
ಭುವನೇಶ್ವರ (ಫೆ.15): ಅಂಗಾಂಗ ದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಹತ್ವದ ಆದೇಶ ನೀಡಿದ್ದಾರೆ. ಈ ಕುರಿತಾಗಿ ಗುರುವಾರ ಪ್ರಕಟಣೆ ನೀಡಿದ ಸಿಎಂ ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಇತರರ ಪ್ರಾಣ ಉಳಿಸುವಂಥ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಕಳೆದ ವರ್ಷ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ರಾಜ್ಯದ ಅಂಗಾಂಗ ದಾನಿಗಳ ಅಂತ್ಯಕ್ರಿಯೆಗೆ ತಮ್ಮ ಸರ್ಕಾರ ಸಂಪೂರ್ಣ ಸರ್ಕಾರಿ ಗೌರವವನ್ನು ನೀಡುವುದಾಗಿ ಘೋಷಿಸಿದ್ದರು. ಒಡಿಶಾ ಸರ್ಕಾರವು ಅಂಗಾಂಗಗಳನ್ನು ದಾನ ಮಾಡಲು ರಾಜ್ಯದ ಜನರನ್ನು ಪ್ರೋತ್ಸಾಹಿಸುತ್ತಿದೆ. 2019ರಲ್ಲಿ ಸಿಎಂ ಪಟ್ನಾಯಕ್ ಅವರು ಗಂಜಾಂ ಜಿಲ್ಲೆಯ ಸೂರಜ್ ಎನ್ನುವ ವ್ಯಕ್ತಿಯ ಹೆಸರನಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಸೂರಜ್ ಮೃತಪಟ್ಟ ಬಿಕ ಆತನ ತಂದೆ-ತಾಯಿ ಮಗನ ಆರು ಅಂಗಗಳನ್ನು ಇತರರಿಗೆ ದಾನ ಮಾಡುವ ಮೂಲಕ ಜೀವನಗಳನ್ನು ಉಳಿಸಿದ್ದರು. ವೇಳೆ ಸೂರಜ್ ಅವರ ಪಾಲಕರನ್ನು ಭೇಟಿಯಾಗಿದ್ದ ನವೀನ್ ಪಟ್ನಾಯಕ್, ಅವರ ಸ್ಪೂರ್ತಿದಾಯಕ ಕಾರ್ಯಕ್ಕಾಗಿ 5 ಲಕ್ಷ ರೂಪಾಯಿಯ ನಗದು ಸಹಾಯವನ್ನೂ ಘೋಷಣೆ ಮಾಡಿದ್ದರು.
ಸೂರಜ್ ಒಡಿಶಾದ ಗಂಜಾಂ ಜಿಲ್ಲೆಯ ಭಂಜನಗರ್ ನಿವಾಸಿಯಾಗಿದ್ದರು. 2019ರ ಅಕ್ಟೋಬರ್ 29ರಂದು, ಅವರು ಸೂರತ್ನಲ್ಲಿ ಕೆಲಸ ಮಾಡುತ್ತಿದ್ದಾಗ, ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಸುಧಾರಿಸದ ಕಾರಣ ನವೆಂಬರ್ 2 ರಂದು ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.
ಐದು ವಾಷ್ನಲ್ಲೇ ಮಬ್ಬಾದ ದುಬಾರಿ ಜೀನ್ಸ್, ಆದಿತ್ಯ ಬಿರ್ಲಾ ಫ್ಯಾಷನ್ ಮೇಲೆ ಕೇಸು ಹಾಕಿ 5 ಸಾವಿರ ರೀಫಂಡ್ ಪಡೆದ!
ಈ ಹಂತದಲ್ಲಿ ಸೂರಜ್ನ ತಂದೆ ಬಾಬುಲಿ ಸೇಥಿ ಮತ್ತು ತಾಯಿ ಗೀತಾಂಜಲಿ ಸೇಥಿ ಇತರರ ಜೀವವನ್ನು ಉಳಿಸುವ ಪ್ರಯತ್ನದಲ್ಲಿ ಅವನ ಅಂಗಗಳಾದ ಹೃದಯ, ಯಕೃತ್ತು, ಮೂತ್ರಪಿಂಡಗಳು ಮತ್ತು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದರು. ಅವರ ಹೃದಯವನ್ನು ಮುಂಬೈನ ಫೋರ್ಟಿಸ್ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಯಿತು ಮತ್ತು ಮಹಿಳೆಯ ದೇಹಕ್ಕೆ ಕಸಿ ಮಾಡಲಾಯಿತು, ಅವರ ಎರಡೂ ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಅಹಮದಾಬಾದ್ನಲ್ಲಿ ಮೂವರ ದೇಹಕ್ಕೆ ಕಸಿ ಮಾಡಲಾಯಿತು ಮತ್ತು ಅವರ ಕಣ್ಣುಗಳನ್ನು ಸೂರತ್ನಲ್ಲಿ ಇಬ್ಬರಿಗೆ ದಾನ ಮಾಡಲಾಗಿತ್ತು.
Chamarajanagar: ಪತ್ನಿಯ 'ಕರಿಮಣಿ ಮಾಲೀಕ ನೀನಲ್ಲ..' ರೀಲ್ಸ್, ಪತಿಯ ಆತ್ಮಹತ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ