2 ವರ್ಷ ಕೃಷಿ ಕಾಯ್ದೆ ಟ್ರೈ ಮಾಡಿ ನೋಡಿ: ರಾಜನಾಥ್‌ ಸಿಂಗ್

Kannadaprabha News   | Asianet News
Published : Dec 26, 2020, 09:27 AM ISTUpdated : Dec 26, 2020, 09:53 AM IST
2 ವರ್ಷ ಕೃಷಿ ಕಾಯ್ದೆ ಟ್ರೈ ಮಾಡಿ ನೋಡಿ: ರಾಜನಾಥ್‌ ಸಿಂಗ್

ಸಾರಾಂಶ

 ಲಾಭದಾಯಕ ಎನ್ನಿಸದಿದ್ದರೆ ತಿದ್ದುಪಡಿಗೆ ಸಿದ್ಧ | ಧರಣಿನಿರತ ರೈತರಿಗೆ ಸಚಿವ ರಾಜನಾಥ್‌ ಭರವಸೆ 

ಪಿಟಿಐ ನವದೆಹಲಿ(ಡಿ.26): ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರೈತರು 2 ವರ್ಷ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಅವು ಲಾಭದಾಯಕ ಎನ್ನಿಸದಿದ್ದಲ್ಲಿ ಸರ್ಕಾರವು ಕಾಯ್ದೆಗಳ ತಿದ್ದುಪಡಿಗೆ ಸಿದ್ಧ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭರವಸೆ ನೀಡಿದ್ದಾರೆ.

ಶುಕ್ರವಾರ ರೈತರ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಧರಣಿನಿರತರೆಲ್ಲ ರೈತರು ಹಾಗೂ ರೈತರ ಮಕ್ಕಳು. ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ನಾನೂ ಒಬ್ಬ ರೈತನ ಮಗ. ಮೋದಿ ಸರ್ಕಾರವು ಯಾವುದೇ ರೈತ ವಿರೋಧಿ ನಿರ್ಣಯ ಕೈಗೊಳ್ಳುವುದಿಲ್ಲ’ ಎಂದರು.

9 ಕೋಟಿ ರೈತರ ಖಾತೆಗೆ ತಲಾ 2000: ಬಟನ್‌ ಒತ್ತಿ ಏಕಕಾಲಕ್ಕೆ 18 ಸಾವಿರ ಕೋಟಿ ಬಿಡುಗಡೆ

‘ಕೆಲವರು ರೈತರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇವರು ಹೇಳುವಂತೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ನಿಲ್ಲಲ್ಲ. ಈ ಕಾಯ್ದೆಗಳಾವುವೂ ರೈತ ವಿರೋಧಿಗಳಲ್ಲ’ ಎಂದು ಸ್ಪಷ್ಟಪಡಿಸಿದರು.

‘1-2 ವರ್ಷ ಈ ಕಾಯ್ದೆಗಳ ಜಾರಿಗೆ ಅವಕಾಶ ಕೊಡಿ. ಇವುಗಳು ಹೇಗಿವೆ ಎಂದು ಪ್ರಾಯೋಗಿಕವಾಗಿ ನೋಡಿ. ಇವು ರೈತರ ಪರ ಕಾನೂನುಗಳಲ್ಲ ಎಂದು ನಿಮಗೆ ಅನ್ನಿಸಿದರೆ ನಮ್ಮ ಪ್ರಧಾನಿ ಮೋದಿ ಅವರು ಈ ಕಾಯ್ದೆಗಳ ತಿದ್ದುಪಡಿ ಮಾಡೇ ಮಾಡುತ್ತಾರೆ ಎಂದು ದೃಢಸ್ವರದಲ್ಲಿ ಹೇಳಬಯಸುತ್ತೇನೆ’ ಎಂದು ರಾಜನಾಥ್‌ ನುಡಿದರು. ಅಲ್ಲದೆ, ‘ರೈತರ ಜತೆ ಮಾತುಕತೆಗೆ ಈಗಲೂ ಸರ್ಕಾರ ಸಿದ್ಧವಿದೆ. ಅದಕ್ಕೇ ಮಾತುಕತೆಗೆ ಮತ್ತೆ ಆಮಂತ್ರಣ ಕಳಿಸಿದ್ದೇವೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!