
ನವದೆಹಲಿ [ಜ.15]: ‘ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರಿಗೆ, ಆ ವಿಮಾನದ ಪೈಲಟ್ ಬೆದರಿಕೆ ಹಾಕಿ ಜೈಲಿಗೆ ಕಳಿಸುವ ಎಚ್ಚರಿಕೆ ನೀಡಿದ’ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೈಲಟ್ನನ್ನು ವಿಚಾರಣೆ ಮುಗಿಯುವ ತನಕ ಇಂಡಿಗೋ ಅಮಾನತಿನಲ್ಲಿರಿಸಿದೆ.
‘ನಾನು ಚೆನ್ನೈನಿಂದ ನನ್ನ 75 ವರ್ಷದ ತಾಯಿಯನ್ನು ಕರೆದುಕೊಂಡು ವಿಮಾನದಲ್ಲಿ ಬಂದೆ. ತಾಯಿಗೆ ನಡೆಯಲು ಆಗದ ಕಾರಣ ಏರ್ಪೋರ್ಟ್ಗೆ ಗಾಲಿಕುರ್ಚಿಯನ್ನು ತರಲಾಗಿತ್ತು. ವಿಮಾನ ಇಳಿಯುವ ಸಂದರ್ಭದಲ್ಲಿ ವಿಮಾನದಲ್ಲೇ ಗಾಲಿಕುರ್ಚಿ ತೆಗೆದುಕೊಂಡು ಬರಲು ಅವಕಾಶ ನೀಡಿ. ನನ್ನ ತಾಯಿಯನ್ನು ಕುಳ್ಳಿರಿಸಿ ಕರೆದುಕೊಂಡು ಹೋಗುವೆ ಎಂದು ಪೈಲಟ್ ಜಯಕೃಷ್ಣಗೆ ಮನವಿ ಮಾಡಿದೆ. ಆಗ ಆತ ನಮಗೆ ಬೆದರಿಕೆ ಹಾಕಿದ ಹಾಗೂ ರಾತ್ರಿಯಿಡೀ ಜೈಲಲ್ಲೇ ಕಳೆಯುತ್ತೀರಿ ಹುಷಾರ್ ಎಂದ’ ಎಂದು ಸುಪ್ರಿಯಾ ಉನ್ನಿ ನಾಯರ್ ಎಂಬ ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ.
ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ; ಸಂಜನಾಗೆ ನೋಟಿಸ್...
ಅಲ್ಲದೆ, ‘ನೀವು ಕೇವಲ 2 ಸಾವಿರ ಕೊಟ್ಟು ವಿಮಾನ ಪ್ರಯಾಣಕ್ಕೆ ಬಂದಿದ್ದೀರಿ. ಇಡೀ ವಿಮಾನವೇನೂ ನಿಮ್ಮದಲ್ಲ. ಇನ್ನು ಮುಂದೆ ವಿಮಾನ ಏರದಂತೆ ಮಾಡಿಬಿಡ್ತೀನಿ. ನಾನು ಈ ವಿಮಾನದ ಪೈಲಟ್. ನಾನು ನಿಮ್ಮನ್ನು ಬೆದರಿಸ್ತೇನೆ. ನನಗೇನೂ ನೀವು ಮಾಡ್ಕೋಳೋಕಾಗಲ್ಲ’ ಎಂದು ಕೂಗಾಡಿದ ಎಂದೂ ಸುಪ್ರಿಯಾ ಆರೋಪಿಸಿದ್ದಾರೆ.
ಈ ಟ್ವೀಟ್ ಗಮನಿಸಿದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ, ‘ಕ್ರಮ ಜರುಗಿಸಿ’ ಎಂದು ಇಂಡಿಗೋಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಡಿಗೋ, ‘ಪ್ರಕರಣದ ತನಿಖೆ ಕೈಗೊಂಡಿದ್ದೇವೆ. ಅಲ್ಲಿಯವರೆಗೆ ಪೈಲಟ್ನನ್ನು ಅಮಾನತಿನಲ್ಲಿ ಇರಿಸಲಾಗಿದೆ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ