ಇಂದು ಕಾರ್ಗಿಲ್‌ ವಿಜಯ ದಿವಸ: 3 ಯೋಜನೆಗೆ ಚಾಲನೆ

Kannadaprabha News   | Kannada Prabha
Published : Jul 26, 2025, 08:32 AM IST
Kargil Vijay Diwas

ಸಾರಾಂಶ

1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್‌ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.

ದ್ರಾಸ್‌: 1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್‌ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.

ಮೊದಲನೆಯದಾಗಿ, ದೇಶಕ್ಕಾಗಿ ಮಡಿದ ಹುತಾತ್ಮರಿಗೆ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಲು ‘ಇ-ಶ್ರದ್ಧಾಂಜಲಿ’ ಎಂಬ ಪೋರ್ಟಲ್‌ ಆರಂಭಿಸಲಾಗುವುದು. ಈ ಮೂಲಕ, ಜನರಲ್ಲಿ ಯೋಧರ ತ್ಯಾಗ-ಬಲಿದಾನದ ಬಗ್ಗೆ ಅರಿವು ಮೂಡಿಸಲಾಗುವುದು.

ಇನ್ನೊಂದು ಯೋಜನೆಯಡಿ, ಕಾರ್ಗಿಲ್‌ ಯುದ್ಧದ ರೋಚಕ ಕತೆಗಳನ್ನು ಕೇಳಲು ಕ್ಯುಆರ್‌ ಕೋಡ್‌ ಆಧರಿತ ಆಡಿಯೋ ಆ್ಯಪ್‌ ಬಿಡುಗಡೆ ಮಾಡಲಾಗುವುದು.

ಅಂತೆಯೇ 3ನೇ ಯೋಜನೆಯಾದ ‘ಇಂಡಸ್‌ ಪಾಯಿಂಟ್‌’ ಅಡಿ, ಬಟಾಲಿಕ್‌ ಸೆಕ್ಟರ್‌ ವರೆಗೆ ಹೋಗಿ, ಭಾರತ-ಪಾಕ್‌ ನಡುವೆ ಇರುವ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸೈನಿಕರ ಎಂಥ ಸ್ಥಿತಿಯಲ್ಲಿ ಹಗಲಿರುಳು ದೇಶ ಕಾಯುತ್ತಿರುತ್ತಾರೆ ಎಂಬುದನ್ನು ಮನವರಿಕೆ ಮಾಡಿಸಲಾಗುವುದು.

ನಟನೆಯನ್ನು ಬದಿಗಿಟ್ಟು ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಬಾಲಿವುಡ್ ಜನಪ್ರಿಯ ನಟ

ಬಾಲಿವುಡ್ ನ ಪ್ರಸಿದ್ಧ ನಟ ನಾನಾ ಪಾಟೇಕರ್ (Nana Patekar) ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಅವರು 40 ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಕೆಲಸದಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ, ನಾನಾ ಪರದೆಯ ಮೇಲೆ ಬಂದಾಗಲೆಲ್ಲಾ ಅವರ ವಿಭಿನ್ನ ನಟನೆಗೆ ಜನ ಮನಸೋತಿದ್ದಾರೆ. ಆದರೆ, ನಾನಾ ಕೇವಲ ಸಿನಿಮಾ ನಟ ಮಾತ್ರವಲ್ಲ, ಅವರು ಸೇನೆಯಲ್ಲೂ ಸಹ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಚಿತಾ.

ಹೌದು, ಕಾರ್ಗಿಲ್ ಯುದ್ಧದ (Kargil War)ಸಮಯದಲ್ಲಿ, ಭಾರತಕ್ಕೆ ಹೆಚ್ಚಿನ ಸೈನಿಕರ ಅಗತ್ಯವಿದ್ದಾಗ, ನಾನಾ ತಮ್ಮ ನಟನೆಯನ್ನು ಬದಿಗಿಟ್ಟು ದೇಶದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾನ್ ನಾಯಕ ಕೂಡ ಹೌದು. ಅವರು ನಟನೆಯ ಜೊತೆ ಕೆಲವು ವರ್ಷಗಳ ಕಾಲ ದೇಶ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

1991 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನಾ ಪಾಟೇಕರ್ ಅವರು ನಿರ್ವಹಿಸಿದ ಕರ್ತವ್ಯದ ಬಗ್ಗೆ ಇತ್ತೀಚೆಗೆ 'ದಿ ಲಾಲಾಂಟಾಪ್' ಗೆ ನೀಡಿದ ಸಂದರ್ಶನದಲ್ಲಿ ಕೇಳಲಾಯಿತು. ಆ ಸಂದರ್ಭದಲ್ಲಿ ಉತ್ತರಿಸಿದ ನಾನಾ ಪಾಟೇಕರ್ ಅವರು ಕ್ವಿಕ್ ರಿಯಾಕ್ಷನ್ ತಂಡದ ಸದಸ್ಯನಾಗಿದ್ದರು ಅನ್ನೋದನ್ನು ತಿಳಿಸಿದ್ದಾರೆ, ಇದು ಅತ್ಯಂತ ವಿಶೇಷ ಪಡೆಗಳಲ್ಲಿ ಒಂದಾಗಿದೆ. ನಮ್ಮ ಯುವಕರು ನಮ್ಮ ದೇಶದ ಶಕ್ತಿ. ದೇಶಕ್ಕಾಗಿ ಹೋರಾಡುವುದೇ ಒಂದು ಪುಣ್ಯದ ಕೆಲಸ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್