
ಉತ್ತರಾಖಂಡ(ಫೆ.10): ದುರ್ಘಟನೆಗೆ ಸಾಕ್ಷಿಯಾದ ತಪೋವನ ಬಳಿಯ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವುದು ಐಟಿಬಿಪಿ ಡಿಐಜಿಯೂ ಆಗಿರುವ ಕನ್ನಡತಿ ಅಪರ್ಣಾ ಕುಮಾರ್. ಎನ್ಟಿಪಿಎಸ್ ಟನಲ…ನಲ್ಲಿ ಕೆಸರು ತೆರವು ಕಾರ್ಯಾಚರಣೆ ಕುರಿತು ಅವರುಮಾತಾಡಿದ್ದಾರೆ.
ಪ್ರಶ್ನೆ: ಇವತ್ತು ಏನು ಕಾರ್ಯಾಚರಣೆ?
ಇಂದು ಒಳಗಡೆ ಕೆಸರನ್ನು ಹೊರತೆಗೆಯಲಾಗುತ್ತಿದೆ. ಇವತ್ತು 95 ಮೀಟರ್ ಒಳಗಡೆ ಹೋಗಿ ಕೆಸರು ತೆರವು ಮಾಡಿದ್ದೇವೆ. ನಮಗೆ ಸವಾಲಿನ ಕೆಲಸ ಅಂದ್ರೆ ಕೆಸರು ಹೊರಗಡೆ ತೆಗೆಯುತ್ತಿದ್ದಂತೆ ಒಳಗಡೆಯಿಂದ ಜಾಸ್ತಿ ಬರ್ತಾ ಇದೆ. ನಡೆದುಕೊಂಡು ಯಾರು ಒಳಗಡೆ ಹೋಗಲು ಆಗುತ್ತಿಲ್ಲ.
ಪ್ರಶ್ನೆ: ಬರೀ ಯಂತ್ರಗಳ ಬಳಕೆ ಏಕೆ?
ಬರೀ ಯಂತ್ರಗಳನ್ನು ಮಾತ್ರ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯಾಕೆಂದರೆ ನಾವು ಯಾರನ್ನಾದರೂ ಒಳಗೆ ಕಳುಹಿಸಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಕ್ಷಣಾ ಸಿಬ್ಬಂದಿಯೇ ಕೆಸರೊಳಗೆ ಒಳಗೆ ಸಿಕ್ಕಿ ಹಾಕಿಕೊಂಡರೇ ತೆರವು ಮಾಡೋದು ಕಷ್ಟವಾಗುತ್ತೆ.
ಪ್ರಶ್ನೆ: ಇನ್ನು ಎಷ್ಟು ಜನ ನಾಪತ್ತೆ?
ಇನ್ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಆಂಧ್ರಪ್ರದೇಶದ, ಉತ್ತರಾಖಂಡ್, ಹಿಮಾಚಲಪ್ರದೇಶ, ತೆಲಂಗಾಣ, ಯುಪಿ, ಗುಜರಾತ್ನಿಂದ ಬಂದು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಈಗ ನಾಪತ್ತೆಯಾಗಿದ್ದಾರೆ. ಕರ್ನಾಟಕದವರ ಬಗ್ಗೆ ಮಾಹಿತಿ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ