Tamil Nadu : ಪೌಲ್ಟ್ರಿ ಕಂಪನಿಯಲ್ಲಿ 300 ಕೋಟಿ ತೆರಿಗೆ ವಂಚನೆ ಪತ್ತೆ!

Kannadaprabha News   | Asianet News
Published : Nov 03, 2021, 09:39 AM ISTUpdated : Nov 03, 2021, 12:31 PM IST
Tamil Nadu :  ಪೌಲ್ಟ್ರಿ ಕಂಪನಿಯಲ್ಲಿ 300 ಕೋಟಿ ತೆರಿಗೆ ವಂಚನೆ ಪತ್ತೆ!

ಸಾರಾಂಶ

*ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೇವೆ ನೀಡುತ್ತಿರುವ ಕಂಪನಿ *ತಮಿಳುನಾಡು, ಕರ್ನಾಟಕ, ಕೇರಳದ 40 ಸ್ಥಳಗಳ ಮೇಲೆ ಐಟಿ ದಾಳಿ *ದಾಳಿ ವೇಳೆ ಲೆಕ್ಕ ಇಡದ 3.3 ಕೋಟಿ ರು. ನಗದು ಪತ್ತೆ

ನವದೆಹಲಿ (ನ.2) : ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತಮಿಳುನಾಡು ಮೂಲದ ಪೌಲ್ಟ್ರಿ  ಕಂಪನಿಯೊಂದು 300 ಕೋಟಿ ರು.ನಷ್ಟು ತೆರಿಗೆ ವಂಚನೆ ನಡೆಸಿರುವುದು ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ( Central Board of Direct Taxes) ಮಾಹಿತಿ ನೀಡಿದೆ. ಅ.27ರಂದು ಐಟಿ ಅಧಿಕಾರಿಗಳು, ತಮಿಳುನಾಡು (Tamil Nadu), ಕರ್ನಾಟಕ (Karnataka), ಕೇರಳದ (Kerala) 40 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಕಂಪನಿಯ ಅಧಿಕ ವೆಚ್ಚ ತೋರಿಸುವ ಮೂಲಕ, ಮಾರಾಟದ ದರ ಕಡಿಮೆ ತೋರಿಸುವ ಮೂಲಕ, ಉಪ ಉತ್ಪನ್ನಗಳ ಮಾರಾಟದ ಲೆಕ್ಕವನ್ನು ಮುಚ್ಚಿಡುವ ಮೂಲಕ 300 ಕೋಟಿ ರು. ತೆರಿಗೆ ವಂಚಿಸಿದೆ. ಹೀಗೆ ವಂಚಿಸಿದ ಹಣವನ್ನು ಸ್ಥಿರಾಸ್ತಿ ಖರೀದಿಸಲು ಮತ್ತು ಲೆಕ್ಕಕ್ಕೆ ಇಡದ ಇತರೆ ಕೆಲವು ವೆಚ್ಚಗಳನ್ನು ನಿರ್ವಹಿಸಲು ಬಳಸಿಕೊಳ್ಳಲಾಗಿದೆ.

Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ

ದಾಳಿ ವೇಳೆ ಲೆಕ್ಕ ಇಡದ 3.3 ಕೋಟಿ ರು. ನಗದು ಕೂಡಾ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಅ.27ರಂದು ಐಟಿ ಅಧಿಕಾರಿಗಳು ಕುಕ್ಕಟ ಉದ್ಯಮ, ಖಾದ್ಯ ತೈಲ, ಪಶು ಆಹಾರ ವಲಯದಲ್ಲಿ ತೊಡಗಿಸಿಕೊಂಡಿರುವ ಎಸ್‌ಕೆಎಂ ಗ್ರೂಪ್‌ ಆಫ್‌ ಕಂಪನಿಗಳ (SKM Group of companies) ಮೇಲೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಮಂಡಳಿಯ ಪ್ರಕಾರ, ಶೋಧ ಕಾರ್ಯಾಚರಣೆಯಲ್ಲಿ ಹಲವಾರು ದೋಷಾರೋಪಣೆಯ ದಾಖಲೆಗಳು, ಎಲೆಕ್ಟ್ರಾನಿಕ್ ಡೇಟಾ ರೂಪದಲ್ಲಿ ಸಿಕ್ಕಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮಹಾ ಉಪ ಮುಖ್ಯಮಂತ್ರಿಗೆ ಬೇನಾಮಿ ಆಸ್ತಿ ಸಂಕಷ್ಠ; 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ!

ದೇಶದಲ್ಲಿ ಶರದ್ ಪವಾರ್ ನೇತೃತ್ವದ NCP ಪಕ್ಷ ಹಾಗೂ ನಾಯಕರು ಭಾರಿ ಸದ್ದು ಮಾಡುತ್ತಿದ್ದಾರೆ. NCB ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ, ಇದೀಗ ಮತ್ತೊರ್ವ NCP ನಾಯಕ, ಮಹಾರಾಷ್ಟ್ರ(Maharashtra) ಮೈತ್ರಿ ಸರ್ಕಾರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಸರದಿ. ಈ ಬಾರಿ ಅಜಿತ್ ಪವಾರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಜಿತ್ ಪವಾರ್‌ಗೆ ಸೇರಿದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

24 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣ; SBI ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ ಅರೆಸ್ಟ್!

ಬೇನಾಮಿ ಆಸ್ತಿ ಹೊಂದಿರುವ ಅಜಿತ್ ಪವಾರ್‌ಗೆ ಇದೀಗ ಐಟಿ ಇಲಾಖೆ(Income Tax Department) ಶಾಕ್ ನೀಡಿದೆ. ಅಜಿತ್ ಪವಾರ್‌ಗೆ ಸೇರಿದೆ. ಆದರೆ ಅಜಿತ್ ಪವಾರ್ ಹೆಸರಲ್ಲಿ ಇಲ್ಲದ ಸುಮಾರು 1,000 ರೂಪಾಯಿ ಮೌಲ್ಯದ ಆಸ್ತಿಗಳನ್ನು ಐಟಿ ಇಲಾಖೆ ಸೀಝ್ ಮಾಡಿದೆ. ಇದೀಗ ಪವಾರ್ ಸಂಕಷ್ಟ ಹೆಚ್ಚಾಗಿದೆ.

ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್, ಹಬ್ಬದ ಸೀಸನ್ ಕಾರಣ?

ಮಹಾರಾಷ್ಟ್ರ, ಗೋವಾ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಲ್ಲಿರುವ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯೆ ಬೇನಾಮಿ ವಿಭಾಗ ಸೀಝ್ ಮಾಡಿದೆ. ದೆಹಲಿಯಲ್ಲಿನ 20 ಕೋಟಿ ಮೌಲ್ಯದ ಫ್ಲ್ಯಾಟ್, ಗೋವಾದಲ್ಲಿರುವ 250 ಕೋಟಿ ರೂಪಾಯಿ ಮೌಲ್ಯದ ರೆಸಾರ್ಟ್, ಮುಂಬೈನಲ್ಲಿರುವ 600 ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಕಾರ್ಖಾನೆ, ಮಹಾರಾಷ್ಟ್ರದಲ್ಲಿನ ಮನೆ, ಮುಂಬೈನ ಹೊರವಲ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗದಲ್ಲಿರುವ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಭೂಮಿ ಸೇರಿದಂತೆ ಒಟ್ಟು 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ