ದೆಹಲಿ, ಹರ್ಯಾಣ ಭಾಗದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಹೊರಬಂದ ಜನ!

Published : Jul 05, 2021, 11:17 PM IST
ದೆಹಲಿ, ಹರ್ಯಾಣ ಭಾಗದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಹೊರಬಂದ ಜನ!

ಸಾರಾಂಶ

ಅನ್‌ಲಾಕ್‌ನಿಂದ ಸಹಜಸ್ಥಿತಿಗೆ ಮರಳುತ್ತಿದ್ದ ಬೆನ್ನಲ್ಲೇ ಭೂಕಂಪನ ಶಾಕ್ ಹರ್ಯಾಣ, ರಾಷ್ಟ್ರ ರಾಜಧಾನಿ ವಲಯದಲ್ಲಿ ಕಂಪಿಸಿದ ಭೂಮಿ ಭೂಕಂಪನಕ್ಕೆ ಮನೆ, ಕಟ್ಟಟದಿಂದ ಹೊರಬಂದ ಜನ

ನವದೆಹಲಿ(ಜು.05): ಕೊರೋನಾ ಅನ್‌ಲಾಕ್‌ನಿಂದ ಜನಜೀವನ ಸಹಸ ಸ್ಥಿತಿಗೆ ಮರಳುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿ, ಹರ್ಯಾಣ ಭಾಗದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.7 ರಷ್ಟು ತೀವ್ರತೆಯ ಲಘು ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ಕೋಣೆ ಕಂಪಿಸುತ್ತಿದೆ, ಇದು ಭೂಕಂಪನ; ಲೈವ್‌ನಲ್ಲಿ ರಾಹುಲ್ ಗಾಂಧಿ ಹೇಳಿದ ಮಾತು ವೈರಲ್!.

ರಾತ್ರಿ 10.40ರ ವೇಳೆ ದೆಹಲಿಯ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಭೂಕಂಪದ ಮೂಲ ಕೇಂದ್ರ ಹರ್ಯಾಣದ ಝಜ್ಜಾರ್ ಎಂದು ಮಾಪನ ಕೇಂದ್ರ ಹೇಳಿದೆ. ಸುಮಾರು ರಾತ್ರಿ 10.36ರ ವೇಳೆ ಝಜ್ಜಾರ್‌ನಲ್ಲಿ ಮೊದಲು ಲಘು ಭೂಮಿ ಕಂಪಿಸಿದೆ. 

ಹಿಮಾಲಯ ಸಂಕಟ, ಉತ್ತರ ಭಾರತಕ್ಕೆ ಕಾದಿದ್ಯಾ ಕಂಟಕ?

ಈ ಕಂಪನದ ಪ್ರಭಾವ ರಾಷ್ಟ್ರ ರಾಜಧಾನಿ ವಲಯಕ್ಕೂ ಹರಡಿದೆ. ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಲಘು ಭೂಕಂಪನವಾಗಿತ್ತು. ತಜಕಿಸ್ತಾನದಲ್ಲಿ 6.3 ರಷ್ಟು ತೀವ್ರತೆ ಭೂಕಂಪನ ಸಂಭವಿಸಿತ್ತು. ಇದರಿಂದ ದೆಹಲಿ ವಲಯದಲ್ಲೂ ಭೂಮಿ ಲಘುವಾಗಿ ಕಂಪಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು