ಕೊರೋನಾ ಏರಿಕೆಯಿಂದ ಸೆಮಿ ಲಾಕ್ಡೌನ್‌ : ಕಠಿಣ ಕ್ರಮ

Kannadaprabha News   | Asianet News
Published : Feb 19, 2021, 09:53 AM IST
ಕೊರೋನಾ ಏರಿಕೆಯಿಂದ ಸೆಮಿ ಲಾಕ್ಡೌನ್‌ :  ಕಠಿಣ ಕ್ರಮ

ಸಾರಾಂಶ

ಸೋಂಕು ನಿಯಂತ್ರಣಕ್ಕೆ ಬಂದು ಸಹಜ ಸ್ಥಿತಿ ಮರಳುತ್ತಿದೆ ಎನ್ನುವ ಹಂತದಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ 2ನೇ ಅಲೆ ಹೊಸ ಆತಂಕ ಹುಟ್ಟುಹಾಕಿದೆ.

ಮುಂಬೈ (ಫೆ.19): ರಾಜ್ಯದಲ್ಲಿ ಹೊಸ ಕೊರೋನಾ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಬೆನ್ನಲ್ಲೇ, ಆಯ್ದ ನಗರಗಳಲ್ಲಿ ಸೆಮಿ ಲಾಕ್ಡೌನ್‌ಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇನ್ನೇನು ಸೋಂಕು ನಿಯಂತ್ರಣಕ್ಕೆ ಬಂದು ಸಹಜ ಸ್ಥಿತಿ ಮರಳುತ್ತಿದೆ ಎನ್ನುವ ಹಂತದಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡಿರುವ 2ನೇ ಅಲೆ ಹೊಸ ಆತಂಕ ಹುಟ್ಟುಹಾಕಿದೆ. ಜೊತೆಗೆ ಮಹಾರಾಷ್ಟ್ರದ ಈ ಬೆಳವಣಿಗೆ ನೆರೆಯ ಕರ್ನಾಟಕಕ್ಕೂ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕಳೆದ ಒಂದೂವರೆ ತಿಂಗಳನಿಂದ ಹಂತಹಂತವಾಗಿ ಇಳಿಕೆ ದಾಖಲಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಹೊಸ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ದಾಖಲಾಗಿದೆ. ಜೊತೆಗೆ ಕೇರಳ ಹಿಂದಿಕ್ಕಿ ರಾಜ್ಯ ಮತ್ತೆ ಮೊದಲ ಸ್ಥಾನಕ್ಕೇರಿದೆ. ಬುಧವಾರ ರಾಜ್ಯದಲ್ಲಿ 4787 ಹೊಸ ಪ್ರಕರಣ ದಾಖಲಾಗಿದ್ದು, ಇದು ಈ ವರ್ಷದ ಗರಿಷ್ಠ ದೈನಂದಿನ ಪ್ರಮಾಣವಾಗಿತ್ತು.

10 ದಿನ ಬಂದ್‌:  ಯವತ್ಮಾಲ್‌ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಂದಲೇ ಜಾರಿಗೆ ಬರುವಂತೆ 10 ದಿನಗಳ ಲಾಕ್ಡೌನ್‌ ಘೋಷಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಶಾಲಾ,ಕಾಲೇಜು, ಕೋಚಿಂಗ್‌ ಸೆಂಟರ್‌ ಮುಚ್ಚಿರಲಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ವಿವಾಹಕ್ಕೆ ಗರಿಷ್ಠ 50 ಜನರ ಮಿತಿ ವಿಧಿಸಲಾಗಿದೆ. ಆದರೆ ಅಗತ್ಯ ವಸ್ತುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಶ್ವಾಸಕೋಶದ ಮೇಲೆ ಕೊರೋನಾ ಎಫೆಕ್ಟ್ ಪತ್ತೆಗೆ IISC ತಂತ್ರಾಂಶ ...

ವಾರಾಂತ್ಯದ ನಿರ್ಬಂಧ:  ಇನ್ನು ಪಕ್ಕದ ಅಮರಾವತಿಯಲ್ಲಿ ವಾರಾಂತ್ಯದ ಲಾಕ್ಡೌನ್‌ ಪ್ರಕಟಿಸಲಾಗಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಲಾಕ್ಡೌನ್‌ ಜಾರಿಯಲ್ಲಿರಲಿದೆ. ಮಾಲ್‌, ಹೋಟೆಲ್‌, ರೆಸ್ಟೋರೆಂಟ್‌ಗಳ ತೆರೆದಿರಬಹುದಾದ ಅವಧಿಯನ್ನು ರಾತ್ರಿ 10ರ ಬದಲಾಗಿ 8ಕ್ಕೆ ಇಳಿಸಲಾಗಿದೆ. ಈಜುಕೊಳ, ಒಳಾಂಗಣ ಕ್ರೀಡೆಗೂ ನಿಷೇಧ ಇರಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗರಿಷ್ಠ 5 ಜನ ಭಾಗವಹಿಸಬಹುದು.

ಕಠಿಣ ನಿಯಮ:  ರಾಜಧಾನಿ ಮುಂಬೈನಲ್ಲಿ ಎಲ್ಲಾ ಸಾರ್ವಜನಿಕ ಸ್ಥಳ, ಕಚೇರಿಗಳಲ್ಲಿ ಮಾಸ್ಕ್‌ ಧಾರಣೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್‌ ಧರಿಸದೇ ಇದ್ದರೆ ಸ್ಥಳದಲ್ಲೇ 200 ರು. ದಂಡ ವಿಧಿಸಲಾಗುವುದು ಎಂದು ಬೃಹನ್ಮುಂಬೈ ಪಾಲಿಕೆ ಪ್ರಕಟಿಸಿದೆ.

ಜನರು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂಥ ನಿಯಮ ಪಾಲಿಸದೇ ಹೋದಲ್ಲಿ ರಾಜ್ಯದ ಜನತೆ ಮತ್ತೆ ಲಾಕ್ಡೌನ್‌ ಎದುರಿಸಬೇಕಾಗಿ ಬರುತ್ತದೆ ಎಂದು ಮುಖಮಂತ್ರಿ ಉದ್ಧವ್‌ ಠಾಕ್ರೆ ಮಂಗಳವಾರ ಎಚ್ಚರಿಕೆ ನೀಡಿದ್ದರು. ಮತ್ತೊಂದೆಡೆ ಸ್ಥಳೀಯ ರೈಲು ಸೇವೆ ಆರಂಭವಾದ ಬಳಿಕ ರಾಜಧಾನಿ ಮುಂಬೈನಲ್ಲೂ ಹೊಸ ಪ್ರಕರಣಗಳಲ್ಲಿ ಗಣನೀಯ ಏರಿಕೆ ದಾಖಲಾಗುತ್ತಿದ್ದು, ಸೀಮಿತ ಲಾಕ್ಡೌನ್‌ ಜಾರಿ ಬಗ್ಗೆ ಬೃಹನ್ಮುಂಬೈ ಪಾಲಿಕೆ ಮೇಯರ್‌ ಮಂಗಳವಾರ ಸುಳಿವು ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು