ತಂದೆ ನಿಧನದ ಬಳಿಕ ಪೊಲೀಸ್ ಕ್ಲರ್ಕ್ ಉದ್ಯೋಗ ಪಡೆದ ಯುವತಿಗೆ UPSCನಲ್ಲಿ 150ನೇ ರ‍್ಯಾಂಕ್!

Published : Sep 25, 2021, 09:48 PM ISTUpdated : Sep 25, 2021, 09:53 PM IST
ತಂದೆ ನಿಧನದ ಬಳಿಕ ಪೊಲೀಸ್ ಕ್ಲರ್ಕ್ ಉದ್ಯೋಗ ಪಡೆದ ಯುವತಿಗೆ UPSCನಲ್ಲಿ 150ನೇ ರ‍್ಯಾಂಕ್!

ಸಾರಾಂಶ

ಕೇಂದ್ರ ಲೋಕಸೇವಾ ಆಯೋಗ ಪರೀಕ್ಷಾ ಫಲಿತಾಂಶ ಪ್ರಕಟ ತಂದೆ ನಿಧನದಿಂದ ಕೆಲಸ ಪಡೆದ ಮಹಿಳೆಗೆ ರ‍್ಯಾಂಕ್ ಐಐಟಿ ಪದವೀದರನ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ  

ನವದೆಹಲಿ(ಸೆ.25): ಕೇಂದ್ರ ಲೋಕಸೇವಾ ಆಯೋಗ ಪರೀಕ್ಷಾ(Union Public Service Commission) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಹಲವು ವಿಶೇಷತೆಗಳು ಇವೆ. ಕೇರಳದ(Kerala) ಯುವತಿ 150ನೇ ರ‍್ಯಾಂಕ್ ಪಡೆಯುವ ಮೂಲಕ ಎಲ್ಲರ ಗಮನಸೆಳೆದಿದ್ದಾಳೆ. ತಂದೆ ನಿಧನದ ಬಳಿಕ ಪೊಲೀಸ್(police) ಇಲಾಖೆ ನೀಡಿದ ಕ್ಲರ್ಕ್ ಹುದ್ದೆ ಪಡೆದ ಮಿನ್ನು ಪಿಎಂ ಇದೀಗ UPSC ರ‍್ಯಾಂಕ್ ಮೂಲಕ ಉನ್ನತ ಹುದ್ದೆಗೆ ಭಡ್ತಿ ಪಡೆಯಲಿದ್ದಾರೆ.

ಮಲೆನಾಡ ಪ್ರತಿಭೆ ಐಎಎಸ್ ಪರೀಕ್ಷೆಯಲ್ಲಿ ರ‍್ಯಾಂಕ್

ತಂದೆ ನಿಧನದ ಬಳಿಕ 2012ರಲ್ಲಿ ಮಿನ್ನುಗೆ ಪೊಲೀಸ್ ಇಲಾಖೆ ಕ್ಲರ್ಕ್ ಹುದ್ದೆ ನೀಡಿತ್ತು. ಸಂಕಷ್ಟದಲ್ಲಿದ್ದ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಯವತಿ ಮಿನ್ನು ಕ್ಲರ್ಕ್ ಹುದ್ದೆ ಆಹ್ವಾನ ಸ್ವೀಕರಿಸಿದರು. ಆದರೆ ಮಿನ್ನುಗೆ ಇದು ತಂದೆಯ ನಿಧನದಿಂದ ಸಿಕ್ಕಿದ ಕೆಲಸ. ನನ್ನ ಪ್ರತಿಭಯಿಂದ ಪಡೆದ ಕೆಲಸವಲ್ಲ. ಇಷ್ಟಕ್ಕೆ ನಾನು ಸೀಮಿತವಾಗಬಾರದು. ನನ್ನ ಸಾಮರ್ಥ್ಯ ಇರಲೇಬೇಕು ಎಂದು ಲೋಕಸೇವಾ ಆಯೋಗ ಪರೀಕ್ಷೆ(UPSC) ಅಭ್ಯಾಸದಲ್ಲಿ ತೊಡಗಿದ್ದಳು. 

UPSC ಪರೀಕ್ಷೆ ಬರೆದ ಮಿನ್ನುಗೆ 150ನೇ ಸ್ಥಾನ ಪಡೆದಿದ್ದಾರೆ.  2015ರಿಂದ  UPSC ಪರೀಕ್ಷೆ ಅಭ್ಯಾಸ ಆರಂಭಿಸಿದ ಮಿನ್ನು ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಮಿನ್ನು ಪಿಎಂ 2017ರಲ್ಲಿ ಪ್ರಮುಖ ಪರೀಕ್ಷೆ ಪಾಸ್ ಮಾಡಿದ್ದಾರೆ. ಆದರೆ ಸಂದರ್ಶದನಲ್ಲಿ 13 ಅಂಕಗಳಿಂದ ಅವಕಾಶ ಕಳೆದುಕೊಂಡರು. ಛಲಬಿಡದ ಮಿನ್ನು ಇದೀಗ ಅದ್ಭುತ ಸಾಧನೆ ಮೂಲಕ ಉತ್ತೀರ್ಣರಾಗಿದ್ದಾರೆ.

 

2015 UPSC ಟಾಪರ್ ತಂಗಿಗೂ ರ‍್ಯಾಂಕ್..! ದಲಿತ ಸಹೋದರಿಯರ ಸಾಧನೆ

30 ವರ್ಷದ ಮಿನ್ನು ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ನೀಡಿದ ಪ್ರೋತ್ಸಾಹ ಹಾಗೂ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮಿನ್ನು ಹೇಳಿದ್ದಾರೆ.

ಶುಭಂ ಕುಮಾರ್(ಐಐಟಿ)
ಇದೇ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಸಾಧಕರ ಪಟ್ಟಿ ದೊಡ್ಡದಿದೆ. ಕುತೂಹಲ ವಿಚಾರ ಅಂದರೆ ಬಾಂಬೆ ಐಐಟಿ ಪದವೀಧರ ಶುಭಂ ಕುಮಾರ್ ಅಗ್ರಸ್ಥಾನದ ಮೂಲಕ UPSC ಉತ್ತೀರ್ಣರಾಗಿದ್ದಾರೆ. 

ತಂದೆಯ ಕನಸು ನನಸು ಮಾಡಿದ ಪುತ್ರ: ಯುಪಿಎಸ್ಸಿಯಲ್ಲಿ ಹುಬ್ಳಿ ಹುಡುಗನ ಸಾಧನೆ..!

ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನೀಯರಿಂಗ್ ಪಡೆದಿರುವ ಶುಭಂ ಕುಮಾರ್ UPSC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಮಾನಶಾಸ್ತ್ರ ವಿಷಯವನ್ನು ಐಚ್ಚಿಕ ವಿಷಯವಾಗಿ ತೆಗೆದುಕೊಂಡು ಅರ್ಹತೆ ಪಡೆದುಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು