ದೀದಿ ಸ್ಕೂಟಿ ನಂದಿ ಗ್ರಾಮದಲ್ಲಿ ಪತನ: ಮೋದಿ

Published : Mar 08, 2021, 09:20 AM IST
ದೀದಿ ಸ್ಕೂಟಿ ನಂದಿ ಗ್ರಾಮದಲ್ಲಿ ಪತನ: ಮೋದಿ

ಸಾರಾಂಶ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ| ದೀದಿ ಸ್ಕೂಟಿ ನಂದಿಗ್ರಾಮದಲ್ಲಿ ಪತನ: ಮೋದಿ

ಕೋಲ್ಕತ್ತ(ಮಾ.08): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ದೀದಿ ಸ್ಕೂಟಿ ನಂದಿಗ್ರಾಮದಲ್ಲಿ ಪತನವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿನ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿ ಪ್ರತಿಭಟನೆಯಲ್ಲಿ ಮಮತಾ ಅವರಿದ್ದ ಸ್ಕೂಟರ್‌ ಬ್ಯಾಲೆನ್ಸ್‌ ತಪ್ಪಿದ್ದನ್ನು ಉಲ್ಲೇಖಿಸಿ, ‘ಕೆಲ ದಿನಗಳ ಹಿಂದೆ ದೀದಿ ಸ್ಕೂಟಿ ಓಡಿಸಿದಾಗ ಅವರ ಸುರಕ್ಷತೆಗಾಗಿ ನಾವೆಲ್ಲಾ ಪ್ರಾರ್ಥಿಸಿದ್ದೆವು. ಅದೃಷ್ಟವಶಾತ್‌ ಅವರು ಬೀಳಲಿಲ್ಲ.

ಒಂದು ವೇಳೆ ಅವರೇನಾದರೂ ಬಿದ್ದಿದ್ದರೆ, ರಾಜ್ಯದಲ್ಲಿ ಸ್ಕೂಟಿ ಉತ್ಪಾದಿಸಿದವರು ಮಮತಾ ಶತ್ರುವಾಗಬೇಕಿತ್ತು. ಒಂದು ವೇಳೆ ಅದೇನಾದರೂ ತಮಿಳುನಾಡಿನಲ್ಲಿ ಉತ್ಪಾದನೆಯಾಗಿದ್ದರೆ, ಅವರು ತಮಿಳುನಾಡನ್ನೇ ತಮ್ಮ ಶತ್ರು ಎನ್ನುತ್ತಿದ್ದರು. ಅಚ್ಚರಿಯ ವಿಷಯವೆಂದರೆ ಭವಾನಿಪುರದ ಬದಲು ಅವರ ಸ್ಕೂಟಿ ನಂದಿಗ್ರಾಮದತ್ತ ತಿರುವು ಪಡೆದುಕೊಂಡಿದೆ. ನಾನು ಯಾರಿಗೂ ನೋವುಂಟು ಮಾಡಲು ಇಷ್ಟಪಡಲ್ಲ. ಆದರೆ ದೀದಿಯ ಸ್ಕೂಟಿ ಬೇಕುಬೇಕೆಂದು ನಂದಿ ಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಲಿ?’ ಎಂದು ಕುಟುಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು