಹಲವರು ಮೊದಲ ಬಾರಿಗೆ ವೆಂಟಿಲೇಟರ್‌ಗಳ ತಯಾರಕರಾಗಿದ್ದರು.  ಸೀಮಿತ ಸಮಯದಲ್ಲಿ ತಾಂತ್ರಿಕ ಪ್ರದರ್ಶನ ಮತ್ತು ಕ್ಲಿನಿಕಲ್  ಪ್ರಕ್ರಿಯೆ ನಡೆಸಿ ವೆಂಟಿಲೇಟರ್ ಉತ್ಪಾದಿಸಲಾಗಿತ್ತು.

ಕೇಂದ್ರ ಸರ್ಕಾರ ರವಾನಿಸಿದ ವೆಂಟಿಲೇಟರ್ ಅಳವಡಿಸಿದ 7 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಏಪ್ರಿಲ್ 11, 2021ರಂದು ಪತ್ರ ಬರೆದಿದ್ದಾರೆ. ಶೀಘ್ರದಲ್ಲಿ ವೆಂಟಿಲೇಟರ್ ಬಳಕೆ ಮಾಡುವಂತೆ ಪತ್ರದಲ್ಲಿ ಕೋರಲಾಗಿತ್ತು.  ಫರಿದ್‌ಕೋಟ್‌ ಆಸ್ಪತ್ರೆಗೆ ಕಳುಹಿಸಲಾದ ವೆಂಟಿಲೇಟರ್ ಪೈಕಿ, 88 ವೆಂಟಿಲೇಟರ್‌ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)  ಕಳುಹಿಸಿದೆ. ಇನ್ನು 200 ವೆಂಟಿಲೇಟರ್‌ಗಳನ್ನು ಸಿವಿ ಕಂಪನಿ ಕಳುಹಿಸಿದೆ.

ನಾಲ್ವರ ಸಾವಿನ ಬೆನ್ನಲ್ಲೇ ವೆಂಟಿಲೇಟರ್‌ ಖರೀದಿಗೆ ಮುಂದಾದ ಗದಗ ಜಿಲ್ಲಾಡಳಿತ

ಕೆಲ ವೆಂಟಿಲೇಟರ್‌ನಲ್ಲಿದ್ದ ತಾಂತ್ರಿಕ ದೋಷಗಳನ್ನು ಬಿಇಎಲ್ ಎಂಜಿನೀಯರ್ ಆಸ್ಪತ್ರೆಗೆ ತೆರಳಿ ಸರಿಪಡಿಸಿದ್ದಾರೆ. ಆದರೆ ಸರಿಯಾದ ಬಳಕೆ, ಗ್ಯಾಸ್ ಪ್ರೆಶರ್  ಸೇರೇದಂತೆ ಹಲವು ತಾಂತ್ರಿಕ ವಿಚಾರಗಳನ್ನು ಆಸ್ಪತ್ರೆ ನಿರ್ಲಕ್ಷ್ಯ ವಹಿಸುತ್ತಿದೆ. ಜೊತೆಗೆ ಹಲವರಿಗೆ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣವಾಗುತ್ತಿದೆ. 

ವೆಂಟಿಲೇಟರ್ ಬಳಕೆ ಹಾಗೂ ನಿರ್ವಹಣೆ ಕುರಿತು ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಪಂಜಾಬ್‌ನ ಅನೇಕ ಆಸ್ಪತ್ರೆಗಳು ಇದನ್ನು ಪಾಲಿಸಿಲ್ಲ. ಹೀಗಾಗಿ ವೆಂಟಿಲೇಟರ್ ಕಾರ್ಯನಿರ್ವಹಿಸದಿರುವ ಸಂದರ್ಭ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವೆಂಟಿಲೇಟರ್ ಅಗತ್ಯವನ್ನು ಪೂರೈಸುವಲ್ಲಿ ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಬೆಂಬಲವನ್ನು ಬಿಇಎಲ್ ಮುಂದುವರಿಸಲಿದೆ . 

ಕೇಂದ್ರ ಆರೋಗ್ಯ ಸಚಿವಾಲಯವು ಮೇ 9, 21 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ವೆಂಟಿಲೇಟರ್ ಉತ್ಪಾದಕರ ಸಹಾಯವಾಣಿ ಸಂಖ್ಯೆಗಳನ್ನು ದಾಖಲಿಸಿದೆ.   ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಕಂಡುಬಂದಲ್ಲಿ ಅದನ್ನ ಪರಿಹರಿಸಲು ನೊಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ವೈದ್ಯಕೀಯ ಸಲಕರಣೆಯ ಶೇಕಜಾ 100 ರಷ್ಟು ಪ್ರಯೋಜನ ಪಡೆದುಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!