
ನವದೆಹಲಿ(ಡಿ.08): ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಿಂಪೆಡಯುಲ ರೈತರು ನಡೆಸುತ್ತಿರುವ ಪ್ರತಿಭಟನೆ, ಭಾರತ್ ಬಂದ್ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ಭಾರತ್ ಬಂದ್ ದಿನವೇ ಅಮಿತ್ ಶಾ, ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಇದೀಗ ರೈತ ನಾಯಕರು ಅಮಿತ್ ಶಾ ಬೇಟಿಯಾಗಿದ್ದಾರೆ.
ಭಾರತ್ ಬಂದ್ ನಡುವೆ ಸಂಜೆ 7 ಗಂಟೆಗೆ ರೈತ ನಾಯಕರ ಸಭೆ ಕರೆದ ಅಮಿತ್ ಶಾ!.
ಭೇಟಿಗೂ ಮುನ್ನ ರೈತರ ಸಂಘಟನೆ ನಾಯಕರು ಎಚ್ಚರಿಕೆ ನೀಡಿದ್ದಾರೆ. 3 ಕೃಷಿ ಮಸೂದೆಗಳನ್ನು ಹಿಂಪೆಡಯಲು ನಾವು ಒತ್ತಾಯಿಸಲಿದ್ದೇವೆ. ಇಲ್ಲಿ ಅಮಿತ್ ಶಾಗೆ ಕೇವಲ ಎರಡೇ ಆಯ್ಕೆಗಳನ್ನು ನೀಡುತ್ತೇವೆ. ನಮ್ಮ ಬೇಡಿಕೆಗೆ ಯೆಸ್ ಅಥವಾ ನೋ ಹೇಳುವ ಅವಕಾಶವಷ್ಟೇ ಎಂದು ರೈತ ನಾಯಕರು ಹೇಳಿದ್ದಾರೆ.
ಇದೇ ವೇಳೆ ನಾವು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಸೂಚಿಸಿದ ಬುರಾರಿಯಲ್ಲಿ ಪ್ರತಿಭಟನೆ ಮಾಡಿ ಹರ್ಯಾಣ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈತ ಮುಖಂಡ ಮನ್ಸಾ ರುದ್ರು ಸಿಂಗ್ ಹೇಳಿದ್ದಾರೆ.
ರೈತ ನಾಯಕರು ಹಾಗೂ ಅಮಿತ್ ಶಾ ನಡುವಿನ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಮಾತುಕತೆ ಫಲಪ್ರದವಾಗುತ್ತಾ? ರೈತರು ಪ್ರತಿಭಟನೆಗೆ ಅಂತ್ಯ ಹಾಡುತ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ