
ಪಾಟ್ನಾ( ಡಿ.8) ಭಾರತ್ ಬಂದ್ ಗೆ ಉತ್ತರ ಭಾರತದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕದ್ದರೆ ದಕ್ಷಿಣ ಭಾರತದಲ್ಲಿ ಅಂಥ ಪರಿಣಾಮ ಏನೂ ಕಂಡುಬರಲಿಲ್ಲ. ಆದರೆ ಈ ನವವಧು ಮಾತ್ರ ಭಾರತ ಬಂದ್ ನಿಂದ ಪಡಬಾರದ ಕಷ್ಟ ಅನುಭವಿಸಿದ್ದಾಳೆ.
ಬಿಹಾರದ ಸಮಸ್ತಿಪುರದಲ್ಲಿ ಬಂದ್ ಜೋರಾಗಿತ್ತು. ಪರಿಣಾಮ ಮದುವೆಗೆ ಸಿದ್ಧವಾಗಿದ್ದ ವಧು ಎರಡು ಕಿಮೀ ನಡೆದುಕೊಂಡು ದೇವಸ್ಥಾನ ತಲುಪಬೇಕಾಯಿತು .
ನಿಹಾರಿಕಾ ಮದುವೆ ಸಂಭ್ರಮದಲ್ಲಿ ತಾರೆಗಳ ದಂಡು.. ಮೆಗಾ ಇವೆಂಟ್!
ದೇವಾಲಯದಲ್ಲಿ ಪೂಜೆ ಸಲ್ಲಿಸಲು ವಧು ಹೊರಟಿದ್ದಾಳೆ. ಈ ವೇಳೆ ಆಕೆಯ ವಾಹನವನ್ನು ತಡೆಯಲಾಗಿದೆ. ಅನಿವಾರ್ಯವಾಗಿ ಕಾಲು ನಡಿಗೆಯಲ್ಲಿಯೇ ದೇವಾಲಯದ ಕಡೆ ಹೆಜ್ಜೆ ಹಾಕಿದ್ದಾರೆ. ಮುಂದೆ ಸಿಕ್ಕ ಆಟೋವೊಂದನ್ನು ಹಿಡಿದು ದೇವಾಲಯ ತಲುಪಿದ್ದಾರೆ,.
ವಧುವಿನ ಜತೆಗೆ ಅನೇಕ ಮಹಿಳೆಯರು ಇದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತೆ ವಾಪಸ್ ಬಂದು ಮದುವೆ ಮಂಟಪಕ್ಕೆ ತೆರಳಿದ್ದಾಳೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ