Radia Tapes: ನೀರಾ ರಾಡಿಯಾಗೆ ಕ್ಲೀನ್ ಚಿಟ್ ನೀಡಿದ ಸಿಬಿಐ!

By Santosh NaikFirst Published Sep 21, 2022, 5:24 PM IST
Highlights

ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಅವರು ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾಧ್ಯಮದ ವ್ಯಕ್ತಿಗಳೊಂದಿಗೆ ಸಂಭಾಷಣೆಗಳನ್ನು ಧ್ವನಿಮುದ್ರಿಸಿದ ಆರೋಪ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದೆ.
 

ನವದೆಹಲಿ (ಸೆ.21): ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾಧ್ಯಮದ ವ್ಯಕ್ತಿಗಳೊಂದಿಗೆ ಸಂಭಾಷಣೆಗಳನ್ನು ಧ್ವನಿಮುದ್ರಿಸಿದ ಪ್ರಕರಣದಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಲೀನ್ ಚಿಟ್ ನೀಡಿದೆ. ಒಂದು ದಶಕದ ಹಿಂದೆ ಆದಾಯ ತೆರಿಗೆ ಇಲಾಖೆಯು ಟೇಪ್ ಮಾಡಿದ 8,000ಕ್ಕೂ ಅಧಿಕ ಫೋನ್ ಸಂಭಾಷಣೆಗಳ ವಿಷಯಗಳನ್ನು ತನಿಖೆ ಮಾಡಲು ಸಿಬಿಐ 14 ಪ್ರಾಥಮಿಕ ವಿಚಾರಣೆಗಳನ್ನು (ಪಿಇ) ಪ್ರಾರಂಭ ಮಾಡಿತ್ತು. ಈಗ, ಪ್ರಾಥಮಿಕ ವಿಚಾರಣೆಗಳಲ್ಲಿ ಯಾವುದೇ ಮಾಹಿತಿ ಸಿಗದ ಕಾರಣ ಎಲ್ಲಾ 14 ಪಿಇಗಳನ್ನು ಅಂತ್ಯ ಮಾಡಲಾಗಿದೆ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಮತ್ತು ಅವರ ಗ್ರಾಹಕರ ನಡುವಿನ ಟೇಪ್ ಸಂಭಾಷಣೆಗಳು ಸೋರಿಕೆಯಾದ ನಂತರ ದೇಶಾದ್ಯಂತ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಆ ಬಳಿಕ, ಅವರು ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮತ್ತು ಟಾಟಾ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ವಿವಿಧ ಹೈ-ರೋಲರ್ ಕ್ಲೈಂಟ್‌ಗಳನ್ನು ನಿರ್ವಹಿಸುವ ಅದರ ಘಟಕಗಳನ್ನು ಒಳಗೊಂಡಿರುವ ತನ್ನ ಪಿಆರ್‌ ವ್ಯವಹಾರವನ್ನು ಕೊನೆಗೊಳಿಸಿದರು.  2007ರ ನವೆಂಬರ್ 16ರಂದು ಆಗಿನ ಹಣಕಾಸು ಸಚಿವರ ದೂರಿನ ಮೇರೆಗೆ ರಾಡಿಯಾ ಅವರ ಫೋನ್‌ನ ಕಣ್ಗಾವಲಿನ ಭಾಗವಾಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗಿದೆ. ಒಂಬತ್ತು ವರ್ಷಗಳಲ್ಲಿ ಅವರು 300 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ನಡುವೆ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandracud) ನೇತೃತ್ವದ ಸುಪ್ರೀಂ ಕೋರ್ಟ್ (Supreme Court) ಪೀಠವು ನೀರಾ ರಾಡಿಯಾ (Niira Radia) ವಿರುದ್ಧ ರತನ್ ಟಾಟಾ (Ratan tata) ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಅರ್ಜಿಯಲ್ಲಿ, 84 ವರ್ಷದ ಕೈಗಾರಿಕೋದ್ಯಮಿಯು ಲಾಬಿಗಾರ್ತಿ ನೀರಾ ರಾಡಿಯಾ ಮತ್ತು ಟಾಟಾ ಗ್ರೂಪ್ ಮಾಲೀಕರು ಸೇರಿದಂತೆ ಇತರ ವ್ಯಕ್ತಿಗಳ ನಡುವಿನ ದೂರವಾಣಿ ಸಂಭಾಷಣೆಗಳನ್ನು ಮಾಧ್ಯಮಗಳು ಪ್ರಕಟಿಸಿದ ನಂತರ ತಮ್ಮ ಗೌಪ್ಯತೆಯ ಹಕ್ಕನ್ನು ಕೋರಿ ಕೇಸ್‌ ಹಾಕಿದ್ದರು.

ಪ್ರಕರಣದಲ್ಲಿ ಹಾಜರಿರುವ ವಕೀಲರಲ್ಲಿ ಸಿದ್ಧಾರ್ಥ್ ಲೂತ್ರಾ, ಎಎಸ್‌ಜಿ ಐಶ್ವರ್ಯ ಭಾಟಿ ಮತ್ತು ಪ್ರಶಾಂತ್ ಭೂಷಣ್ ಸೇರಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ಎಎಸ್‌ಜಿ ಭಾಟಿ ಅವರು ಖಾಸಗಿತನದ ಹಕ್ಕು ಬಂದ ನಂತರ ಏನೂ ಉಳಿದಿಲ್ಲ ಎಂದು ಹೇಳಿದರು, ಆದರೆ ಈ ಹಿಂದೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಲು ಆದೇಶವಿದೆ ಎಂದು ಹೇಳಿದ್ದರು. ಹಾಗದ್ದರೂ ಅರ್ಜಿದಾರ ಪ್ರಶಾಂತ್ ಭೂಷಣ್ ಪರ ವಕೀಲರು, ಅವರು ಇತರ ಪ್ರಕರಣಗಳಲ್ಲಿ ನಿರತರಾಗಿದ್ದಾರೆ ಮತ್ತು ಇದನ್ನು ವಾದಿಸಲು ಬಯಸುತ್ತಾರೆ ಎಂದು ಪೀಠಕ್ಕೆ ತಿಳಿಸಿದರು, ಈ ಪ್ರಕರಣವನ್ನು ಪೀಠವು ಅಂಗೀಕರಿಸಲು ಕಾರಣವಾಯಿತು.

ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಸೈಬರ್ ವಂಚನೆ!?

"ಈ ಎಲ್ಲಾ ಸಂಭಾಷಣೆಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್‌ನಿಂದ ಸಿಬಿಐಗೆ ನಿರ್ದೇಶಿಸಲಾಗಿತ್ತು. ಹದಿನಾಲ್ಕು ಪ್ರಾಥಮಿಕ ವಿಚಾರಣೆಗಳನ್ನು ದಾಖಲಿಸಲಾಗಿದೆ ಮತ್ತು ವರದಿಯನ್ನು ಮುಚ್ಚಿದ ಕವರ್‌ನಲ್ಲಿ ನಿಮ್ಮ ಮುಂದೆ ಇಡಲಾಗಿದೆ. ಅವುಗಳಲ್ಲಿ ಯಾವುದೇ ಅಪರಾಧ ಕಂಡುಬಂದಿಲ್ಲ. ಅದಲ್ಲದೆ, ಈಗ ಫೋನ್‌ ಟ್ಯಾಪಿಂಗ್‌ ಮಾರ್ಗಸೂಚಿಗಳೂ ಇವೆ ಎಂದು ಅಡೀಷನಲ್‌ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ವಾದಿಸಿದರು.

ಜನ ನೆಮ್ಮದಿಯಿಂದ ನಿದ್ರಿಸಲು ಪೆಗಾಸಸ್‌ನಂಥ ತಂತ್ರಾಂಶ ಕಾರಣ: ಇಸ್ರೇಲ್!

ಏನಿದು ಪ್ರಕರಣ: 10 ವರ್ಷದ ಹಿಂದೆ ದೇಶದ ಹಿರಿಯ ಕೈಗಾರಿಕೋದ್ಯಮಿಗಳು, ಪತ್ರಕರ್ತರು ಹಾಗೂ ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಅಧಿಕಾರಿಗಳ ಜೊತೆ ನೀರಾ ರಾಡಿಯಾ ನಡೆಸಿದ್ದ ದೂರವಾಣಿ ಮಾತುಕತೆ ಕದ್ದಾಲಿಕೆಯಾಗಿತ್ತು ಎನ್ನುವ ಆರೋಪ ಇದಾಗಿದೆ. ಯಾವುದೇ ಅಸ್ತಿತ್ವದಲ್ಲಿ ಇಲ್ಲದ ವೈಷ್ಣವಿ ಕಾರ್ಪೋರೇಟ್‌ ಕಮ್ಯುನಿಕೇಷನ್‌ ಎಂಬ ಸಾರ್ವಜನಿಕ ಸಂಪರ್ಕ ಸಂಸ್ಥೆಗೆ ತಾನು ಮಾಲೀಕಳು ಎಂದಿದ್ದ ನೀರಾ ರಾಡಿಯಾ ಉದ್ಯಮಿ ಮಖೇಶ್‌ ಅಂಬಾನಿ ಎನ್ನುವುದು 2008ರ ಫೋನ್‌ ಟ್ಯಾಪಿಂಗ್‌ ಹಾಗೂ 2009ರ ಫೋನ್‌ ಟ್ಯಾಪಿಂಗ್‌ನಲ್ಲಿ ದಾಖಲಾಗಿತ್ತು. ಈ ವಿವಾದಕ್ಕೆ ರಾಡಿಯಾ ಟೇಪ್‌ ಎಂದೇ  ಹೆಸರಿಸಲಾಗಿತ್ತು. ಆಡಿಯೋಗಳಲ್ಲಿ ಸಂಭಾಷಣೆಗಳು ಸೋರಿಕೆಯಾಗಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ವಿವರಣೆ ನೀಡಿರುವ ಪ್ರತಿಯನ್ನು ತಮಗೆ ನೀಡುವಂತೆ ಉದ್ಯಮಿ ರತನ್‌ ಟಾಟಾ ಅವರು ಕೂಡ ಸುಪ್ರೀ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ನೀರಾ ರಾಡಿಯಾ ಅವರೊಂದಿಗೆ ರತನ್‌ ಟಾಟಾ ಅವರ ಸಂಭಾಷನೆ ಸೋರಿಕೆಯಾಗಿದ್ದು ಹಾಗೂ ಅದರ ಸಂಪೂರ್ಣ ವಿವರಗಳು 2010ರಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಇದರಿಂದ ಕೋರ್ಟ್‌ ಮೆಟ್ಟಿಲೇರಿದ್ದ ರತನ್‌ ಟಾಟಾ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಕೇಸ್‌ ದಾಖಲಿಸಿದ್ದರು.

click me!