Kesavananda Bharati Case: ಮೂಲಭೂತ ಹಕ್ಕುಗಳ ಐತಿಹಾಸಿಕ ತೀರ್ಪಿನ ವೆಬ್‌ಪೇಜ್‌ ಬಿಡುಗಡೆ!

Published : Apr 25, 2023, 09:48 PM ISTUpdated : Apr 25, 2023, 10:02 PM IST
Kesavananda Bharati Case: ಮೂಲಭೂತ ಹಕ್ಕುಗಳ ಐತಿಹಾಸಿಕ  ತೀರ್ಪಿನ ವೆಬ್‌ಪೇಜ್‌ ಬಿಡುಗಡೆ!

ಸಾರಾಂಶ

ದೇಶದ ಸಂವಿಧಾನದ ಮೂಲ ವಿನ್ಯಾಸಕ್ಕೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು’ ಪ್ರಕಟವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾನೂನು ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಆ ಪ್ರಕರಣದ ಸಂಪೂರ್ಣ ವಾದ ಹಾಗೂ ವಿವರಗಳುಳ್ಳ ವೆಬ್‌ ಪುಟವನ್ನು ಸುಪ್ರೀಂಕೋರ್ಚ್‌ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಚ್‌ ವೆಬ್‌ಸೈಟಿನಲ್ಲಿ ಈ ಪುಟ ಲಭ್ಯವಿದೆ.

ಪಿಟಿಐ ನವದೆಹಲಿ (ಏ.25) : ದೇಶದ ಸಂವಿಧಾನದ ಮೂಲ ವಿನ್ಯಾಸಕ್ಕೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು’ ಪ್ರಕಟವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾನೂನು ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಆ ಪ್ರಕರಣದ ಸಂಪೂರ್ಣ ವಾದ ಹಾಗೂ ವಿವರಗಳುಳ್ಳ ವೆಬ್‌ ಪುಟವನ್ನು ಸುಪ್ರೀಂಕೋರ್ಚ್‌ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ವೆಬ್‌ಸೈಟಿನಲ್ಲಿ ಈ ಪುಟ ಲಭ್ಯವಿದೆ.

ದೇಶದ ಸಂವಿಧಾನದಲ್ಲಿರುವ ಯಾವುದೇ ಅಂಶಗಳಿಗೆ ಬೇಕಾದರೂ ಸಂಸತ್ತು ತಿದ್ದುಪಡಿ ತರಬಹುದು ಎಂಬ ಅಭಿಪ್ರಾಯ 1973ರವರೆಗೂ ಇತ್ತು. ಆದರೆ, ಕಾಸರಗೋಡಿನ ಕೇಶವಾನಂದ ಭಾರತಿ(Kesavananda Bharati Case) ಸ್ವಾಮಿಗಳು ಭೂಸುಧಾರಣೆ ಕಾಯ್ದೆಯಡಿ ಕೇರಳ ಸರ್ಕಾರ ತಮ್ಮ ಮಠದ ಆಸ್ತಿ ವಶಪಡಿಸಿಕೊಳ್ಳಲು ಬಂದಾಗ ಧಾರ್ಮಿಕ ಹಕ್ಕಿನ ಪ್ರಶ್ನೆ ಮುಂದಿಟ್ಟು ಕೋರ್ಟ್ ಹೋಗಿದ್ದರು.

ವೆಬ್‌ಪುಟವನ್ನು ಇಲ್ಲಿ ಪರಿಶೀಲಿಸಿ: http://judgments.ecourts.gov.in/KBJ/

ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ 13 ನ್ಯಾಯಾಧೀಶರ ಪೀಠ 7:6 ಬಹುಮತದಲ್ಲಿ ಕೇಶವನಾಂದ ಸ್ವಾಮಿಗಳ ಪರ ತೀರ್ಪು ನೀಡಿತ್ತು. ಆ ತೀರ್ಪಿನಲ್ಲಿ ‘ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತಿಗೆ ಅಧಿಕಾರ ಇದೆಯಾದರೂ, ಸಂವಿಧಾನದ ಮೂಲ ವಿನ್ಯಾಸವನ್ನು ರೂಪಿಸಿರುವ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು( fundamental rights ), ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ ವಿಂಗಡಣೆ, ಜಾತ್ಯತೀತತೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿ ತರುವಂತಿಲ್ಲ’ ಎಂದು ಹೇಳಲಾಗಿತ್ತು. ಅದು ‘ಮೂಲ ವಿನ್ಯಾಸ’ ತೀರ್ಪು ಅಥವಾ ‘ಮೂಲಭೂತ ಹಕ್ಕುಗಳ’ ತೀರ್ಪು ಎಂದು ಖ್ಯಾತಿ ಪಡೆದಿದೆ.

ಗರ್ಭಪಾತ ಬಯಸುವ ಅಪ್ರಾಪ್ತರ ಗುರುತು ಬಹಿರಂಗಪಡಿಸಬೇಕಿಲ್ಲ, ಐತಿಹಾಸಿಕ ತೀರ್ಪಿನಲ್ಲಿದೆ ಸ್ಪಷ್ಟ ಉಲ್ಲೇಖ!

ಈ ಐತಿಹಾಸಿಕ ತೀರ್ಪಿಗೆ (historical judgment)ಸೋಮವಾರ 50 ವರ್ಷ ಸಂದ ಹಿನ್ನೆಲೆಯಲ್ಲಿ ಸಂಶೋಧಕರು, ಕಾನೂನು ಅಭ್ಯಾಸಿಗಳು ಹಾಗೂ ಆಸಕ್ತರಿಗೆ ಅನುಕೂಲವಾಗಲಿ ಎಂದು ಪ್ರಕರಣದ ಎಲ್ಲಾ ವಾದಗಳು, ಲಿಖಿತ ವಾದಗಳು ಹಾಗೂ ತೀರ್ಪನ್ನು ಒಳಗೊಂಡ ವೆಬ್‌ ಪುಟವನ್ನು ಸುಪ್ರಿಂಕೋರ್ಚ್‌ ಬಿಡುಗಡೆ ಮಾಡಿದೆ.

ಐತಿಹಾಸಿಕ ತೀರ್ಪು ನೀಡಿದ ಪಾಕ್‌ ಕೋರ್ಟ್‌, ಅತ್ಯಾಚಾರ ಸಂತ್ರಸ್ತ ಮಹಿಳೆಯ ಕನ್ಯತ್ವ ಪರೀಕ್ಷೆ ರದ್ದು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!