ಹಿಂದೂ ದೇವರಿಗೆ ಅವಮಾನ: ನಾಸ್ತಿಕ ನರೇಶ್‌ ಬಂಧನ

Published : Jan 01, 2023, 10:59 AM IST
ಹಿಂದೂ ದೇವರಿಗೆ ಅವಮಾನ: ನಾಸ್ತಿಕ ನರೇಶ್‌ ಬಂಧನ

ಸಾರಾಂಶ

ಅಯ್ಯಪ್ಪ ಹಾಗೂ ಇತರೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಾಸ್ತಿಕ ಬೈರಿ ನರೇಶ್‌ನನ್ನು ಶನಿವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ‘

ಹೈದರಾಬಾದ್‌: ಅಯ್ಯಪ್ಪ ಹಾಗೂ ಇತರೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಾಸ್ತಿಕ ಬೈರಿ ನರೇಶ್‌ನನ್ನು ಶನಿವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ‘ಭಾರತ್‌ ನಾಸ್ತಿಕ ಸಮಾಜ’ದ ಅಧ್ಯಕ್ಷನಾಗಿದ್ದ ನರೇಶ್‌ ಕೊಡಂಗಲ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಅಯ್ಯಪ್ಪ ದೇವರ ಜನನ, ವಿಷ್ಣು ಹಾಗೂ ಶಿವನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದ ವೀಡಿಯೋ ವೈರಲ್‌ ಆದ ಬಳಿಕ ರಾಜ್ಯಾದಂತ ಹಿಂದೂಗಳು ಹಾಗೂ ಅಯ್ಯಪ್ಪನ ಭಕ್ತರು ತೀವ್ರ ಆಕ್ರೋಶ ಹೊರಹಾಕಿ ನರೇಶ್‌ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಡಿ ನರೇಶ್‌ ವಿರುದ್ಧ ಹಲವಾರು ದೂರು ದಾಖಲಾಗಿದ್ದವು.
 

ಗುಣಪಡಿಸಲಾಗದ ಕಾಯಿಲೆಗಳನ್ನೂ ಹೇಳಹೆಸರಿಲ್ಲದಂತೆ ಮಾಡುವ ಅಶ್ವಿನಿ ಕುಮಾರರು!

ಕಿಡಿಗೇಡಿಗಳಿಂದ ದೇವರ ಮೂರ್ತಿ ಧ್ವಂಸ: ಭಜರಂಗದಳ, ಹಿಂದೂ ಕಾರ್ಯಕರ್ತರ ಆಕ್ರೋಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್