ಸಿನಿಮಾವೇ ಸ್ಪೂರ್ತಿ, ಕೇರಳದ ಶಾಲೆಗಳಲ್ಲಿ ಇನ್ನು ಬ್ಯಾಕ್‌ ಬೆಂಚ್‌ಗಳೇ ಇಲ್ಲ!

Published : Jul 11, 2025, 12:38 PM IST
Kerala School

ಸಾರಾಂಶ

ಶಾಲೆಗಳು ಹೊಸ ವ್ಯವಸ್ಥೆಗಳ ಫೋಟೋಗಳನ್ನು ಕ್ಲಿಕ್‌ ಮಾಡಿದ್ದಲ್ಲದೆ ಅದನ್ನು ಸಿನಿಮಾ ನಿರ್ದೇಶಕ ವಿನೇಶ್‌ ವಿಶ್ವನಾಥ್‌ ಅವರ ಇನ್ಸ್‌ಟಾಗ್ರಾಮ್‌ ಟ್ಯಾಗ್‌ ಮಾಡಿದ್ದವು. 

ಕೊಚ್ಚಿ (ಜು.11): ಸಿನಿಮಾ ಅತ್ಯಂತ ಶಕ್ತಿಶಾಲಿ ಮಾಧ್ಯಮ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮಲಯಾಳಂ ಸಿನಿಮಾ ಸ್ಥಾನಾರ್ಥಿ ಶ್ರೀಕುಟ್ಟನ್‌ನ ಕ್ಲೈಮ್ಯಾಕ್ಸ್‌ ದೃಶ್ಯದಿಂದ ಪ್ರೇರಿತರಾಗಿ ಕೇರಳದ ಹಲವು ಶಾಲೆಗಳು ಈಗ ಶಾಲಾ ಮಕ್ಕಳಿಗಾಗಿ ಹೊಸ ರೀತಿಯ ಆಸನ ವ್ಯವಸ್ಥೆಯನ್ನು ಮಾಡುತ್ತಿವೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಒಂದರ ಹಿಂದೆ ಒಂದು ಬೆಂಚ್‌ ಇರುವುದು ವಾಡಿಕೆ. ಇದರಿಂದ ಬ್ಯಾಕ್‌ ಬೆಂಚರ್ಸ್‌ ವಿದ್ಯಾರ್ಥಿಗಳು ಫ್ರಂಟ್‌ ಬೆಂಚ್‌ ವಿದ್ಯಾರ್ಥಿಗಳು ಎನ್ನುವ ಕಂದಕವೇ ಸೃಷ್ಟಿಯಾಗಿದೆ. ಆದರೆ, ಹೊಸ ಆಸನ ವ್ಯವಸ್ಥೆಯಲ್ಲಿ ಕೇರಳದ ಶಾಲೆಗಳಲ್ಲಿ ಬ್ಯಾಕ್‌ ಬೆಂಚರ್ಸ್‌ಗಳೇ ಇರೋದಿಲ್ಲ.

ಹೊಸ ಆಸನ ವ್ಯವಸ್ಥೆ ಅರ್ಧವೃತ್ತದಂತೆ ಕಾಣುತ್ತಿದ್ದು ಎಲ್ಲಾ ವಿದ್ಯಾರ್ಥಿಗಳು ಇಂಗ್ಲೀಷ್‌ 'ಯು' ಲೆಟರ್‌ ರೀತಿಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮಧ್ಯದಲ್ಲಿ ನಿಂತ ಶಿಕ್ಷಕರನ್ನು ನೋಡಲು ಸಾಧ್ಯವಾಗಲಿದೆ. ಈ ರಚನೆಯಲ್ಲಿ, ಯಾವುದೇ ವಿದ್ಯಾರ್ಥಿಯನ್ನು ಕಡೆಗಣಿಸಲಾಗಿದೆ ಅಥವಾ ನಿರ್ಲಕ್ಷಿಸಲಾಗಿದೆ ಎಂದು ಭಾವಿಸುವ ಸಾಧ್ಯತೆಗಳು ಬಹುತೇಕ ಅಸಾಧ್ಯ, ಮತ್ತು ಯಾವುದೇ ವಿದ್ಯಾರ್ಥಿಯನ್ನು ಮರೆಮಾಡಲಾಗುವುದಿಲ್ಲವಾದ್ದರಿಂದ ಶಿಕ್ಷಕರು ಸಹ ಪ್ರತಿಯೊಬ್ಬ ವಿದ್ಯಾರ್ಥಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತದೆ.

ಈ ತರಗತಿಯ ಆಸನ ವ್ಯವಸ್ಥೆಯನ್ನು ವಿನೇಶ್ ವಿಶ್ವನಾಥ್ ಅವರು ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ಸ್ಥಾನಾರ್ಥಿ ಶ್ರೀಕುಟ್ಟನ್‌ನಲ್ಲಿ ತೋರಿಸಿದ್ದಾರೆ. ಇದು ನಾಲ್ಕು ತುಂಟ ವಿದ್ಯಾರ್ಥಿಗಳ ಕಥೆಯ ಸುತ್ತ ಸುತ್ತುವ ಮಲಯಾಳಂ ಚಲನಚಿತ್ರವಾಗಿದೆ. ಈ ಚಲನಚಿತ್ರವು 2024ರ ನವೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು, ಆದರೆ ಜೂನ್ 20 ರಂದು OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ.

ಶಾಲೆಗಳು ಹೊಸ ವ್ಯವಸ್ಥೆಗಳ ಫೋಟೋಗಳನ್ನು ಕ್ಲಿಕ್‌ ಮಾಡಿದ್ದಲ್ಲದೆ ಅದನ್ನು ಸಿನಿಮಾ ನಿರ್ದೇಶಕ ವಿನೇಶ್‌ ವಿಶ್ವನಾಥ್‌ ಅವರ ಇನ್ಸ್‌ಟಾಗ್ರಾಮ್‌ ಟ್ಯಾಗ್‌ ಮಾಡಿದ್ದವು. ಇದನ್ನು ನೋಡಿದ ಬಳಿಕ ವಿನೇಶ್‌ಗೆ ಇದು ತಮ್ಮ ಚಿತ್ರದಿಂದ ಸ್ಫೂರ್ತಿ ಪಡೆದುಕೊಂಡ ಅಂಶ ಎನ್ನುವುದು ಗೊತ್ತಾಗಿದೆ.

ಸ್ಥಳೀಯ ವರದಿಗಳ ಪ್ರಕಾರ, ಕೊಲ್ಲಂ ಜಿಲ್ಲೆಯ ವಳಕೋಮ್‌ನ ಆರ್‌ವಿವಿ ಎಚ್‌ಎಸ್‌ಎಸ್ ಹೊಸ ಆಸನ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ಶಾಲೆಗಳಲ್ಲಿ ಒಂದಾಗಿದೆ. ಇದನ್ನು ಇಲ್ಲಿಯವರೆಗೆ ಅಳವಡಿಸಿಕೊಂಡಿರುವ ಇತರ ಶಾಲೆಗಳಲ್ಲಿ ಕಣ್ಣೂರಿನ ಪಪ್ಪಿನಿಸ್ಸೆರಿ ವೆಸ್ಟ್ ಎಲ್‌ಪಿ ಶಾಲೆ, ಕಣ್ಣೂರಿನ ಅಂಡೂರ್ ಎಎಲ್‌ಪಿ ಶಾಲೆ, ತ್ರಿಶೂರ್‌ನ ಆರ್‌ಸಿಸಿ ಎಲ್‌ಪಿಎಸ್ ಪೂರ್ವ ಮಾಂಗಡ್, ಪಾಲಕ್ಕಾಡ್‌ನ ತೋಲನೂರಿನ ಜಿಎಚ್‌ಎಸ್‌ಎಸ್ ಮತ್ತು ಕೊಲ್ಲಂನ ವಲಕೋಡ್‌ನ ಎನ್‌ಎಸ್‌ವಿ ವಿಎಚ್‌ಎಸ್‌ಎಸ್ ಸೇರಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು